Featured

ಬುಧದೋಷ ನಿವಾರಿಸಲು ಬುಧವಾರ ಗಣೇಶನನ್ನು ಪ್ರಾರ್ಥಿಸಿ -Vishwanews24

ಬುಧದೋಷ ನಿವಾರಿಸಲು ಬುಧವಾರ ಗಣೇಶನನ್ನು ಪ್ರಾರ್ಥಿಸಿ -Vishwanews24

ಎಲ್ಲಾ ಶುಭಕಾರ್ಯಗಳನ್ನು ಮಾಡುವ ಮೊದಲು ವಿಘ್ನೇಶ್ವರನನ್ನು ಮುಂದೆ ಯಾವುದೇ ಕಷ್ಟಗಳು ಬಾರದಿರಲಿ ಎಂದು ಬೇಡುತ್ತೇವೆ. ವಿದ್ಯೆ, ಬುದ್ಧಿ ಎಲ್ಲವನ್ನೂ ಕರುಣಿಸುವ ವರದಾತ ಗಣೇಶ. ಅದಲ್ಲೂ ಬುಧವಾರದ ದೇವರಾದ ಗಣೇಶನನ್ನು ಪ್ರಾರ್ಥಿಸಿದರೆ ನಿಮ್ಮ ಅದೃಷ್ಟವೇ ಬದಲಾಗುವುದು.

ಬುಧವಾರವನ್ನು ಪ್ರತಿನಿಧಿಸುವ ಗ್ರಹ ಬುಧ. ನಮ್ಮೆಲ್ಲಾ ದುಃಖವನ್ನು ದೂರ ಮಾಡಿ ಸಮೃದ್ಧಿಯನ್ನು ಕರುಣಿಸುವ ಗಣೇಶ ಬುಧವಾರದ ಆಡಳಿತ ದೇವರು. ಖಾಯಿಲೆ, ಬಡತನ ಅಥವಾ ಯಾವುದಾದರೂ ತೊಂದರೆಯಿಂದ ಮುಕ್ತರಾಗಲು ಭಕ್ತಿಯಿಂದ ಗಣೇಶನನ್ನು ಪೂಜಿಸಿದರೆ ಪ್ರಯೋಜನಕಾರಿ. ಹಾಗಾಗಿ ಬುಧವಾರದ ದಿನ ಈ ಪರಿಹಾರ ಕ್ರಮಗಳನ್ನು ಮಾಡಿದರೆ ನಿಮ್ಮ ಎಲ್ಲಾ ದುಃಖಗಳು ನಿವಾರಣೆಯಾಗುವುದು ಹಾಗೂ ಬುಧ ದೋಷ ದೂರವಾಗುವುದು.

ಪರಿಹಾರ ಕ್ರಮಗಳು

ಜೀವನದಲ್ಲಿ ಎದುರಾಗುವ ಅಡೆತಡೆಗಳು ಹಾಗೂ ಸವಾಲುಗಳನ್ನು ತೊಡೆದುಹಾಕಲು ಬುಧವಾರ ಗಣೇಶನಿಗೆ ಸಿಂಧೂರ ಅಥವಾ ಕುಂಕುಮವನ್ನು ಅರ್ಪಿಸಿ.

ಬುಧವಾರ ಗಣೇಶನ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವುದರಿಂದ ಜೀವನದಲ್ಲಿ ಸಮೃದ್ಧಿಯನ್ನು ಪಡೆಯಬಹುದು

ಗಣೇಶನಿಗೆ ಗರಿಕೆಯನ್ನು ಅರ್ಪಿಸುವುದರಿಂದ ಜೀವನದಲ್ಲಿ ಅದೃಷ್ಟವನ್ನು ಪಡೆಯಬಹುದು

ನಿಮ್ಮ ಹೃದಯದಲ್ಲಿ ಏನಾದರೂ ಆಸೆಗಳಿದ್ದಲ್ಲಿ, ಅದನ್ನು ಈಡೇರಿಸಲು ಬುಧವಾರ ಗಣೇಶ ದೇವಾಲಯಕ್ಕೆ ಭೇಟಿ ನೀಡಿ ಬೆಲ್ಲವನ್ನು ಅರ್ಪಿಸಿದರೆ ಖಂಡಿತವಾಗಿಯೂ ನಿಮ್ಮ ಆಸೆ ನೆರವೇರುವುದು

ವೃತ್ತಿಯಲ್ಲಿ ಹಾಗೂ ವ್ಯವಹಾರದಲ್ಲಿ ಉಂಟಾಗುವ ಅಡೆತಡೆಗಳನ್ನು ತೊಡೆದುಹಾಕಲು ಗಣೇಶ ರುದ್ರಾಕ್ಷವನ್ನು ಧರಿಸಿ, ಎಲ್ಲಾ ಸವಾಲುಗಳನ್ನು ತೊಡೆದುಹಾಕಲು ಇದು ಸಹಾಯಕ

ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅಥವಾ ಉತ್ತಮ ಅಂಕವನ್ನು ಗಳಿಸಲು ಬುಧವಾರ ಗಣೇಶನಿಗೆ ಹೆಸರು ಬೇಳೆಯ ಲಡ್ಡು ಅರ್ಪಿಸಿ

ಜೀವನದಲ್ಲಿ ಯಶಸ್ಸನ್ನು ಪಡೆಯಲು ಬುಧವಾರ ಹಸುವಿಗೆ ಹಸಿರು ಮೇವನ್ನು ನೀಡಿ

ಕಚ್ಚಾ ಹಾಲು ಹಾಗೂ ಪವಿತ್ರ ನೀರಿನಿಂದ ಸ್ನಾನ ಮಾಡುವಾಗ ಗಂಗೆಯ ಹೆಸರನ್ನು ಪಠಿಸಿ

ಬ್ರಾಹ್ಮಣರಿಗೆ ವಸ್ತ್ರದೊಂದಿಗೆ ಸಿಹಿಯನ್ನೂ ದಾನ ಮಾಡಿದರೆ ತುಂಬಾ ಒಳ್ಳೆಯದು

ಅದೃಷ್ಟವನ್ನು ಪಡೆಯಬೇಕೆಂದಿದ್ದರೆ ಗಣೇಶನಿಗೆ ಏಳು ತೆಂಗಿನಕಾಯಿಯಿಂದ ಮಾಡಿದ ಹಾರವನ್ನು ಹಾಕಬೇಕು

ಪ್ರತಿದಿನ ತುಳಸಿಗೆ ನೀರನ್ನು ಹಾಕಿ, ಒಂದು ತುಳಸಿ ಎಲೆಯನ್ನು ತಿನ್ನಬೇಕು

ಸ್ನಾನ ಮಾಡಿದ ನಂತರ ತುಪ್ಪಕ್ಕೆ ಬೆಲ್ಲವನ್ನು ಸೇರಿಸಿ ಮಿಶ್ರಣ ಮಾಡಿ ಗಣೇಶನಿಗೆ ಅರ್ಪಿಸಬೇಕು

ಬುಧ ದೋಷ

ಒಂಭತ್ತು ನವಗ್ರಹಗಳಲ್ಲಿ ಒಂದಾದ ಬುಧಗ್ರಹವು ಚರ್ಮ, ಬುದ್ಧಿವಂತಿಕೆ ಹಾಗೂ ಸಂವಹನವನ್ನು ಪ್ರತಿನಿಧಿಸುತ್ತದೆ. ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧಗ್ರಹವನ್ನು ಶುಭವೆಂದು ಪರಿಗಣಿಸಿದರೂ ದೋಷಪೂರಿತ ಗ್ರಹಗಳ ಜೊತೆಯಲ್ಲಿರುವಾಗ ಇದು ಅಶುಭವಾಗಿ ಪರಿಣಮಿಸಬಹುದು.

ಬುಧ ಪರಿಹಾರ ಮಂತ್ರಗಳು

ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂತ್ರಗಳು ಬಹಳ ಮಹತ್ವ ಪಡೆಯುತ್ತದೆ. ಆಯಾಯ ಗ್ರಹಗಳಿಗೆ ಸಂಬಂಧಿಸಿದ ದೇವತೆಯ ಶಕ್ತಿಯನ್ನು ಹೊಂದಿರುವ ಮಂತ್ರಗಳು ನಿರ್ದಿಷ್ಟ ಕಂಪನವನ್ನು ಸೃಷ್ಟಿಸುತ್ತದೆ ಹಾಗೂ ಪಠಿಸುವ ವ್ಯಕ್ತಿಯಲ್ಲಿ ಶಕ್ತಿಯನ್ನು ತುಂಬುತ್ತದೆ. ನಿಮ್ಮ ಜನ್ಮ ರಾಶಿಗೆ ಸಂಬಂಧಿಸಿದ ಗ್ರಹಗಳನ್ನು ಶಾಂತಗೊಳಿಸಲು ಮಂತ್ರವನ್ನು ಪಠಿಸುವುದು ಬಹಳ ಒಳ್ಳೆಯ ಮಾರ್ಗವಾಗಿದೆ. ಬುಧ ಗ್ರಹವನ್ನು ಶಾಂತಗೊಳಿಸಲು ಬುಧ ಬೀಜಮಂತ್ರವನ್ನು ಪಠಿಸಬೇಕು

ಓಂ ಬ್ರಾಂ ಬ್ರೀಂ ಭ್ರೂಂ ಸಃ ಬುಧಾಯ ನಮಃ

ಈ ಬೀಜ ಮಂತ್ರವನ್ನು 9000 ಬಾರಿ ಪಠಿಸಬೇಕು. ಈ ಮಂತ್ರವನ್ನು ದಿನಕ್ಕೆ ನಾಲ್ಕು ಬಾರಿ ಅಂದರೆ ಒಟ್ಟು 36000 ಬಾರಿ ಪಠಿಸಿದರೆ ತುಂಬಾ ಒಳ್ಳೆಯದು

ಬುಧ ಮಂತ್ರ:

ಓಂ ಭೂಂ ಬುಧಾಯ ನಮಃ
ಅಥವಾ
ಓಂ ಹ್ಯೀಂ ಶ್ರೀಂ ಬುಧಾಯೇ ನಮಃ

ಬುಧ ದೋಷ ಪರಿಹಾರಕ್ಕೆ ರುದ್ರಾಕ್ಷ

ರುದ್ರಾಕ್ಷವೆಂದರೆ ಶಿವನ ಕಣ್ಣೀರಿನ ಬಿಂದು. ಧಾರ್ಮಿಕ ವಿಧಿಗಾಗಿ ಬಹಳ ಪರಿಣಾಮಕಾರಿಯಾದುದು ರುದ್ರಾಕ್ಷ. ರುದ್ರಾಕ್ಷ ಧರಿಸುವುದರಿಂದ ಸಮೃದ್ಧಿ, ಶಾಂತಿ ಹಾಗೂ ಶಿವನ ಆಶೀರ್ವಾದ ಹಾಗೂ ಜೀವನದಲ್ಲಿ ಕಂಡುಬರುವ ಸವಾಲುಗಳು ನಿವಾರಣೆಯಾಗುತ್ತದೆ.

ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ ಕೇಂದ್ರ.

ಜಾತಕ ವಿಮರ್ಶಕರು : ಕೇರಳ ರಕ್ತೇಶ್ವರಿ ಆರಾಧಕರು

ಖ್ಯಾತ ಮಹಾಮಾಂತ್ರಿಕ ಜೋತಿಷ್ಯರು : ಪಂಡಿತ್ ಶೇಷಗಿರಿ ಭಟ್ 9482206681

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.

ಇಂದೇ ಸಂಪರ್ಕಿಸಿ ಮೊಬೈಲ್ ಸಂಖ್ಯೆ 9482206681

Vishwa News 24

Recent Posts

ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ  ಮೃತದೇಹ ಪತ್ತೆ -vishwanews24

ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ  ಮೃತದೇಹ ಪತ್ತೆ ಉಳ್ಳಾಲ : ಮೀನುಗಾರಿಕೆಗೆ ತೆರಳಿದ್ದ ವೇಳೆ ದೈತ್ಯ ಗಾತ್ರದ ಅಲೆಗೆ…

1 day ago

ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ -vishwanews24

ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ ಬೆಂಗಳೂರು : ನಟಿ ಅನುಪಮಾ ಗೌಡ ಅವರು ನಟನೆಯ ಮೂಲಕ…

1 day ago

ಉಪ್ಪೂರು : ವಯೋವಂದನ ಆತಿಥ್ಯ ಗೃಹ “ಸೈಟ್ ಆಫೀಸ್” ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ -vishwanews24

ಉಪ್ಪೂರು : ವಯೋವಂದನ ಆತಿಥ್ಯ ಗೃಹ "ಸೈಟ್ ಆಫೀಸ್" ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ ಉಡುಪಿ ಜಿಲ್ಲೆ ಬ್ರಹ್ಮಾವರ…

3 days ago

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ – ಬೈಕ್ ನಡುವೆ ಭೀಕರ ಅಪಘಾತ : ಸವಾರ ಸ್ಥಳದಲ್ಲೇ ಮೃತ್ಯು – vishwanews24

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ  ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು ಪುತ್ತೂರು: ಕೆಯ್ಯರು ಗ್ರಾಮದ ಬೊಳಿಕ್ಕಳ…

4 days ago

ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ – vishwanews24

ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ ಬೆಂಗಳೂರು : ಕೇಂದ್ರ ಸರಕಾರದ…

4 days ago

ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ – vishwanews24

ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ ಬೆಂಗಳೂರು: ನಗರದ ರಾಜೇಶ್ವರಿ ನಗರದಲ್ಲಿ ಹೆಂಡತಿಯನ್ನು ಕೊಂದು ಗಂಡ…

4 days ago