ಬೆಳ್ತಂಗಡಿ : ಮುಂದಿನ ದಿನಗಳಲ್ಲಿ ಮಸೀದಿಗಳ ಮೇಲೂ ಭಗವಾಧ್ವಜ ಹಾರಿಸಲಿದ್ದೇವೆ : ರಘು ಸಕ್ಲೇಶಪುರ
ಬೆಳ್ತಂಗಡಿ: ವಿಶ್ವ ಹಿಂದೂ ಪರಿಷತ್, ಬಜರಂಗ ದಳ ವೇಣೂರು ಪ್ರಖಂಡ ಹಾಗೂ ಶ್ರೀ ಅಯ್ಯಪ್ಪ ಘಟಕ ಪೆರಾಡಿ ಇವರ ಸಂಯೋಜನೆಯಲ್ಲಿ ಪೆರಾಡಿ ಮಾವಿನಕಟ್ಟೆ ಎಂಬಲ್ಲಿ ಆದಿತ್ಯವಾರ ನಡೆದ ಧ್ಜಜಕಟ್ಟೆ ಉದ್ಘಾಟನೆ ಹಾಗೂ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ರಘು ಸಕ್ಲೇಶಪುರ ಭಾಷಣ ಮಾಡಿದರು.
ಮುಂದಿನ ದಿನಗಳಲ್ಲಿ ಮಾವಿನ ಮರದಲ್ಲಿ ಮಾತ್ರವಲ್ಲ ಮಸೀದಿಗಳ ಮೇಲೂ ಭಗವಧ್ವಜ ಹಾರಿಸಲಿದ್ದೇವೆ. ಮಸೀದಿಗಳ ಮೇಲೆ ಧ್ವನಿವರ್ಧಕ ಇರಬಾರದು, ಮತಾಂತರ ಆದವರ ನೋಂದಣಿ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹಲವಾರು ವರ್ಷಗಳ ಹಿಂದೆ ಹೇಳಿದ್ದರೂ ಜಿಲ್ಲಾಧಿಕಾರಿಗಳು ಯಾಕೆ ಅದನ್ನ ಪಾಲಿಸುತ್ತಿಲ್ಲ. ಭಗವಧ್ವಜ ತೆಗೆಯುವಲ್ಲಿ ನಿಮಗೇನು ಆಸಕ್ತಿ ?? ಎಂದು ಬಜರಂಗದಳ ಮಂಗಳೂರು ವಿಭಾಗದ ಸಹ ಸಂಚಾಲಕ ರಘು ಸಕಲೇಶಪುರ ತಿಳಿಸಿದರು.
ಹಲವಾರು ವರ್ಷಗಳಿಂದ ಪೆರಾಡಿಕಟ್ಟೆಯ ಮಾವಿನ ಮರದಲ್ಲಿದ್ದ ಭಗವಾಧ್ವಜವನ್ನುರಾತ್ರೋ ರಾತ್ರಿ ಕಿತ್ತೆಸದು ಮತಾಂಧ ಉಸ್ತುವಾರಿ ಸಚಿವರ ಕುಮ್ಮಕ್ಕಿನಿಂದ ಹಸಿರು ಧ್ವಜವನ್ನು ಹಾಕಿದ್ದಾರೆ. ಇಲ್ಲಿನ ಹಿಂದೂ ಹೃದಯ ಶಾಸಕರು ಮತ್ತೆ ಅದನ್ನು ಹಾರಿಸಿದ್ದು ನಮೆಗಲ್ಲರಿಗೂ ಹೆಮ್ಮೆ ತಂದಿದೆ. ಇದು ಭಾರತಕ್ಕೇ ಪ್ರೇರಣೆ ಎಂದರು.
ಇನ್ನು ಹದಿನೈದು ದಿನದೊಳಗೆ ಮತ್ತೆ ಮಾವಿನ ಮರದ ಮೇಲೆ ಭಗವಾಧ್ವಜ ಹಾರಿಸಲಿದ್ದೇವೆ.ಇದು ಇಂದಿನ ನಮ್ಮ ಸಂಕಲ್ಪ.ಯಾರು ಬಂದರೂ ಎದುರಿಸಲು ಬಜರಂಗದಳ ಸಿದ್ದವಿದೆ. ಸಂಘರ್ಷ ಮತ್ತು ಹೋರಾಟಗಳೇ ನಮಗೆ ಪ್ರೇರಣೆ ಎಂದರು. ದೇಶದಲ್ಲಿ ಬದಲಾವಣೆಯ ಹಂತ ಬಂದಿದೆ. ಪ್ರತೀ ಗ್ರಾಮದಲ್ಲೂ ಕಟ್ಟೆಕಟ್ಟಿ ಭಗವಾಧ್ವಜ ಹಾರಿಸುತ್ತೇವೆ ಎಂದರು.
ಭಗವಾಧ್ವಜಕಟ್ಟೆಯನ್ನು ಉದ್ಘಾಟಿಸಿದ ದಕ್ಷಿಣ ಕರ್ನಾಟಕ ಪ್ರಾಂತ ಸಂಚಾಲಕ ಸುನಿಲ್ ಕೆ. ಆರ್ಅವರು, ಹಿಂದೂಗಳಿಗೆ ಇರುವ ಏಕ ಮಾತ್ರ ದೇಶದಲ್ಲಿ ರಾಮಮಂದಿರ, ದತ್ತಪೀಠ, ಕೇಸರಿಧ್ವಜಕ್ಕಾಗಿ ಹೋರಾಟ ಮಾಡುವ ಅನಿವಾರ್ಯತೆ ಎದುರಾಗಿದೆ. ರಾಮಮಂದಿರ ಇರಬೇಕಾದ ಅಯೋಧ್ಯೆಯಲ್ಲಿ ಎಸ್ಡಿಷಪಿಐನವರು ಬಾಬರ್ ನ ಹೆಸರಿನಲ್ಲಿ ಮಸೀದಿ ಕಟ್ಟಬೇಕು ಎಂದು ಆಗ್ರಹಿಸಿದ್ದಾರೆ. ಮತಾಂಧ, ದಾಳಿಕೋರನ ಹೆಸರಿನಲ್ಲಿ ಈ ದೇಶದಲ್ಲಿಒಂದೇ ಒಂದುಕ ಲ್ಲುಇಡಲು ಬಜರಂಗದಳ ಬಿಡದು ಎಂದು ಎಚ್ಚರಿಸಿದರು.
