ಭಗವತಿ ಟ್ರಸ್ಟ್ ನ ವತಿಯಿಂದ ಮಗುವಿನ ಹೃದಯ ಶಸ್ತ್ರ ಚಿಕಿತ್ಸೆಗೆ ರೂ10000 ಸಹಾಯಧನ
ಪಡುಬಿದ್ರಿ : ಕಂಚಿನಡ್ಕದಲ್ಲಿ ನಡೆದ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಭಗವತಿ ಟ್ರಸ್ಟ್ ನ ವತಿಯಿಂದ ಟ್ರಸ್ಟ್ ನ 9ನೇ ಸೇವಾ ಯೋಜನೆಯ ಅವರಾಲು ಸಂದೀಪ್ ಆಚಾರ್ಯರವರ ಮಗುವಿನ ಹೃದಯ ಶಸ್ತ್ರ ಚಿಕಿತ್ಸೆಗೆ ರೂ10000 ಸಹಾಯಧನವನ್ನು ಮಗುವಿನ ಪಾಲಕರಾದ ಪ್ರಭಾಕರ್ ಆಚಾರ್ಯರವರಿಗೆ ಕಾಪು ಶಾಸಕರಾದ ಲಾಲಾಜಿ ಮೆಂಡನ್ ರವರ ಮುಖಾಂತರ ಹಸ್ತಾಂತರಿಸಲಾಯಿತು,
ಈ ಸಂದರ್ಭದಲ್ಲಿ ಭಗವತಿ ಟ್ರಸ್ಟ್ ನ ಯುವರಾಜ್ ಕುಲಾಲ್, ಸುಹಾಸ್ ಶೆಟ್ಟಿ ನಟವರ್ಯ, ಬಿಜೆಪಿ ಕಾಪು ಕ್ಷೇತ್ರಾದ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಹಿಂ.ಜಾ.ವೇ ಮುಖಂಡರಾದ ಮತ್ತು ಟ್ರಸ್ಟ್ ನ ಸಲಹೆಗಾರರಾದ ಪ್ರತೀಕ್ ಕೋಟ್ಯಾನ್ ನಂದಿಕೂರು, ರಾಜೇಶ್ ಉಚ್ಚಿಲ, ಕಿರಣ್ ಭಟ್, ರಾಯೇಶ್ವರ ಪೈ, ಬಿಜೆಪಿ ಜಿಲ್ಲಾ ಕೈಗಾರಿಕ ಪ್ರಕೋಷ್ಟ ಸಂಚಾಲಕ ಇನ್ನಾ ಉದಯಕುಮಾರ್ ಶೆಟ್ಟಿ, ಸ್ಥಳೀಯರಾದ ಹರೀಶ್ ಕಂಚಿನಡ್ಕ, ಮನೋಜ್ ಅಬ್ಬೇಡಿ ಉಪಸ್ಥಿತರಿದ್ದರು.
