ಬ್ರಹ್ಮಾವರ : ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ – ದನ ಹಾಗೂ ಕರು ಸಾವು, ಎರಡು ಜಾನುವಾರುಗಳಿಗೆ ಗಾಯ – vishwanews24

Featured, ಉಡುಪಿ

ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ: ದನ ಹಾಗೂ ಕರು ಸಾವು, ಎರಡು ಜಾನುವಾರುಗಳಿಗೆ ಗಾಯ

ಬ್ರಹ್ಮಾವರ : ಆಕಸ್ಮಿಕವಾಗಿ ಕೊಟ್ಟಿಗೆಗೆ ಬೆಂಕಿ ಬಿದ್ದ ಪರಿಣಾಮ ದನ ಹಾಗೂ ಕರು ಸಾವನ್ನಪ್ಪಿ ಎರಡು ಜಾನುವಾರುಗಳು ಗಾಯಗೊಂಡಿರುವ ಘಟನೆ 14ನೇ ಕಾಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಡೂರು ಗ್ರಾಮದ ಕುಡುಬೇರಬೆಟ್ಟು ಎಂಬಲ್ಲಿ ಇಂದು ನಸುಕಿನ ವೇಳೆ 2:30ರ ಸುಮಾರಿಗೆ ನಡೆದಿದೆ.

ಕುಡುಬೇರಬೆಟ್ಟುವಿನ ರುದ್ರು ಮಂಜುನಾಥ ಮರಕಾಲ ಎಂಬವರ ದನದ ಕೊಟ್ಟಿಗೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಅನಾಹುತ ಸಂಭವಿಸಿದೆ. ಇದರ ಪರಿಣಾಮ ಕೊಟ್ಟಿಗೆಯಲ್ಲಿ ಮಲಗಿದ್ದ ಒಂದು ದನ ಹಾಗೂ ಒಂದು ಕರು ಅಸುನೀಗಿದೆ. ಬೆಂಕಿಯಿಂದ ಕೊಟ್ಟಿಗೆಯಲ್ಲಿದ್ದ ಎರಡು ದನಗಳು ತೀವ್ರವಾಗಿ ಗಾಯಗೊಂಡಿರುವ ಬಗ್ಗೆ ತಿಳಿದು ಬಂದಿದೆ. ಕೊಟ್ಟಿಗೆಯಲ್ಲಿದ್ದ ಒಣ ಹುಲ್ಲು ಸಂಪೂರ್ಣ ಸುಟ್ಟು ಹೋಗಿದೆ. ಒಟ್ಟು 50,000 ರೂ. ನಷ್ಟ ಅಂದಾಜಿಸಲಾಗಿದೆ.

ಕುಂದಾಪುರ: ಅಪ್ರಾಪ್ತೆಯ ವಿವಾಹ ಪ್ರಕರಣ: ಬಾಲಕಿಯ ತಂದೆ, ಬಾವ, ವರನ ವಿರುದ್ಧ ಪ್ರಕರಣ ದಾಖಲು – vishwanews24

Leave a Reply