Featured

ಮಂಗಳೂರು:ಎ.1 ರಿಂದ ಕರಾವಳಿಯ ತಲಪಾಡಿ, ಹೆಜಮಾಡಿ, ಸಾಸ್ತಾನ ಟೋಲ್‌ ದರ ಏರಿಕೆ -Vishwanews24

ಮಂಗಳೂರು:ಎ.1 ರಿಂದ ಕರಾವಳಿಯ ತಲಪಾಡಿ, ಹೆಜಮಾಡಿ, ಸಾಸ್ತಾನ ಟೋಲ್‌ ದರ ಏರಿಕೆ -Vishwanews24

ಮಂಗಳೂರು: ಕರಾವಳಿಯಲ್ಲಿ ಹಾದುಹೋಗುವ ಹೆದ್ದಾರಿಗಳ ವಿವಿಧ ಟೋಲ್ಗಳಲ್ಲಿ ದರ ಪರಿಷ್ಕರಣೆ ಆದೇಶ ಹೊರಡಿಸಲಾಗಿದ್ದು, ಎ. 1ರಿಂದ ಜಾರಿಗೆ ಬರಲಿದೆ.

ನವಯುಗ ಸಂಸ್ಥೆ ನಿರ್ವಹಿಸುವ ತಲಪಾಡಿ, ಹೆಜಮಾಡಿ, ಸಾಸ್ತಾನ ಟೋಲ್ಗೇಟ್ಗಳಿಗೆ ಈ ಆದೇಶ ಅನ್ವಯವಾಗಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ನೇರ ನಿರ್ವಹಣೆ ಮಾಡುವ ಬ್ರಹ್ಮರಕೂಟ್ಲು ಮತ್ತು ಎನ್ಐಟಿಕೆ ಟೋಲ್ಗೇಟ್ಗಳಿಗೆ ಪರಿಷ್ಕೃತ ದರಗಳನ್ನು ಎ. 1ರಂದು ಪ್ರಕಟಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಟೋಲ್ ದರ ಪರಿಷ್ಕರಣೆಯು ಪ್ರತೀ ವರ್ಷ ನಡೆಯುವ ವಾರ್ಷಿಕ ಪ್ರಕ್ರಿಯೆಯಾಗಿದೆ.

ಹೆಜಮಾಡಿ

ಲಘು ವಾಹನಗಳಿಗೆ ಇದ್ದ ಏಕಮುಖ 35 ರೂ. 40 ರೂ.ಗೆ ಮತ್ತು ದ್ವಿಮುಖ ದರ 50ರಿಂದ 60 ರೂ.; ಮಾಸಿಕ ಪಾಸ್ ದರ 1,145ರಿಂದ 1,280 ರೂ.
ಲಘು ವಾಣಿಜ್ಯ ವಾಹನ, ಸರಕು ವಾಹನ, ಮಿನಿ ಬಸ್ಗಳಿಗೆ ಏಕಮುಖ ದರ 55 ರೂ.ನಿಂದ 60 ರೂ.; ದ್ವಿಮುಖ ದರ 85 ರೂ.ನಿಂದ 95 ರೂ.; ಮಾಸಿಕ ಪಾಸ್ 1,850 ರೂ.ನಿಂದ 2,065 ರೂ.ಗೆ. ಟ್ರಕ್, ಬಸ್ಗಳಿಗೆ ಏಕಮುಖ 115 ರೂ.ಗಳಿಂದ 130 ರೂ.; ದ್ವಿಮುಖ 175 ರೂ.ಗಳಿಂದ 195 ರೂ.; ಮಾಸಿಕ ಪಾಸ್ 3,880 ರೂ.ಗಳಿಂದ 4,325 ರೂ.; ಸ್ಥಳೀಯರ ಮಾಸಿಕ ಪಾಸ್ 255 ರೂ.ಗಳಿಂದ 285 ರೂ.

ಇದನ್ನೂ ಓದಿ :ಮಂಗಳೂರು:ಕೋವಿಡ್ ನಿಯಮ ಪಾಲನೆಯೊಂದಿಗೆ ಈಗಾಗಲೇ ಹಮ್ಮಿಕೊಂಡಿರುವ ಧಾರ್ಮಿಕ ಕಾರ್ಯಕ್ರಮ ನಡೆಸಬಹುದು : ಸಚಿವ ಕೋಟ ಸ್ಪಷ್ಟನೆ -Vishwanews24

ತಲಪಾಡಿ

ಲಘು ವಾಹನ: ಏಕಮುಖ ಸಂಚಾರ 40 ರೂ. ಯಥಾವತ್; ದ್ವಿಮುಖ ಸಂಚಾರ 60 ರೂ.ಗಳಿಂದ 65 ರೂ.; ಮಾಸಿಕ ಪಾಸ್ 1,400 ರೂ.
ಲಘು ವಾಣಿಜ್ಯ ವಾಹನ, ಮಿನಿ ಬಸ್: ಏಕಮುಖ ಸಂಚಾರ 65 ರೂ.; ದ್ವಿಮುಖ ಸಂಚಾರ 95 ರೂ.; ಮಾಸಿಕ ಪಾಸ್ 2,155 ರೂ.

ಸಾಸ್ತಾನ

ಲಘು ವಾಹನ: ಏಕಮುಖ ಸಂಚಾರ 45 ರೂ.; ದ್ವಿಮುಖ ದರ 70 ರೂ.; ಮಾಸಿಕ ಪಾಸ್ 1,505 ರೂ.ಗಳಿಂದ 1,555 ರೂ.
ಲಘು ವಾಣಿಜ್ಯ ವಾಹನ, ಮಿನಿ ಬಸ್: ಏಕಮುಖ ಸಂಚಾರ 75 ರೂ.; ದ್ವಿಮುಖ ಸಂಚಾರ 110 ರೂ.ಗಳಿಂದ 115 ರೂ.; ಮಾಸಿಕ ಪಾಸ್ 2,430 ರೂ.ಗಳಿಂದ 2,510 ರೂ.
ಟ್ರಕ್, ಬಸ್: ಏಕಮುಖ ಸಂಚಾರ 155 ರೂ.ಗಳಿಂದ 160 ರೂ.; ದ್ವಿಮುಖ ಸಂಚಾರ 230 ರೂ.ಗಳಿಂದ 235 ರೂ.; ಮಾಸಿಕ ಪಾಸ್ 5,095ಗಳಿಂದ 5,260 ರೂ.; ಸ್ಥಳೀಯರ ಮಾಸಿಕ ಪಾಸ್ 275 ರೂ.ಗಳಿಂದ 285 ರೂ.

ಇದನ್ನೂ ಓದಿ :ಇನ್ಮುಂದೆ ರೈಲಿನಲ್ಲಿ ಮೊಬೈಲ್‌ ಹಾಗೂ ಎಲೆಕ್ಟ್ರಾನಿಕ್‌‌ ಉಪಕರಣಗಳ ಚಾರ್ಜಿಂಗ್ ನಿರ್ಬಂಧ : ಭಾರತೀಯ ರೈಲ್ವೆ -Vishwanews24

Vishwa News 24

Recent Posts

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಗೆ ನೂತನ ಬೆಳ್ಳಿರಥ ಸಮರ್ಪಣೆ -vishwanews24

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಗೆ ನೂತನ ಬೆಳ್ಳಿರಥ ಸಮರ್ಪಣೆ ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಗೆ ಪದ್ಮಶ್ರೀ ಆರ್‌.ಎಂ.ಬಿ. ಆರಾಧ್ಯ…

16 minutes ago

ಉಡುಪಿ:ಅಕ್ರಮವಾಗಿ ದಂಪತಿಗೆ ಮಗು ಪೂರೈಕೆ : ವೈದ್ಯ ಸಹಿತ ಮೂವರ ಬಂಧನ -vishwanews24

ಉಡುಪಿ:ಅಕ್ರಮವಾಗಿ ದಂಪತಿಗೆ ಮಗು ಪೂರೈಕೆ : ವೈದ್ಯ ಸಹಿತ ಮೂವರ ಬಂಧನ ಉಡುಪಿ: ಮಗುವಿಲ್ಲದ ದಂಪತಿಗೆ ಕಾನೂನು ಬಾಹಿರವಾಗಿ ಒಂದು…

34 minutes ago

ಮೈಸೂರು: ಕಾಲೇಜು ಕ್ಯಾಂಪಸ್‌ನಲ್ಲೇ ಹೃದಯಾಘಾತ ; ಕುಸಿದುಬಿದ್ದು ವಿದ್ಯಾರ್ಥಿ ಸಾವು – vishwanews24

ಮೈಸೂರು: ಕಾಲೇಜು ಕ್ಯಾಂಪಸ್‌ನಲ್ಲೇ ಹೃದಯಾಘಾತ ; ಕುಸಿದುಬಿದ್ದು ವಿದ್ಯಾರ್ಥಿ ಸಾವು ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಖ್ಯಾತ ಮರಿಮಲ್ಲಪ್ಪ ಕಾಲೇಜು…

3 days ago

ಅಡ್ಡ ಮತದಾನ ಮೂಲಕ ಪಕ್ಷಕ್ಕೆ ಹಾಗೂ ಮೈತ್ರಿಗೆ ದ್ರೋಹ ಬಗೆದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ : ವಿಜಯೇಂದ್ರ ಆಕ್ರೋಶ – vishwanews24

ಅಡ್ಡ ಮತದಾನ ಮೂಲಕ ಪಕ್ಷಕ್ಕೆ ಹಾಗೂ ಮೈತ್ರಿಗೆ ದ್ರೋಹ ಬಗೆದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ : ವಿಜಯೇಂದ್ರ ಆಕ್ರೋಶ ಬೆಂಗಳೂರು:…

3 days ago

ಭಟ್ಕಳ ಲವ್ ಜಿಹಾದ್ ಆರೋಪ : ಯುವಕ ಅರೆಸ್ಟ್‌ – vishwanews24

ಭಟ್ಕಳ ಲವ್ ಜಿಹಾದ್ ಆರೋಪ : ಯುವಕ ಅರೆಸ್ಟ್‌ ಕಾರವಾರ: ಉತ್ತರ ಕನ್ನಡ  ಜಿಲ್ಲೆಯ ಭಟ್ಕಳದಲ್ಲಿ ಕಿಚ್ಚು ಹಚ್ಚಿದ ಹಿಂದೂ,…

3 days ago

ಪರಿಷತ್ ಚುನಾವಣೆಯಲ್ಲಿ ನಮಗೆ ಮತ ನೀಡಿದ ಬೇರೆ ಪಕ್ಷದ ವಿಶ್ವಾಸವನ್ನುನಾವು ಉಳಿಸಿಕೊಳ್ಳುತ್ತೇವೆ: ಡಿ.ಕೆ.ಶಿವಕುಮಾರ್‌ – vishwanews24

ಪರಿಷತ್ ಚುನಾವಣೆಯಲ್ಲಿ ನಮಗೆ ಮತ ನೀಡಿದ ಬೇರೆ ಪಕ್ಷದ ವಿಶ್ವಾಸವನ್ನುನಾವು ಉಳಿಸಿಕೊಳ್ಳುತ್ತೇವೆ: ಡಿ.ಕೆ.ಶಿವಕುಮಾರ್‌ ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆಯಲ್ಲಿ ನಮ್ಮ…

3 days ago