ಕಾಪು: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬೆಳಪು, ಗ್ರಾಮ ಹತ್ತಾರು ಬೃಹತ್ ಅಭಿವೃದ್ಧಿ ಯೋಜನೆಗಳ ಮೂಲಕ ದೇಶಕ್ಕೆ ಮಾದರಿಯಾಗಿದೆ. ದೂರದೃಷ್ಟಿತ್ವ ಮತ್ತು ಮುಂದಿನ ಯುವ ಜನಾಂಗಕ್ಕೆ ಅನುಕೂಲವಾಗುವಂತೆ ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರ ಪಿ. ಜಿ. ಸೆಂಟರ್, ಸಹಿತ ಸಣ್ಣ ಕೈಗಾರಿಕಾ ಪಾರ್ಕ್ ಕಾರ್ಯಗತಗೊಳ್ಳುತ್ತಿದ್ದು, ಇದೀಗ ಸುಮಾರು 17 ಎಕ್ರೆ ಪ್ರದೇಶದಲ್ಲಿ ಕರ್ನಾಟಕ ಕ್ರಿಕೆಟ್ ಮಂಡಳಿಯವರ ಬೇಡಿಕೆಯಂತೆ ಉಡುಪಿ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ವಿಶ್ವದರ್ಜೆಯ ಕ್ರಿಕೆಟ್ ಕ್ರೀಡಾಂಗಣ ರಚನೆಗೆ ಜಿಲ್ಲಾಧಿಕಾರಿಗಳ ಮೂಲಕ ಕಂದಾಯ ಪರಿವೀಕ್ಷಕರಿಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದು, ಸರ್ವೆ ಕಾರ್ಯ ನಡೆಸಲಾಗಿದೆಂದು ಬೆಳಪು ಗ್ರಾಮಾಭಿವೃದ್ಧಿಯ ರೂವಾರಿ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದ್ದಾರೆ.
ಬೆಳಪುವಿನಲ್ಲಿ ಅತ್ಯಾಧುನಿಕ ಕ್ರೀಡಾಂಗಣ ರಚನೆಯಾದಲ್ಲಿ ನಮ್ಮ ಜಿಲ್ಲೆಯ ಯುವಕರಿಗೆ ಕ್ರಿಕೆಟ್ ಬೋರ್ಡ್ನಲ್ಲಿ ವಿಶೇಷ ಅವಕಾಶ ದೊರಕಲಿದೆ ಹಾಗೂ ಕೆ.ಪಿ.ಎಲ್, ಮತ್ತು ಐ.ಪಿ.ಎಲ್ ಕ್ರಿಕೆಟ್ ಆಟದ ಆಯೋಜನೆ ಮೂಲಕ ಬಳಸಿಕೊಳ್ಳಲು ಅವಕಾಶವಾಗುತ್ತದೆ. ಇದರೊಂದಿಗೆ ಕ್ರಿಕೆಟ್ ತರಬೇತಿಗೂ ಅವಕಾಶ ದೊರಕುತ್ತದೆ. ಬೆಳಪು ರಾಜ್ಯದಲ್ಲಿಯೇ ಕ್ರಿಕೆಟ್ ಕ್ರೀಡಾಂಗಣದ ಮೂಲಕ ಕೂಡ ವಿಶ್ವದರ್ಜೆಯಲ್ಲಿ ಗುರುತಿಸಲ್ಪಡುತ್ತದೆ. ಈಗಾಗಲೇ ಕ್ರಿಕೆಟ್ ಬೋರ್ಡ್ ಮಂಡಳಿಯೊಂದಿಗೆ ಶೀಘ್ರ ಯೋಜನಾ ಕಾರ್ಯಗತಕ್ಕೆ ಮಾತುಕತೆ ನಡೆಸಲಾಗಿದೆ.
ಬೆಳಪು ಗ್ರಾಮದಲ್ಲಿ 30. ಎಕ್ರೆ ಪ್ರದೇಶದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಮೂಲಕ ಪಿ.ಜಿ.ಸೆಂಟರ್, ಅತ್ಯುನ್ನತ ಶಿಕ್ಷಣ ಸಂಸ್ಥೆ ಸಂಶೋಧನಾ ಕೇಂದ್ರ ಸ್ಥಾಪನೆಯು ಪ್ರಥಮ ಹಂತದಲ್ಲಿ ರೂ.40 ಕೋಟಿ ವೆಚ್ಚದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. 5.೩೯ ಎಕ್ರೆ ಪ್ರದೇಶದಲ್ಲಿ ರೂ.10.00 ಕೋಟಿ ವೆಚ್ಚದಲ್ಲಿ ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಕಾರ್ಯಾರಂಭಗೊಂಡಿರುತ್ತದೆ. 18.00 ಎಕ್ರೆ ಪ್ರದೇಶದಲ್ಲಿ 38 ಸಣ್ಣ ಕೈಗಾರಿಕಾ ಪಾರ್ಕ್ ಸ್ಥಾಪನೆಯಾಗಿದ್ದು, ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ರೂ.10.00 ಕೋಟಿ ವೆಚ್ಚ ಮಾಡಲಾಗಿರುತ್ತದೆ. ಪೊಲೀಸ್ ವಸತಿ ಸಮುಚ್ಛಯ ಮತ್ತು ಪೊಲೀಸ್ ಕವಾಯತುಗಾಗಿ 5.00 ಎಕ್ರೆ ಜಾಗ ಮೀಸಲಿರಿಸಲಾಗಿರುತ್ತದೆ.
2.50 ಎಕ್ರೆ ಪ್ರದೇಶವನ್ನು ಸರಕಾರಿ ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ಜಾಗ ಕಾಯ್ದಿರಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 300 ಎಕ್ರೆ ಪ್ರದೇಶವನ್ನು ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಕಾಯ್ದಿರಿಸಿದ್ದು, 0.25 ಎಕ್ರೆ ಜಾಗವನ್ನು ಲೈಬ್ರೆರಿ ಕಟ್ಟಡಕ್ಕೆ ಕಾಯ್ದಿರಿಸಿದೆ. 5.00 ಎಕ್ರೆ ಪ್ರದೇಶದಲ್ಲಿ ರೂ.1 ಕೋಟಿ ವೆಚ್ಚದಲ್ಲಿ ಜಾರಂದಾಯ ಕೆರೆ ಅಭಿವೃದ್ಧಿಗೊಳಿಸಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗಿದೆ. ಬೆಳಪು ಗ್ರಾಮ ಮುಂದಿನ ದೂರದೃಷ್ಟಿತ್ವ ಮತ್ತು ಅಭಿವೃದ್ಧಿ ಚಿಂತನೆಯೊಂದಿಗೆ ರೂಪುರೇಶ ಸಿದ್ಧಪಡಿಸಿಕೊಂಡಿದ್ದು, ಇದೀಗ ಮಂಜೂರಾತಿ ಹಂತದಲ್ಲಿದೆಂದು ತಿಳಿಸಿದರು.
‘ಬೆಳಪು ಕಾಡು’ ಎಂದೇ ಪ್ರಸಿದ್ಧಿ ಪಡೆದಿದ್ದ ಬೆಳಪುವಿಗೆ ಇದೀಗ ಹೊಳಪು ನೀಡಿ ವಿಶ್ವದ ಭೂಪಟದಲ್ಲಿ ಗುರುತಿಸುವ ರೀತಿ ಯೋಜನೆ ಹಮ್ಮಿಕೊಂಡಿರುವವರು ನಮ್ಮ ಗ್ರಾಮದ ಹೆಮ್ಮೆಯ ಅಭಿವೃದ್ಧಿಯ ರೂವಾರಿ ಡಾ| ದೇವಿಪ್ರಸಾದ್ ಶೆಟ್ಟಿ”
ಶ್ರೀಮತಿ ಶೋಭಾ ಬಿ. ಭಟ್
‘ಬೆಳಪು ಪಂಚಾಯತ್ ಅಧ್ಯಕ್ಷೆ
ಆಗಸ್ಟ್ 1ರಿಂದ ಬೆಂಗಳೂರು–ಮುಂಬೈ ನಡುವಿನ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ ಆರಂಭ ಬೆಂಗಳೂರು: ಭಾರಿ ನಿರೀಕ್ಷೆ ಹೊಂದಿದ್ದ ಮತ್ತು…
ಉಡುಪಿ: ಕಾಂಗ್ರೆಸ್ ಸರಕಾರವು ಪಂಚ ಗ್ಯಾರಂಟಿ ಯೋಜನೆ ಜಾರಿಗೊಳಿಸುವ ಮೂಲಕ ಬಡಜನರಿಗೆ ಆರ್ಥಿಕ ಶಕ್ತಿ ತುಂಬಿಸುವ ಕೆಲಸ ಮಾಡಿದೆ :…
ಪಡುಬಿದ್ರಿ : ಬೈಕ್ ಕಳವು ಪ್ರಕರಣ - ಓರ್ವನ ಬಂಧನ ಪಡುಬಿದ್ರಿ,: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಬೈಕ್ ಕಳವು…
ಉಡುಪಿ: ಹಠಾತ್ತನೆ ರಸ್ತೆಗೆ ಉರುಳಿ ಬಿದ್ದ ಬೃಹತ್ ಮರ; ಅರಣ್ಯ ಅಧಿಕಾರಿ ಕೂದಲೆಳೆ ಅಂತರದಲ್ಲಿ ಪಾರು ಉಡುಪಿ: ಜಿಲ್ಲೆಯ ಹಾವಂಜೆ…
ಶಹಬಾಝ್ ಪಠಾಣ್ ಹತ್ಯೆ ಪ್ರಕರಣ: ನಾಲ್ವರಿಗೆ ಜೀವಾವಧಿ ಶಿಕ್ಷೆ ಬೆಳಗಾವಿ : ನಗರದ ಶಿವಬಸವ ನಗರದಲ್ಲಿ ಐದು ವರ್ಷಗಳ ಹಿಂದೆ ನಡೆದ…
ಉಡುಪಿ ಬೆಂಕಿ ಅವಘಡ ಸ್ಥಳಕ್ಕೆ ಅಗ್ನಿಶಾಮಕ ದಳ ತಲುಪಲು ವಿಳಂಬ : ತನಿಖೆಗೆ ವಿವೇಕ್ ಜಿ. ಸುವರ್ಣ ಆಗ್ರಹ ಉಡುಪಿ:…