ಬೆಂಗಳೂರು: ಪ್ರಯಾಣಿಕರ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ನೈರುತ್ಯ ರೈಲು ಬೇಸಿಗೆ ರಜೆಯ ವಿಶೇಷ ರೈಲುಗಳನ್ನು ಓಡಿಸಲು ಮುಂದಾಗಿದೆ. ಎಸ್ಎಂವಿಟಿ (SMVT) ಬೆಂಗಳೂರು ಟು ಕೊಲ್ಲಂ ಎಕ್ಸ್ಪ್ರೆಸ್ ಮತ್ತು ಎಸ್ಎಂವಿಟಿ ಬೆಂಗಳೂರು ಟು ಮಂಗಳೂರಿಗೆ ವಿಶೇಷ ರೈಲುಗಳು ಸಂಚರಿಸಲಿವೆ. ಈ ಬಗ್ಗೆ ನೈರುತ್ಯ ರೈಲ್ವೆ ಇಲಾಖೆ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಬೆಂಗಳೂರು-ಮಂಗಳೂರು-ಕೊಲ್ಲಂಗೆ ವಿಶೇಷ ರೈಲುಗಳ ಸಮಯ, ದಿನಾಂಕ ಸೇರಿದಂತೆ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.
ವಿಶೇಷ ರೈಲುಗಳ ವಿವರ
ರೈಲು ಸಂಖ್ಯೆ 06585: ಎಸ್ಎಂವಿಟಿ ಬೆಂಗಳೂರು ಟು ಕೊಲ್ಲಂ ಎಕ್ಸ್ಪ್ರೆಸ್. ಏಪ್ರಿಲ್ 19 (ಶನಿವಾರ) ಮಧ್ಯಾಹ್ನ 3:50 ಗಂಟೆಗೆ ಹೊರಟು ಭಾನುವಾರ ಬೆಳಿಗ್ಗೆ 06:20 ಕೊಲ್ಲಂ ತಲುಪುತ್ತದೆ. ದಿನಕ್ಕೆ ಒಂದು ಸೇವೆ ಮಾತ್ರ ಇರಲಿದೆ.
ರೈಲು ಸಂಖ್ಯೆ 06586: ಕೊಲ್ಲಂ ಟು ಎಸ್ಎಂವಿಟಿ ಬೆಂಗಳೂರು ಎಕ್ಸ್ಪ್ರೆಸ್. 20 ಏಪ್ರಿಲ್ (ಭಾನುವಾರ) ಸಂಜೆ 5:50 ಕ್ಕೆ ಹೊರಟು ಮರುದಿನ ಅಂದರೆ ಸೋಮವಾರ ಎಸ್ಎಂವಿಟಿ ಬೆಂಗಳೂರು ಬೆಳಿಗ್ಗೆ 08:35 ಕ್ಕೆ ತಲುಪಲಿದೆ. ದಿನಕ್ಕೆ ಒಂದು ಸೇವೆ ಮಾತ್ರ ಇರಲಿದೆ.
ಯಾವೆಲ್ಲಾ ಕೋಚ್ಗಳು ಲಭ್ಯ
1 ಎಸಿ ಟು ಟೈಯರ್ ಕೋಚ್, 1 ಎಸಿ ತ್ರೀ ಟೈಯರ್ ಕೋಚ್, 8 ಸ್ಲೀಪರ್ ಕ್ಲಾಸ್ ಕೋಚ್ಗಳು, 4 ಜನರಲ್ ಸೆಕೆಂಡ್ ಕ್ಲಾಸ್ ಕೋಚ್ಗಳು ಮತ್ತು 2 ಸೆಕೆಂಡ್ ಕ್ಲಾಸ್ ಕೋಚ್ಗಳು ಹೊಂದಿವೆ.
ಎಲ್ಲೆಲ್ಲಿ ನಿಲುಗಡೆ?
SMVT ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ತಿರುಪ್ಪೂರ್, ಪೋದನೂರು, ಪಾಲಕ್ಕಾಡ್, ತ್ರಿಶೂರ್, ಆಲುವಾ, ಎರ್ನಾಕುಲಂ, ಕೊಟ್ಟಾಯಂ, ಚಂಗನಾಸ್ಸೆರಿ, ತಿರುವಲ್ಲಾ, ಚೆಂಗನ್ನೂರು, ಮಾವೇಲಿಕ್ಕರ, ಕಾಯಕುಲಂ ಹಾಗೂ ಕೊಲ್ಲಂ.
ಎಸ್ಎಂವಿಟಿ ಬೆಂಗಳೂರು-ಮಂಗಳೂರು ವಿಶೇಷ ರೈಲು
ಇದೇ ರೀತಿಯಾಗಿ ಎಸ್ಎಂವಿಟಿ ಬೆಂಗಳೂರು ಟು ಮಂಗಳೂರು ಜಂಕ್ಷನ್ ನಡುವೆ ವಿಶೇಷ ರೈಲುಗಳು ಸಂಚಸಿಲಿವೆ. ರೈಲು ಸಂಖ್ಯೆ 06579: SMVT ಬೆಂಗಳೂರು ಟು ಮಂಗಳೂರು ಜಂಕ್ಷನ್. ಏಪ್ರಿಲ್ 17 ರಂದು ರಾತ್ರಿ 11.55 ಕ್ಕೆ SMVT ಬೆಂಗಳೂರಿನಿಂದ ಹೊರಟು ಮರುದಿನ ಸಂಜೆ 4 ಗಂಟೆಗೆ ಮಂಗಳೂರು ಜಂಕ್ಷನ್ ತಲುಪುತ್ತದೆ.
ರೈಲು ಸಂಖ್ಯೆ 06580: ಮಂಗಳೂರು ಜಂಕ್ಷನ್ ಟು SMVT ಬೆಂಗಳೂರು. ಏಪ್ರಿಲ್ 20 ರಂದು ಮಧ್ಯಾಹ್ನ 2.10 ಕ್ಕೆ ಮಂಗಳೂರು ಜಂಕ್ಷನ್ನಿಂದ ಹೊರಟು ಮರುದಿನ ಬೆಳಿಗ್ಗೆ 7.30 ಕ್ಕೆ SMVT ಬೆಂಗಳೂರು ತಲುಪುತ್ತದೆ.
ಎಲ್ಲೆಲ್ಲಿ ನಿಲುಗಡೆ?
SMVT ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ತಿರುಪ್ಪೂರ್, ಪೋದನೂರು, ಪಾಲಕ್ಕಾಡ್, ತ್ರಿಶೂರ್, ಕೋಜಿಕೋಡ್, ವಡಕರ, ತಲಸ್ಸೆರಿ, ಕಣ್ಣೂರು, ಪಯ್ಯನೂರು, ಕಾಞಂಗಾಡ್, ಕಾಸರಗೋಡು ಹಾಗೂ ಮಂಗಳೂರು.
ಯಾವೆಲ್ಲಾ ಕೋಚ್ಗಳು ಲಭ್ಯ
1 ಪ್ರಥಮ ದರ್ಜೆ ಎಸಿ ಕೋಚ್, 2 ಎಸಿ ಟೂ-ಟೈರ್ ಕೋಚ್ಗಳು, 4 ಎಸಿ ತ್ರೀ-ಟೈರ್ ಕೋಚ್ಗಳು, 7 ಸ್ಲೀಪರ್ ಕ್ಲಾಸ್ ಕೋಚ್ಗಳು, 4 ಸಾಮಾನ್ಯ ದ್ವಿತೀಯ ದರ್ಜೆ ಕೋಚ್ಗಳು ಮತ್ತು 2 ಸಾಮಾನ್ಯ ದ್ವಿತೀಯ ದರ್ಜೆ ಲಗೇಜ್-ಕಮ್-ಬ್ರೇಕ್ ವ್ಯಾನ್ ಕೋಚ್ಗಳು ಹೊಂದಿವೆ.
ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಸಬಲೀಕರಣ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಗಳೂರು: ಮಹಿಳೆಯರನ್ನು ಸಬಲೀಕರಣ ಮಾಡುವ ಕೆಲಸವನ್ನು ನಮ್ಮ ಸರಕಾರ ಪ್ರಾಮಾಣಿಕವಾಗಿ…
ಒಣಗಿದ ದಾಸವಾಳ ನುಂಗಿ ಆರೂವರೆ ತಿಂಗಳ ಮಗು ಉಸಿರುಗಟ್ಟಿ ಸಾವು ಮೈಸೂರು: ಒಣಗಿದ ದಾಸವಾಳ ಹೂನುಂಗಿ ಮಗು ಉಸಿರುಗಟ್ಟಿ ಸಾವನ್ನಪ್ಪಿದ…
ಏ. 2ರಂದು ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಉಡುಪಿ : ಜಿಲ್ಲಾಡಳಿತ, ಜಿಪಂ, ಕೌಶಲ್ಯಾಭಿವೃದ್ಧಿ, ಉದ್ಯಮ…
ಅಡುಗೆ ಅನಿಲದ ಅಭಾವ - ತಾತ್ಕಾಲಿಕವಾಗಿ ಸೌದೆ ಒಲೆ ಬಳಸುವಂತೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ ಬೆಂಗಳೂರು : ಗಲ್ಫ್…
ತೊಕ್ಕೊಟ್ಟು : ಆರಿಫ್ ಕೊಲೆ ಪ್ರಕರಣ ; ಆರು ಆರೋಪಿಗಳು ಭಾಗಿ - ಸಿಸಿಬಿ ಎಸಿಪಿ ತಂಡದಿಂದ ಮುಂದಿನ ತನಿಖೆ…
ಕಾಪು : ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ ಕಾಪು: ಉಳಿಯಾರಗೋಳಿ ಗ್ರಾಮದ ನೀಲಾಧರ ಬಂಗೇರ (58) ಇಲಿ ಪಾಷಾಣ…