ಬೆಂಗಳೂರು: ಕುಮಾರಸ್ವಾಮಿ ಸಂಪಾದಕತ್ವದ ‘ಜನತಾ ಪತ್ರಿಕೆ’ ಲೋಕಾರ್ಪಣೆ – Vishwanews24
ಬೆಂಗಳೂರು: ಕುಮಾರಸ್ವಾಮಿ ಸಂಪಾದಕತ್ವದ ‘ಜನತಾ ಪತ್ರಿಕೆ’ ಲೋಕಾರ್ಪಣೆ – Vishwanews24
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಸಂಪಾದಕತ್ವದ ‘ಜನತಾ ಪತ್ರಿಕೆ’ ಲೋಕಾರ್ಪಣೆಯಾಗಿದೆ. ನಗರದ ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ನಾಡಿನ ಹಿರಿಯ ಪತ್ರಕರ್ತ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಪಿ.ರಾಮಯ್ಯ ಇಂದು ‘ಜನತಾ ಪತ್ರಿಕೆ ‘ ಯನ್ನು ಲೋಕಾರ್ಪಣೆ ಮಾಡಿದರು.
ಜೆಡಿಎಸ್ ಪರೋಚ್ಚ ನಾಯಕ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ , ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಾಡಿನ ಹಿರಿಯ ಪತ್ರಕರ್ತರು ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯರಾದ ಶ್ರೀ ಪಿ.ರಾಮಯ್ಯ ಅವರು ಇಂದು ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಪಕ್ಷದ ಮಾಸಿಕ 'ಜನತಾ ಪತ್ರಿಕೆ' ಯನ್ನು ಲೋಕಾರ್ಪಣೆ ಮಾಡಿದರು.1/2 pic.twitter.com/1cNRlHeUbx
— H D Kumaraswamy (@hd_kumaraswamy) November 8, 2021
ಪಕ್ಷದ ಕಾರ್ಯಕ್ರಮಗಳು, ದೇವೇಗೌಡ ಮತ್ತು ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಕಾಲಘಟ್ಟದಲ್ಲಿ ಜಾರಿಗೆ ತಂದ ಜನಪರ ಯೋಜನೆಗಳು, ಪ್ರಸಕ್ತ ರಾಜಕೀಯ ವಿದ್ಯಮಾನಗಳು, ನಾಡು ನುಡಿಯ ಬಗ್ಗೆ ಬೆಳಕು ಚೆಲ್ಲುವ ಲೇಖನಗಳು ಪತ್ರಿಕೆಯಲ್ಲಿ ಮೂಡಿ ಬರಲಿವೆ.
ಪುನೀತ್ ಅವರಿಗೆ ಪದ್ಮಶ್ರೀ ಕುರಿತು ಚರ್ಚಿಸಿ ಕೇಂದ್ರಕ್ಕೆ ಶಿಫಾರಸ್ಸು : ಸಿಎಂ ಬೊಮ್ಮಾಯಿ – Vishwanews24
