ಬೆಳ್ತಂಗಡಿ, : ಮಡ್ಯಂತಾರು ಪಣಕಜೆಯ ನಿವಾಸಿ ನಿಯಾಝ್ ಪಣಕಜೆ ಅವರು ಕೂಲಿ ಮಾಡುತ್ತಲೇ ವಿದ್ಯಾಭ್ಯಾಸ ಹಾಗೂ ಪಿಎಚ್.ಡಿ ಪಡೆದಿದ್ದಾರೆ.
ರೋಲ್ ಆಫ್ ಕಾರ್ಪೊರೇಟಿವ್ ಬ್ಯಾಂಕಿಂಗ್ ಇನ್ ಸೋಶಿಯೋ ಎಕನಾಮಿಕ್ ಡೆವಲಂಪ್ಮೆಂಟ್ ಆಫ್ ರೂರಲ್ ಮುಸ್ಲಿಮ್ ಕಮ್ಯುನಿಟೀಸ್- ಎ ಸ್ಟಡಿ ಇನ್ ಡಿಕೆ ಡಿಸ್ಟ್ರಕ್ಟ್ ಆಫ್ ಕರ್ನಾಟಕ ಎನ್ನುವ ಸಂಶೋಧನಾ ಮಹಾ ಪ್ರಬಂಧಕ್ಕೆ ನಿಯಾಝ್ ಅವರಿಗೆ ಮಂಗಳೂರು ವಿ.ವಿ ಪಿಎಚ್.ಡಿ ನೀಡಿದೆ.
ಮಂಗಳೂರು: “ಮೊಗವೀರ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರ್ಪಡೆಗೊಳಿಸಿ” :ನಳಿನ್ ಕುಮಾರ್ ಗೆ ಮನವಿ -Vishwanews24
ನಿಯಾಝ್ ಪಣಕಜೆ ಅವರು ಪಣಕಜೆಯ ಇಬ್ರಾಹಿಂ ಹಾಗೂ ಝುಬೈರಾ ದಂಪತಿಗಳ ಪುತ್ರ. ಬಡ ಕುಟುಂದವರಾದ ಇವರು ತಮ್ಮ ವಿದ್ಯಾಭ್ಯಾಸಕ್ಕಾಗಿ ಮನೆಗೆಲಸ, ಮೇಸ್ತ್ರಿ ವೃತ್ತಿ, ಗದ್ದೆ-ತೋಟದ ಕೆಲಸ ಸಹಿತ ಎಲ್ಲಾ ವಿಧದ ಕೆಲಸವನ್ನು ಮಾಡಿದ್ದಾರೆ. ಅಲ್ಲದೇ ಇವರು ಮನೆ ಮನೆಗೆ ದಿನಪತ್ರಿಕೆಯನ್ನು ವಿತರಿಸುವ ಕೆಲಸವನ್ನೂ ಮಾಡಿದ್ದಾರೆ. ನಿಯಾಝ್ ಅವರು ಮಂಗಳೂರಿನ ಸೈಂಟ್ ಆಗ್ನೆಸ್ ಪಿಜಿ ಸೆಂಟರ್ನಲ್ಲಿ ಎಂಕಾಂ ಪದವಿ ಪೂರೈಸಿದ್ದಾರೆ.
ನಿಯಾಝ್ ಅವರು ಈಗಾಗಲೇ ಸುಮಾರು 55ಕ್ಕೂ ಅಧಿಕ ಸಂಶೋಧನಾತ್ಮಕ ಪ್ರಬಂಧಗಳನ್ನು ವಿವಿಧ ವಿಚಾರ ಸಂಕಿರಣಗಳಲ್ಲಿ ಮಂಡಿಸಿದ್ದಾರೆ.
2017ರಲ್ಲಿ ನಿಯಾಝ್ ಅವರು ಮೈಸೂರು ವಿ.ವಿಯಿಂದ ಕೆ-ಸೆಟ್ ಪೂರೈಸಿದ್ದಾರೆ.
ಪ್ರಸ್ತುತ ನಿಯಾಝ್ ಅವರು ಪಾಂಡೇಶ್ವರದ ಶ್ರೀನಿವಾಸ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ನಿಯಾಝ್ ಅವರು ಕೂಲಿ ಕೆಲಸ ಮಾಡುವುದನ್ನು ಮಾತ್ರ ಮರೆತಿಲ್ಲ. ಹಿಂದೆ ಮಾಡುತ್ತಿದ್ದ ಕೆಲಸಗಳನ್ನು ಇಂದಿಗೂ ಮುಂದುವರಿಸಿದ್ದಾರೆ.
ಧರ್ಮಸ್ಥಳ ಪ್ರಕರಣ : ವಿಠಲ್ ಗೌಡ ವಿರುದ್ಧ ಅರೆಸ್ಟ್ ವಾರಂಟ್: ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…
ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ ಬೆಂಗಳೂರು: ಕನ್ನಡ ಸಿನಿಮಾ ರಂಗದ ಖ್ಯಾತ ನಿರ್ಮಾಪಕ ಬಾ.ಮಾ.…
ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ ಬೆಂಗಳೂರು: ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಡವರು, ಶ್ರೀರಾಮನ ಹೆಸರಿನಲ್ಲಿ ಒಂದೊಂದು…
ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು ಉಡುಪಿ: ಕಠಿಣ ಕಾನೂನು ಕ್ರಮ ಮತ್ತು ಜಾಗೃತಿ…
ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ,…
ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ ಶಿವಮೊಗ್ಗ: ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ…