ಮಂಗಳೂರು: ಕರಾವಳಿಯಲ್ಲಿ ಹಾದುಹೋಗುವ ಹೆದ್ದಾರಿಗಳ ವಿವಿಧ ಟೋಲ್ಗಳಲ್ಲಿ ದರ ಪರಿಷ್ಕರಣೆ ಆದೇಶ ಹೊರಡಿಸಲಾಗಿದ್ದು, ಎ. 1ರಿಂದ ಜಾರಿಗೆ ಬರಲಿದೆ.
ನವಯುಗ ಸಂಸ್ಥೆ ನಿರ್ವಹಿಸುವ ತಲಪಾಡಿ, ಹೆಜಮಾಡಿ, ಸಾಸ್ತಾನ ಟೋಲ್ಗೇಟ್ಗಳಿಗೆ ಈ ಆದೇಶ ಅನ್ವಯವಾಗಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ನೇರ ನಿರ್ವಹಣೆ ಮಾಡುವ ಬ್ರಹ್ಮರಕೂಟ್ಲು ಮತ್ತು ಎನ್ಐಟಿಕೆ ಟೋಲ್ಗೇಟ್ಗಳಿಗೆ ಪರಿಷ್ಕೃತ ದರಗಳನ್ನು ಎ. 1ರಂದು ಪ್ರಕಟಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಟೋಲ್ ದರ ಪರಿಷ್ಕರಣೆಯು ಪ್ರತೀ ವರ್ಷ ನಡೆಯುವ ವಾರ್ಷಿಕ ಪ್ರಕ್ರಿಯೆಯಾಗಿದೆ.
ಹೆಜಮಾಡಿ
ಲಘು ವಾಹನಗಳಿಗೆ ಇದ್ದ ಏಕಮುಖ 35 ರೂ. 40 ರೂ.ಗೆ ಮತ್ತು ದ್ವಿಮುಖ ದರ 50ರಿಂದ 60 ರೂ.; ಮಾಸಿಕ ಪಾಸ್ ದರ 1,145ರಿಂದ 1,280 ರೂ.
ಲಘು ವಾಣಿಜ್ಯ ವಾಹನ, ಸರಕು ವಾಹನ, ಮಿನಿ ಬಸ್ಗಳಿಗೆ ಏಕಮುಖ ದರ 55 ರೂ.ನಿಂದ 60 ರೂ.; ದ್ವಿಮುಖ ದರ 85 ರೂ.ನಿಂದ 95 ರೂ.; ಮಾಸಿಕ ಪಾಸ್ 1,850 ರೂ.ನಿಂದ 2,065 ರೂ.ಗೆ. ಟ್ರಕ್, ಬಸ್ಗಳಿಗೆ ಏಕಮುಖ 115 ರೂ.ಗಳಿಂದ 130 ರೂ.; ದ್ವಿಮುಖ 175 ರೂ.ಗಳಿಂದ 195 ರೂ.; ಮಾಸಿಕ ಪಾಸ್ 3,880 ರೂ.ಗಳಿಂದ 4,325 ರೂ.; ಸ್ಥಳೀಯರ ಮಾಸಿಕ ಪಾಸ್ 255 ರೂ.ಗಳಿಂದ 285 ರೂ.
ತಲಪಾಡಿ
ಲಘು ವಾಹನ: ಏಕಮುಖ ಸಂಚಾರ 40 ರೂ. ಯಥಾವತ್; ದ್ವಿಮುಖ ಸಂಚಾರ 60 ರೂ.ಗಳಿಂದ 65 ರೂ.; ಮಾಸಿಕ ಪಾಸ್ 1,400 ರೂ.
ಲಘು ವಾಣಿಜ್ಯ ವಾಹನ, ಮಿನಿ ಬಸ್: ಏಕಮುಖ ಸಂಚಾರ 65 ರೂ.; ದ್ವಿಮುಖ ಸಂಚಾರ 95 ರೂ.; ಮಾಸಿಕ ಪಾಸ್ 2,155 ರೂ.
ಸಾಸ್ತಾನ
ಲಘು ವಾಹನ: ಏಕಮುಖ ಸಂಚಾರ 45 ರೂ.; ದ್ವಿಮುಖ ದರ 70 ರೂ.; ಮಾಸಿಕ ಪಾಸ್ 1,505 ರೂ.ಗಳಿಂದ 1,555 ರೂ.
ಲಘು ವಾಣಿಜ್ಯ ವಾಹನ, ಮಿನಿ ಬಸ್: ಏಕಮುಖ ಸಂಚಾರ 75 ರೂ.; ದ್ವಿಮುಖ ಸಂಚಾರ 110 ರೂ.ಗಳಿಂದ 115 ರೂ.; ಮಾಸಿಕ ಪಾಸ್ 2,430 ರೂ.ಗಳಿಂದ 2,510 ರೂ.
ಟ್ರಕ್, ಬಸ್: ಏಕಮುಖ ಸಂಚಾರ 155 ರೂ.ಗಳಿಂದ 160 ರೂ.; ದ್ವಿಮುಖ ಸಂಚಾರ 230 ರೂ.ಗಳಿಂದ 235 ರೂ.; ಮಾಸಿಕ ಪಾಸ್ 5,095ಗಳಿಂದ 5,260 ರೂ.; ಸ್ಥಳೀಯರ ಮಾಸಿಕ ಪಾಸ್ 275 ರೂ.ಗಳಿಂದ 285 ರೂ.
ಇದನ್ನೂ ಓದಿ :ಇನ್ಮುಂದೆ ರೈಲಿನಲ್ಲಿ ಮೊಬೈಲ್ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳ ಚಾರ್ಜಿಂಗ್ ನಿರ್ಬಂಧ : ಭಾರತೀಯ ರೈಲ್ವೆ -Vishwanews24
ಉಡುಪಿ ಮಲಬಾರ್ ಗೋಲ್ಡ್ನಲ್ಲಿ ಹಫೀಝ್ ರೆಹಮಾನ್ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…