ಭಾರತೀಯ ಸಂಸ್ಕೃತಿಯಲ್ಲಿ ಒಂಟಿ ಸೀನು ಅಪಶಕುನವೆನ್ನುತ್ತಾರೆ ಇದು ನಿಜವೇ..?? ಹಾಗಾದರೆ ಓದಿ ಈ ವರದಿ -Vishwanews24

ಹಿಂದೂ ಧರ್ಮ ಹಾಗೂ ಆಚರಣೆಯಲ್ಲಿ ಸಾಕಷ್ಟು ಬಗೆಯ ನಂಬಿಕೆಗಳು ಹಾಗೂ ಆಚರಣೆಗಳಿವೆ. ಮನುಷ್ಯನು ಧರ್ಮದ ಆಚರಣೆ ಹಾಗೂ ಅನುಕರಣೆ ಮಾಡುವವನಾದರೂ ಅವನ ದೇಹದಲ್ಲಿ ಉಂಟಾಗುವ ಕೆಲವು ಬದಲಾವಣೆಗಳನ್ನು ಒಂದು ದೈವ ಸಂಕೇತ ಅಥವಾ ಭವಿಷ್ಯದ ಸಂದೇಹ ಎಂದು ಪರಿಗಣಿಸಲಾಗುತ್ತದೆ. ಅವುಗಳನ್ನು ಮೂಢನಂಬಿಕೆ ಎಂದು ಸಹ ಕರೆಯಲಾಗುವುದು. ವ್ಯಕ್ತಿಯ ದೇಹದಲ್ಲಿ ಉಂಟಾಗುವ ಬದಲಾವಣೆ ಎಂದರೆ ಕಣ್ಣುಗಳು ಹರುವುದು, ಅನಿಶ್ಚಿತವಾಗಿ ನರಗಳ ಬಡಿತ ಹೆಚ್ಚುವುದು, ಅಂಗೈ ತುರಿಕೆ, ಅಂಗಾಲಿನ ತುರಿಕೆ ಹಾಗೂ ಸೀನುವಿಕೆಗಳು. ಇವು ವಿಭಿನ್ನ ಬಗೆಯ ಕೆಲವು ಸಂದೇಶಗಳನ್ನು ಸಾರುತ್ತವೆ.

ಇಂತಹ ಒಂದು ದೈಹಿಕ ಬದಲಾವಣೆಗಳಲ್ಲಿ ಸೀನುವಿಕೆಯೂ ಒಂದು. ಸೀನುವುದು ಜೀವಿಯ ಜೈವಿಕ ಕ್ರಿಯೆಯಲ್ಲಿ ಒಂದು. ಇದು ಆರೋಗ್ಯವನ್ನು ಕಾಪಾಡಲು ಕಾಣಿಸಿಕೊಳ್ಳುವ ಒಂದು ಪರಿ. ಕಿರಿಕಿರಿ ಉಂಟುಮಾಡುವ ವಸ್ತು ಅಥವಾ ಅನುಚಿತವಾದ ಧೂಳಿನ ಕಣಗಳನ್ನು ಹೊರ ಹಾಕಲು ಸೀನುವ ಪ್ರಕ್ರಿಯೆ ಉಂಟಾಗುತ್ತದೆ. ಮೆದುಳಿನಿಂದ ಪ್ರಚೋದನೆ ಪಡೆದುಕೊಂಡು ಮೊದಲು ಮೂಗಿನಲ್ಲಿ ಕೆರೆತದಂತಹ ಸಂವೇದನೆ ಉಂಟಾಗುತ್ತದೆ. ನಂತರ ಸೀನು ಪ್ರಕ್ರಿಯೆ ನಡೆಯುವುದು. ಆಗ ಮೂಗು ಹಾಗೂ ಉಸಿರಿನಲ್ಲಿ ಸಿಲುಕಿರುವ ಹಾನಿಕಾರಕ ಕಣಗಳು ಹೊರ ಹೋಗುತ್ತವೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292

ಧಾರ್ಮಿಕವಾಗಿ ಪ್ರಾಚೀನ ಕಾಲದಿಂದಲೂ ವಿವಿಧ ಮೂಢನಂಬಿಕೆಗಳು ಮಾನವನ ಜೀವನದಲ್ಲಿ ಒಂದಾಗಿ ಬೆರೆತುಕೊಂಡಿವೆ. ಸೀನುವಿಕೆಯನ್ನು ಕೆಲವು ಪ್ರದೇಶದಲ್ಲಿ ಅಪಶಕುನ ಎಂದು ಪರಿಗಣಿಸುತ್ತಾರೆ. ಇನ್ನೂ ಕೆಲವು ಪ್ರದೇಶದಲ್ಲಿ ಶುಭ ಸೂಚಕ ಎಂದು ಕರೆಯುವರು. ನಿಜ, ಬಹುತೇಕ ಪ್ರದೇಶಗಳಲ್ಲಿ ಸೀನುವಿಕೆಯು ಭವಿಷ್ಯದಲ್ಲಿ ನಡೆಯುವ ಧನಾತ್ಮಕ ಹಾಗೂ ಋಣಾತ್ಮಕ ಸಂದೇಶಗಳನ್ನು ಸಾರುತ್ತದೆ. ಹಾಗಾಗಿ ಅದೊಂದು ಸರ್ವೋಚ್ಚ ಶಕ್ತಿ ಎಂದು ಪರಿಗಣಿಸಲಾಗುವುದು. ಅತಿಯಾಗಿ ನೆಗಡಿಯಾದಾಗ ಅಥವಾ ನೆಗಡಿ ಆರಂಭದ ಸಂದರ್ಭದಲ್ಲಿ ಸೀನು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಅವುಗಳನ್ನು ಯಾವುದೇ ನಂಬಿಕೆಗಳಿಗೆ ಬಳಸುವುದಿಲ್ಲ. ನಾವು ಆರೋಗ್ಯವಾಗಿದ್ದಾಗ ಉಂಟಾಗುವ ಅನಿರೀಕ್ಷಿತ ಸೀನುಗಳು ಮಾತ್ರ ಭವಿಷ್ಯವನ್ನು ಹೇಳುತ್ತದೆ ಎಂದು ನಂಬಲಾಗಿದೆ.

ಸೀನುವುದರಿಂದ ಭವಿಷ್ಯದಲ್ಲಿ ನಡೆಯುವ ಕೆಲವು ಭವಿಷ್ಯವನ್ನು ತಿಳಿಯಬಹುದು. ಆದರೆ ಆ ಸೀನು ಹೇಗಿರುತ್ತದೆ? ಎಷ್ಟು ಬಾರಿ ಸೀನಿದರೆ ಏನರ್ಥ? ಅದರಿಂದ ಏನಾಗುತ್ತದೆ? ಎನ್ನುವುದರ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ. ನೀವು ಅವುಗಳನ್ನು ಪರಿಶೀಲಿಸಿದರೆ ನಿಮ್ಮ ಭವಿಷ್ಯದಲ್ಲಿ ಉಂಟಾಗುವ ವಿಷಯವನ್ನು ಮೊದಲೇ ಅಂದಾಜಿಸಬಹುದು.

ಭಾರತೀಯ ಸಂಸ್ಕೃತಿಯಲ್ಲಿ
ಭಾರತೀಯ ಸಂಸ್ಕೃತಿಯಲ್ಲಿ ಕೆಲಸಕ್ಕೆ ಹೋಗುವ ಮೊದಲು ಸೀನುವುದು ಅಥವಾ ಮನೆಯಿಂದ ಹೊರಗೆ ಹೋಗುವಾಗ ಸೀನುವುದು ಅಹಿತಕರ ಎಂದು ಪರಿಗಣಿಸಲಾಗುತ್ತದೆ. ಅದು ದುರಾದೃಷ್ಟವನ್ನು ಸಹ ಸೂಚಿಸುವುದು. ಹಾಗಾಗಿ ಸೀನು ಬಂದರೆ ಸ್ವಲ್ಪ ನೀರನ್ನು ಕುಡಿಯಲು ಸಲಹೆ ನೀಡಲಾಗುವುದು. ಇದರಿಂದ ದುರಾದೃಷ್ಟವನ್ನು ಸುಲಭವಾಗಿ ತಡೆಯಬಹುದು ಎನ್ನುವ ನಂಬಿಕೆಯನ್ನು ಹೊಂದಿದ್ದಾರೆ.

ಪ್ರಾಚೀನ ಗ್ರೀಕರ ನಂಬಿಕೆ
ಪ್ರಾಚೀನ ಗ್ರೀಕರು ಈಜಿಪ್ಟಿನವರು ಮತ್ತು ರೋಮನ್ನರು ಸೀನುವಿಕೆಯು ಭವಿಷ್ಯದ ವಿಷಯವನ್ನು ಬಹಿರಂಗ ಪಡಿಸುತ್ತದೆ ಎನ್ನುವುದನ್ನು ನಂಬಿದ್ದರು. ಸೀನು ಒಳ್ಳೆಯ ಮತ್ತು ಕೆಟ್ಟ ಶಕುನಗಳೆರಡನ್ನೂ ಪ್ರತಿಬಿಂಬಿಸುವುದು ಎಂದುಕೊಂಡಿದ್ದರು.

ಯುರೋಪಿಯನ್ನರು
ಮಧ್ಯಯುಗದಲ್ಲಿ ಯುರೋಪಿಯನ್ನರು ಸೀನುವುದು ಕೆಟ್ಟ ಶಕುನ ಎಂದು ನಂಬಿದ್ದರು. ಉಸಿರಾಟ ಕ್ರಿಯೆಯಿಂದಲೇ ವ್ಯಕ್ತಿಯ ಜೀವ ನಿಂತಿರುತ್ತದೆ. ಸೀನುವ ಸಮಯದಲ್ಲಿ ಹೊರಹಾಕಲ್ಪಡುವ ಗಮನಾರ್ಹ ಪ್ರಮಾಣದ ಉಸಿರಾಟವು ಭವಿಷ್ಯದಲ್ಲಿ ಮಾರಕವನ್ನು ತರುತ್ತದೆ ಎನ್ನುವ ಭಾವನೆಯನ್ನು ಹೊಂದಿದ್ದರು. ಹಾಗಾಗಿ ಅದೊಂದು ಕೆಟ್ಟ ಶಕುನ ಎಂದು ಪರಿಗಣಿಸಿದರು.

ಇಟಾಲಿಯನ್ ಸಂಸ್ಕೃತಿ
ಇಟಾಲಿಯನ್ ಸಂಸ್ಕತಿಯಲ್ಲಿ ಬೆಕ್ಕಿನ ಸೀನು ಅದೃಷ್ಟವೆಂದು ಪರಿಗಣಿಸಲಾಗಿದೆ. ಇದು ಕೆಟ್ಟ ಅದೃಷ್ಟವನ್ನು ಹೊರಹಾಕುವುದು. ಜೊತೆಗೆ ಸಮೃದ್ಧಿಯನ್ನು ತರುತ್ತದೆ ಎನ್ನುವ ನಂಬಿಕೆಯನ್ನು ಹೊಂದಿದ್ದಾರೆ. ವಧು ತನ್ನ ವಿವಾಹದ ದಿನ ಬೆಕ್ಕಿನ ಸೀನುವಿಕೆಯನ್ನು ಕಂಡರೆ ಅವಳ ವೈವಾಹಿಕ ಜೀವನವು ಅತ್ಯಂತ ಸಂತೋಷದಿಂದ ಕೂಡಿರುತ್ತದೆ ಎಂದು ಹೇಳುತ್ತಾರೆ. ಬೆಕ್ಕು ನಿರಂತರವಾಗಿ ಮೂರು ಬಾರಿ ಸೀನಿದರೆ ಕುಟುಂಬದ ಸದಸ್ಯರು ಮುಂದಿನ ದಿನದಲ್ಲಿ ಶೀತ ಅಥವಾ ನೆಗಡಿಯ ಸಮಸ್ಯೆಯಿಂದ ಬಳಲುತ್ತಾರೆ ಎನ್ನುವುದನ್ನು ಸೂಚಿಸುತ್ತದೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292

ಸೀನುವಿಕೆಯ ಸಂಖ್ಯೆಯ ಭವಿಷ್ಯ:

  • ಸೀನುಗಳ ಸಂಖ್ಯೆಯು ಭವಿಷ್ಯದ ಧನಾತ್ಮಕ ಹಾಗೂ ಋಣಾತ್ಮಕ ಸಂಗತಿಯನ್ನು ಸೂಚಿಸುತ್ತದೆ.
  • ಒಂದೇ ಬಾರಿ ಸೀನು ಬಂದರೆ ವ್ಯಕ್ತಿಯ ಬಗ್ಗೆ ಜನರು ಒಳ್ಳೆಯ ಮಾತನಾಡಲಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ.
  • ಸತತವಾಗಿ ಎರಡು ಸೀನು ಬಂದರೆ ವ್ಯಕ್ತಿಯ ಬಗ್ಗೆ ಜನರು ಕೆಟ್ಟ ಮಾತುಗಳನ್ನು ಆಡುತ್ತಾರೆ ಎನ್ನುವುದನ್ನು ಪ್ರತಿನಿಧಿಸುವುದಂತೆ.
  • ಸತತವಾಗಿ ಮೂರು ಸೀನು ಬಂದರೆ ಯಾರೋ ಆ ವ್ಯಕ್ತಿಯನ್ನು ಪ್ರೀತಿಸುತ್ತಿದ್ದಾರೆ ಅಥವಾ ವ್ಯಕ್ತಿ ಶೀಘ್ರದಲ್ಲಿಯೇ ಪ್ರೀತಿಯ ಬಲೆಯಲ್ಲಿ ಬೀಳುತ್ತಾನೆ ಎನ್ನುವುದನ್ನು ಸೂಚಿಸುವುದು.
  • ಸತತವಾಗಿ ನಾಲ್ಕು ಅಥವಾ ಹೆಚ್ಚು ಬಾರಿ ಸೀನಿದರೆ ಅವರ ಕುಟುಂಬದ ಮೇಲೆ ವಿಪತ್ತು ಬರುವುದು ಎಂದು ಪರಿಗಣಿಸಲಾಗುವುದು.

ವಿಶೇಷ ಸಮಯದ ಸೀನು
ವ್ಯಕ್ತಿ ಮಧ್ಯಾಹ್ನ ಮತ್ತು ಮಧ್ಯರಾತ್ರಿಯಲ್ಲಿ ಸೀನಿದರೆ ಅದು ಅದೃಷ್ಟವೆಂದು ಪರಿಗಣಿಸಲಾಗುವುದು. ಕೆಲವು ಸಂಸ್ಕತಿಯಲ್ಲಿ ಅದನ್ನು ಕೆಟ್ಟ ಶಕುನ ಎಂದು ಪರಿಗಣಿಸಲಾಗುವುದು. ಇಬ್ಬರು ವ್ಯಕ್ತಿಗಳು ಒಂದೇ ಸಮಯದಲ್ಲಿ ಸೀನಿದರೆ, ದೇವರು ಸಂತೋಷವಾಗಿರುತ್ತಾರೆ ಮತ್ತು ಜನರಿಗೆ ಉತ್ತಮ ಆರೋಗ್ಯವನ್ನು ನೀಡುತ್ತಾರೆ ಎನ್ನುವ ನಂಬಿಕೆಯನ್ನು ಹೊಂದಿದ್ದಾರೆ. ಮುಂಜಾನೆ ಎದ್ದಾಗ ಸೀನು ಬಂದರೆ ಅದು ದುರಾದೃಷ್ಟವನ್ನು ಸೂಚಿಸುತ್ತದೆ. ಅಲ್ಲದೆ ಆ ದಿನ ಪೂರ್ತಿ ದುರಾದೃಷ್ಟವೇ ತುಂಬಿರುತ್ತದೆ ಎಂದು ಹೇಳಲಾಗುವುದು.

ಸೀನಿನ ಕುರಿತಾಗಿರುವ ನಂಬಿಕೆಗಳು

  • ಪ್ರಾಚೀನ ನಂಬಿಕೆಗಳ ಪ್ರಕಾರ ವ್ಯಕ್ತಿ ಸೀನುವಾಗ ಬಲ ಭಾಗಕ್ಕೆ ತಲೆಯನ್ನು ತಿರುಗಿಸಿದರೆ ಅದು ಅದೃಷ್ಟ ಎಂದು, ಅದೇ ಸೀನುವಾಗ ಎಡಕ್ಕೆ ತಲೆಯನ್ನು ತಿರುಗಿಸಿದರೆ ಅದು ದುರಾದೃಷ್ಟವೆಂದು ಪರಿಗಣಿಸಲಾಗುತ್ತದೆ.
  • ಯಾವ ವ್ಯಕ್ತಿ ಸೀನುತ್ತಾನೆ ಅವನು ದುಷ್ಟಶಕ್ತಿಯ ಹಿಡಿತದಿಂದ ಮುಕ್ತನಾಗಿರುತ್ತಾನೆ ಎನ್ನಲಾಗುತ್ತದೆ.
  • ಇಬ್ಬರು ಅಥವಾ ಹೆಚ್ಚಿನ ಜನರು ಮಾತನಾಡುತ್ತಿರುವಾಗ ಅವರಲ್ಲಿ ಒಬ್ಬರು ಸೀನಿದರೆ, ಅವರು ಚರ್ಚಿಸುತ್ತಿರುವ ವಿಷಯವು ನಂಬಲು ಅರ್ಹವಾಗಿದೆ ಎನ್ನುವುದನ್ನು ಸೂಚಿಸುವುದು.
  • ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

    ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

    8088827292

Vishwa News 24

Recent Posts

ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್‌ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ – vishwanews24

ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್‌ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ ಮಂಗಳೂರು: ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು…

4 hours ago

ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ – vishwanews24

ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ ಮಂಗಳೂರು  :…

4 hours ago

ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ  – vishwanews24

ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ .. ವಿದ್ಯಾಭ್ಯಾಸ…

4 hours ago

ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಹಣಕಾಸಿನ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ – vishwanews24

ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಹಣಕಾಸಿನ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ ಮುದರಂಗಡಿ: ಕಾಪು ತಾಲೂಕಿನ…

5 hours ago

ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ – vishwanews24

ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ ಕರಾವಳಿ ಹಾಗೂ ಮಲೆನಾಡಿನ ಜನರ ಪಾಸ್‌ಪೋರ್ಟ್…

5 hours ago

ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು – vishwanews24

ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು ನವದೆಹಲಿ: ದೆಹಲಿ-ಪುಣೆ ಸ್ಪೈಸ್‌ಜೆಟ್ (Spice Jet) ವಿಮಾನದಲ್ಲಿ…

6 hours ago