ಬೆಳಪು ಸೇವಾ ಸಹಕಾರಿ ಸಂಘಕ್ಕೆ ಉತ್ತಮ ಸಾಧಕ ಪ್ರಶಸ್ತಿ -Vishwanews24
ಬೆಳಪು ಸೇವಾ ಸಹಕಾರಿ ಸಂಘಕ್ಕೆ ಉತ್ತಮ ಸಾಧಕ ಪ್ರಶಸ್ತಿ -Vishwanews24
ಬೆಳಪು : ಗ್ರಾಮೀಣ ಭಾಗದಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸುತ್ತಿರುವ ತನ್ನ ಕಾರ್ಯವ್ಯಾಪ್ತಿಯಲ್ಲಿ ಸತತ ಅಭಿವೃದ್ಧಿ ಕಂಡ ಬೆಳಪು ಸೇವಾ ಸಹಕಾರಿ ಸಂಘ ಕಳೆದ ೧೦ ವರ್ಷಗಳಿಂದ ಸತತವಾಗಿ ಬ್ಯಾಂಕಿನ ಪ್ರಗತಿಯ ವರದಿಯಂತೆ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಅತ್ಯತ್ತಮ ಸಾಧಕ ಪ್ರಶಸ್ತಿ ೨೦೧೯-೨೦ಕ್ಕೆ ಲಭಿಸಿದೆ.
ಬೆಳಪು ಸೇವಾ ಸಹಕಾರಿ ಸಂಘವು ಬೆಳಪು-ಎಲ್ಲೂರು-ಉಚ್ಚಿಲಗಳಲ್ಲಿ ಶಾಖೆಗಳನ್ನು ಹೊಂದಿದ್ದು, ಪಣ ಯೂರಿನಲ್ಲಿ ಪ್ರಧಾನ ಕಚೇರಿಯ ಮೂಲಕ ಸಂಘದ ಸದಸ್ಯರು ಹಾಗೂ ಗ್ರಾಹಕರಿಗೆ ಪಾರದರ್ಶಕತೆಯಿಂದ ಸೇವೆ ಸಲ್ಲಿಸುತ್ತಿದೆ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ| ಎಂ. ಎನ್. ರಾಜೇಂದ್ರಕುಮಾರ್, ಬೆಳಪು ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರಾದ ಶ್ರೀವತ್ಸ ರಾವ್ ಮತ್ತು ಬ್ಯಾಂಕ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಲೋಚನ ದೇವಾಡಿಗರವರನ್ನು ಪ್ರಶಸ್ತಿ ನೀಡಿ ಗೌರವಿಸಿದೆ. ಬೆಳಪು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ ಉಪಸ್ಥಿತರಿದ್ದರು.
