ಮಂಗಳೂರು : ಕರ್ನಾಟಕ ಬಂದ್ಗೆ ನಾವು ಕೂಡಾ ಬೆಂಬಲ ನೀಡಿದ್ದೇವೆ, ಸರ್ಕಾರ ಬಂದ್ ಮಾಡುವವರನ್ನು ಕರೆದು ಸಮಸ್ಯೆ ಬಗೆಹರಿಸಬೇಕು : ಯು.ಟಿ.ಖಾದರ್ -Vishwanews24
ಮಂಗಳೂರು : “ಪ್ರಸ್ತುತವಾಗಿ ಎಲ್ಲಾ ಕಡೆಗಳಲ್ಲಿ ಖಾಸಗೀಕರಣವಾಗಿದೆ. ಹಾಗಾಗಿ ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಉದ್ಯೋಗ ದೊರೆಯಬೇಕು ಎಂಬ ಬೇಡಿಕೆ ಸಾಮಾನ್ಯ. ಆ ಹಿನ್ನಲೆಯಲ್ಲಿ ಈ ಕರ್ನಾಟಕ ಬಂದ್ಗೆ ನಾವು ಕೂಡಾ ಬೆಂಬಲ ನೀಡಿದ್ದೇವೆ” ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಸರ್ಕಾರ ಬಂದ್ ಮಾಡುವವರನ್ನು ಕರೆದು ಸಮಸ್ಯೆ ಬಗೆಹರಿಸಬೇಕು. ಆದರೆ ಸರ್ಕಾರ ಬಂದ್ ಮಾಡುವವರ ಬಳಿ ಮಾತನಾಡಲು ತಯಾರಿಲ್ಲ. ಚರ್ಚೆ ನಡೆಸಿದರಲ್ಲವೇ ಸಮಸ್ಯೆ ಬಗೆಹರಿಸಲು ಸಾಧ್ಯ, ಆದರೆ ಸರ್ಕಾರ ಚರ್ಚೆ ಮಾಡಲು ತಯಾರಿಲ್ಲ” ಎಂದಿದ್ದಾರೆ.
“ಸರ್ಕಾರವು ಖಾಸಗೀ ಕಂಪೆನಿಯವರೊಂದಿಗೂ ಚರ್ಚೆ ನಡೆಸಬೇಕು. ಸ್ಥಳೀಯರಿಗೆ ಉದ್ಯೋಗ ಕಲ್ಪಿಸಲು ಸಮಸ್ಯೆಯೇನು ಎಂದು ಪ್ರಶ್ನಿಸಬೇಕು. ಹಾಗೆಯೇ ಈ ವರದಿಯನ್ನು ಎಷ್ಟು ಅನುಷ್ಟಾನ ತರಬಹುದು ಎಂಬುದರ ಕುರಿತಾಗಿಯೂ ಚರ್ಚೆ ನಡೆಸಬೇಕು” ಎಂದು ಅವರು ಹೇಳಿದರು.
ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.
ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್
8088827292
