Featured

ಬೆಂಗಳೂರು:  ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ ಹಿನ್ನೆಲೆ ಮಾರ್ಗ ಬದಲಾವಣೆ – vishwanews24

ಬೆಂಗಳೂರು:  ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ ಹಿನ್ನೆಲೆ ಮಾರ್ಗ ಬದಲಾವಣೆ

ಬೆಂಗಳೂರು: ಕೆ.ಜಿ.ಹಳ್ಳಿ ಹಾಗೂ ಪುಲಿಕೇಶಿನಗರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಸೆ.11 ರಂದು ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ ಮತ್ತು ಮೆರವಣಿಗೆ ನಡೆಯುವ ಹಿನ್ನೆಲೆಯಲ್ಲಿ ಟ್ಯಾನರಿ ರಸ್ತೆ ಸುತ್ತಮುತ್ತ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಸುಗಮ ಸಂಚಾರಕ್ಕಾಗಿ ಮಧ್ಯಾಹ್ನ 12.30ರಿಂದ ರಾತ್ರಿ 1 ರವರೆಗೆ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಚಾರ ನಿರ್ಬಂಧ:
* ನಾಗವಾರ ಮುಖ್ಯರಸ್ತೆ, ಟ್ಯಾನರಿ ರಸ್ತೆ, ಡೇವಿಸ್‌ ರೋಡ್‌ ಮುಖ್ಯರಸ್ತೆ
* ನೇತಾಜಿ ಜಂಕ್ಷನ್‌ನಿಂದ ಪಾಟರಿ ಸರ್ಕಲ್‌ ಮೂಲಕ ಟ್ಯಾನರಿ ರಸ್ತೆ ಕಡೆಗೆ
* ಕ್ಲಾರ್ಕ್ ರಸ್ತೆ ಮೂಲಕ ಪಾಟರಿ ಜಂಕ್ಷನ್‌ ಕಡೆಗೆ ಹೋಗುವ ಮಾರ್ಗ
* ರೋಜರ್ಸ್ ರಸ್ತೆ, ಆಮ್‌ರ್‍ಸ್ಟ್ರಾಂಗ್‌ ರಸ್ತೆ ಹಾಗೂ ಹಾಲ್‌ ರಸ್ತೆ ಕಡೆಯಿಂದ ಪಾಟರಿ ರಸ್ತೆ ಕಡೆಗೆ ಹೋಗುವ ಮಾರ್ಗ
* ಮಾಸ್ಕ್‌ ಜಂಕ್ಷನ್‌ನಿಂದ ಕ್ಲಾರೆನ್ಸ್‌ ಬ್ರಿಡ್ಜ್‌ ಮೂಲಕ ಪಾಟರಿ ರಸ್ತೆ ಕಡೆಗೆ
* ಲಾಜರ್‌ ರಸ್ತೆ ಮತ್ತು ಎಂ.ಎಂ.ರಸ್ತೆ ಜಂಕ್ಷನ್‌ನಿಂದ ಸಿಂಧಿ ಕಾಲೊನಿ ಜಂಕ್ಷನ್‌, ಬುದ್ಧ ವಿಹಾರ ರಸ್ತೆ
* ಸಿಂಧಿ ಕಾಲೊನಿ ಜಂಕ್ಷನ್‌ನಿಂದ ವಾರ್‌ ಮೆಮೋರಿಯಲ್‌ ಜಂಕ್ಷನ್‌ ಕಡೆಗೆ ದ್ವಿಮುಖ ಸಂಚಾರ ಬದಲಾವಣೆ
* ಸಿಂಧಿ ಕಾಲೊನ ಜಂಕ್ಷನ್‌ ಕಡೆಗೆ ಮಾತ್ರ ಏಕಮುಖ ಸಂಚಾರಕ್ಕೆ ಅವಕಾಶ

ಪರ್ಯಾಯ ಮಾರ್ಗ
>> ಥಣಿಸಂದ್ರ ಮುಖ್ಯ ರಸ್ತೆಯಿಂದ ಪುಲಿಕೇಶಿನಗರ, ಶಿವಾಜಿನಗರದ ಕಡೆಗೆ : ಥಣಿಸಂದ್ರ ಮುಖ್ಯರಸ್ತೆ, ನಾಗವಾರ ಜಂಕ್ಷನ್‌ ಎಡ ತಿರುವು, ಹೆಣ್ಣೂರು ಜಂಕ್ಷನ್‌ ಬಲ ತಿರುವು, ಎಚ್‌ಬಿಆರ್‌ 80 ಅಡಿ ರಸ್ತೆ, ಸಿದ್ದಪ್ಪರೆಡ್ಡಿ ಜಂಕ್ಷನ್‌, ಅಯೋಧ್ಯ ಜಂಕ್ಷನ್‌, ಲಿಂಗರಾಜಪುರ ಫ್ಲೆತ್ರೖಓವರ್‌ನಿಂದ ಎಚ್‌.ಎಂ.ರೋಡ್‌, ಡೇವಿಸ್‌ ರೋಡ್‌, ಪುಲಿಕೇಶಿನಗರ ಸಂಚಾರ ಪೊಲೀಸ್‌ ಠಾಣೆ ಮಾರ್ಗವಾಗಿ ಸಂಚರಿಸಬಹುದು.

>> ಟ್ಯಾನರಿ ಮುಖ್ಯ ರಸ್ತೆಯಿಂದ ಥಣಿಸಂದ್ರ ಕಡೆಗೆ: ಪುಲಿಕೇಶಿನಗರ ಸಂಚಾರ ಪೊಲೀಸ್‌ ಠಾಣೆ, ಡೇವಿಸ್‌ ರೋಡ್‌, ಎಚ್‌.ಎಂ.ರೋಡ್‌ ಜಂಕ್ಷನ್‌, ಲಿಂಗರಾಜಪುರ ಫ್ಲೆತ್ರೖಓವರ್‌, ಅಯೋಧ್ಯ ಜಂಕ್ಷನ್‌, ಸಿದ್ದಪ್ಪ ರೆಡ್ಡಿ ಜಂಕ್ಷನ್‌, ಹೆಣ್ಣೂರು ಜಂಕ್ಷನ್‌ಎಡ ತಿರುವು, ಹೊರ ವರ್ತುಲ ರಸ್ತೆ, ನಾಗವಾರ ಜಂಕ್ಷನ್‌ ಬಲ ತಿರುವು, ಥಣಿಸಂದ್ರ ಕಡೆಗೆ ತೆರಳಬಹುದು.

>> ನೇತಾಜಿ ಜಂಕ್ಷನ್‌ ಕಡೆಯಿಂದ ಟ್ಯಾನರಿ ರಸ್ತೆ ಮೂಲಕ ನಾಗಾವರ ಕಡೆಗೆ : ನೇತಾಜಿ ಜಂಕ್ಷನ್‌ನಲ್ಲಿಬಲ ತಿರುವು ಪಡೆದು ಎಂ.ಎಂ.ರಸ್ತೆ, ಮಾಸ್ಕ್‌ ಜಂಕ್ಷನ್‌ನಲ್ಲಿಎಡ ತಿರುವು, ಕ್ಲಾರೆನ್ಸ್‌ ಬ್ರಿಡ್ಜ್‌ ಬಲ ತಿರುವು, ಪಾಟರಿ ರಸ್ತೆ, ಎಚ್‌.ಎಂ.ರಸ್ತೆ ಮೂಲಕ ಲಿಂಗರಾಜಪುರ ಹಾಗೂ ಹೆಣ್ಣೂರು ಕಡೆಗೆ ಸಂಚರಿಸಬಹುದು.

> ಕ್ಲಾರ್ಕ್ ರಸ್ತೆ ಮೂಲಕ ಪಾಟರಿ ಜಂಕ್ಷನ್‌ ಕಡೆಗೆ: ಲಾಜರ್‌ ರಸ್ತೆಯಲ್ಲಿ ಸಂಚರಿಸಿ ರೈಲ್ವೆ ಕೆಳ ಸೇತುವೆ ಮುಖಾಂತರ ಎಂ.ಎಂ.ರಸ್ತೆ ತಲುಪಿ ಪುಲಿಕೇಶಿನಗರ ಕಡೆಗೆ ಹೋಗಬಹುದು.

>> ರೋಜರ್ಸ್ ರಸ್ತೆ, ಆಮ್‌ರ್‍ಸ್ಟ್ರಾಂಗ್‌ ರಸ್ತೆ ಹಾಗೂ ಹಾಲ್‌ ರಸ್ತೆ ಕಡೆಯಿಂದ ಪಾಟರಿ ರಸ್ತೆ ಕಡೆಗೆ- ವಿವಿಯಾನಿ ರಸ್ತೆ ಮುಖಾಂತರ ಪಾಟರಿ ರಸ್ತೆ ತಲುಪಿ ಲಾಜರ್‌ ರಸ್ತೆ ರೈಲ್ವೆ ಅಂಡರ್‌ ಬ್ರಿಡ್ಜ್‌ ಮೂಲಕ ಎಂ.ಎಂ.ರಸೆ ್ತತಲುಪಿ ಪುಲಿಕೇಶಿನಗರ ಕಡೆಗೆ ಹೋಗಬಹುದು.

>> ಮಾಸ್ಕ್‌ ಜಂಕ್ಷನ್‌ನಿಂದ ಕ್ಲಾರೆನ್ಸ್‌ ಬ್ರಿಡ್ಜ್‌ ಮೂಲಕ ಪಾಟರಿ ರಸ್ತೆ ಕಡೆಗೆ: ಮಾಸ್ಕ್‌ ಜಂಕ್ಷನ್‌ನಿಂದ ಎಂ.ಎಂ.ರಸ್ತೆ, ಲಾಜರ್‌ ರಸ್ತೆ, ರೈಲ್ವೆ ಕೆಳಸೇತುವೆ, ಪಾಟರಿ ರಸ್ತೆ, ಎಚ್‌.ಎಂ.ರಸ್ತೆ ಮೂಲಕ ಲಿಂಗರಾಜಪುರ ಹಾಗೂ ಹೆಣ್ಣೂರು ಕಡೆಗೆ ಹೋಗಬಹುದು.

>> ಲಾಜರ್‌ ರಸ್ತೆ ಮತ್ತು ಎಂ.ಎಂ.ರಸ್ತೆ ಜಂಕ್ಷನ್‌ ಸಿಂಧಿ ಕಾಲೊನಿ ಜಂಕ್ಷನ್‌ ಕಡೆಗೆ: ಎಂ.ಎಂ.ರಸ್ತೆ ಮೂಲಕ ಮಾಸ್ಕ್‌ ಜಂಕ್ಷನ್‌ ಎಡ ತಿರುವು, ಕೋಲ್ಸ್‌ ರಸ್ತೆ, ವೀಲ್ಹರ್ಸ್ ರಸ್ತೆ, ಸಿಂಧಿ ಕಾಲೊನಿ ಜಂಕ್ಷನ್‌.

> ಸಿಂಧಿ ಕಾಲೊನಿ ಜಂಕ್ಷನ್‌ನಿಂದ ವಾರ್‌ ಮೆಮೋರಿಯಲ್‌ ಜಂಕ್ಷನ್‌ ಕಡೆಗೆ: ವೀಲ್ಹರ್ಸ್ ರಸ್ತೆ, ಥಾಮಸ್‌ ಕೆಫೆ ಜಂಕ್ಷನ್‌ ಎಡ ತಿರುವು, ಸೇಂಟ್‌ ಜಾನ್ಸ್‌ ಚರ್ಚ್ ರಸ್ತೆ, ವಾರ್‌ ಮೆಮೋರಿಯಲ್‌ ಜಂಕ್ಷನ್‌.

ಪಾರ್ಕಿಂಗ್‌ ನಿರ್ಬಂಧ
ಪಾಟರಿ ಸರ್ಕಲ್‌ನಿಂದ ನಾಗವಾರ ಸಿಗ್ನಲ್‌, ಗೋವಿಂದಪುರ ಜಂಕ್ಷನ್‌, ಗೋವಿಂದಪುರ ಪೊಲೀಸ್‌ ಠಾಣೆವರೆಗೆ, ಎಚ್‌ಬಿಆರ್‌ ಬಡಾವಣೆಯ ಸಿದ್ದಪ್ಪ ರೆಡ್ಡಿ ಜಂಕ್ಷನ್‌ನಿಂದ ನರೇಂದ್ರ ಟೆಂಟ್‌ ಜಂಕ್ಷನ್‌ವರೆಗೆ, ಎಂ.ಎಂ.ರಸ್ತೆ, ಪಾಟರಿ ರಸ್ತೆ, ಲಾಜರ್‌ ರಸ್ತೆ, ಬುದ್ಧ ವಿಹಾರ ರಸ್ತೆ, ಅಸ್ಸಾಯೇ ರಸ್ತೆಯ ಎರಡೂ ಬದಿಯಲ್ಲಿ ವಾಹನಗಳ ನಿಲುಗಡೆ ನಿರ್ಬಂಧಿಸಲಾಗಿದೆ.

Vishwa News 24

Recent Posts

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ -vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…

2 days ago

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

3 days ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

3 days ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

3 days ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

3 days ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

3 days ago