ತೀರ್ಪಿನ ಮೊದಲೇ ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ.. ಗೆದ್ದಿದ್ದು ಬಿಜೆಪಿ!

Featured, ದಕ್ಷಿಣ ಕನ್ನಡ

ಮಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರಳ ಬಹುಮತ ಪಡೆದು ಸರ್ಕಾರ ರಚನೆಗೆ ಜನಾದೇಶ ಪಡೆಯುವಲ್ಲಿ ಮುನ್ನುಗ್ಗಿದೆ. ಮತ್ತೊಂದೆಡೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆಆರ್ ಲೋಬೋ ಬೆಂಬಲಿಗರು ಫಲಿತಾಂಶಕ್ಕೂ ಮುನ್ನ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಆದರೆ  ಈ ಸಂಭ್ರಮ ಹೆಚ್ಚು ಸಮಯ ಉಳಿಯಲಿಲ್ಲ.

ಹೌದು ಜೆಆರ್ ಲೋಬೋ ಬೆಂಬಲಿಗರು, ಯುವ ಕಾಂಗ್ರೆಸ್ ಸದಸ್ಯರು ಮಂಗಳೂರಿನ ಫಳ್ನೀರ್ ಮಿಲಾಗ್ರಿಸ್ ವಾರ್ಡ್ ನಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದರು. ಆದರೆ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ್ದು ಬಿಜೆಪಿಯ ವೇದವ್ಯಾಸ್ ಕಾಮತ್.

ಇಲ್ಲಿ ಜೆಡಿಎಸ್ ನಿಂದ ರತ್ನಾಕರ್ ಸುವರ್ಣ ಕೂಡಾ ಕಣದಲ್ಲಿದ್ದರು. ಮತಎಣಿಕೆಗೂ ಮುನ್ನ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿ, ಮುಖಭಂಗ ಅನುಭವಿಸಿದಂತಾಗಿದೆ.