ಭಾರತದೊಂದಿಗೆ ಯುದ್ಧದಲ್ಲಿ ಸೋಲಾದರೆ ಸ್ವಾತಂತ್ರ್ಯಕ್ಕಾಗಿ ಪಾಕಿಸ್ತಾನ ಕೊನೆಯವರೆಗೂ ಹೋರಾಟ ಮಾಡಲಿದೆ : ಪಾಕ್​ ಪ್ರಧಾನಿ -Vishwanews24

Featured, ಅಂತಾರಾಷ್ಟ್ರೀಯ ನ್ಯೂಸ್

ಇಸ್ಲಾಮಾಬಾದ್​: ಭಾರತದೊಂದಿಗೆ ಯುದ್ಧವಾದಲ್ಲಿ ಪಾಕಿಸ್ತಾನ ಸೋಲುವುದು ಬಹುತೇಕ ಖಚಿತ ಎಂದು ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಹೇಳಿದ್ದಾರೆ.

ಸುದ್ದಿಗಾರರ ಜತೆ ಭಾನುವಾರ ಮಾತನಾಡಿದ ಅವರು, ಸಾಂಪ್ರದಾಯಿಕ ಯುದ್ಧದಲ್ಲಿ ಪಾಕ್​ಗೆ ಸೋಲಾಗುತ್ತದೆ. ಆದರೆ ತಾವು ಯುದ್ಧ ವಿರೋಧಿಯಾಗಿದ್ದು, ಯುದ್ಧಕ್ಕೆ ಅವಕಾಶ ಕೊಡುವುದಿಲ್ಲ. ಅಣ್ವಸ್ತ್ರಗಳನ್ನು ಮೊದಲು ಬಳಕೆ ಮಾಡುವುದಿಲ್ಲ ಎಂದರು.

ಯುದ್ಧ ಮತ್ತು ಹಿಂಸಾಚಾರದಲ್ಲಿ ನಂಬಿಕೆ ಇಲ್ಲದ ವ್ಯಕ್ತಿ ನಾನು. ನಾನು ಯುದ್ಧ ವಿರೋಧಿ. ಯುದ್ಧಗಳಿಂದ ಸಮಸ್ಯೆ ಪರಿಹಾರವಾಗುತ್ತದೆ ಎಂಬದರಲ್ಲಿ ನನಗೆ ನಂಬಿಕೆಯಿಲ್ಲ. ವಿಯೆಟ್ನಾಂ, ಇರಾಕ್​ ಅನ್ನು ಉದಾಹರಣ ತೆಗೆದುಕೊಂಡಾಗ, ಅಲ್ಲಿ ನಡೆದ ಯುದ್ಧದಿಂದಾಗಿ ಹೊಸ ಸಮಸ್ಯೆಗಳು ಉದ್ಭವಿಸಿವೆ. ಯಾವ ಉದ್ದೇಶಕ್ಕಾಗಿ ಯುದ್ಧ ಮಾಡಲಾಗಿತ್ತೋ ಅದಕ್ಕಿಂತಲೂ ಭಯಂಕರವಾದ ಪರಿಸ್ಥಿತಿ ಅಲ್ಲಿದೆ ಎಂದು ಹೇಳಿದರು.

ಯುದ್ಧದಲ್ಲಿ ಸೋಲಾದರೆ ಸ್ವಾತಂತ್ರ್ಯಕ್ಕಾಗಿ ಪಾಕಿಸ್ತಾನ ಕೊನೆಯವರೆಗೂ ಹೋರಾಟ ಮಾಡಲಿದೆ. ಭಾರತ ಮತ್ತು ಪಾಕ್​ ನಡುವೆ ಸಾಂಪ್ರದಾಯಿಕ ಯುದ್ಧ ಆರಂಭವಾದರೂ ಅದು ಅಣ್ವಸ್ತ್ರಗಳ ಪ್ರಯೋಗದೊಂದಿಗೆ ಅಂತ್ಯವಾಗುವ ಸಾಧ್ಯತೆ ಇದೆ. ಸಾಂಪ್ರದಾಯಿಕ ಯುದ್ಧದಲ್ಲಿ ಪಾಕ್​ ಸೋಲುವ ಅಥವಾ ಶರಣಾಗುವ ಸ್ಥಿತಿ ತಲುಪಿದರೆ, ಕೊನೆಯ ಉಸಿರನವರೆಗೂ ಸ್ವಾತಂತ್ರ್ಯಕ್ಕಾಗಿ ಹೋರಾಡುವುದು ಶತಃಸಿದ್ಧ. ಹೀಗೆ ಕೊನೆ ಉಸಿರಿನವರೆಗಿನ ಹೋರಾಟದಲ್ಲಿ ಏನು ಬೇಕಾದರೂ ಆಗಬಹುದಾಗಿದೆ ಎಂಬುದನ್ನು ಎಲ್ಲರೂ ನೆನಪಿಟ್ಟುಕೊಳ್ಳಬೇಕು ಎಂದು ಇಮ್ರಾನ್​ ಎಚ್ಚರಿಸಿದರು.