ಮಂಗಳೂರು : ಕುಕ್ಕರ್‌ಬಾಂಬ್ ಸ್ಪೋಟ –  ಗಾಯಗೊಂಡ ರಿಕ್ಷಾ ಚಾಲಕನನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಗೃಹ ಸಚಿವ ಅರಗ ಜ್ಞಾನೇಂದ್ರ – Vishwanews24

Featured, ದಕ್ಷಿಣ ಕನ್ನಡ

ಕುಕ್ಕರ್‌ಬಾಂಬ್ ಸ್ಪೋಟ –  ಗಾಯಗೊಂಡ ರಿಕ್ಷಾ ಚಾಲಕನನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಗೃಹ ಸಚಿವ ಅರಗ

ಪುರುಷೋತ್ತಮ ಪೂಜಾರಿಯವರಿಗೆ ವೈಯುಕ್ತಿ ರೂ 50000 ಆರ್ಥಿಕ ನೆರವು ನೀಡಿದ ಸಚಿವರು

ಮಂಗಳೂರು: ನಗರದ ನಾಗೋರಿಯಲ್ಲಿ ಇತ್ತೀಚೆಗೆ ಆಟೋದಲ್ಲಿ ಕುಕ್ಕರ್‌ಬಾಂಬ್ ಸ್ಪೋಟದಿಂದ ಗಾಯಗೊಂಡ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿಯ ಆರೋಗ್ಯವನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ವಿಚಾರಿಸಿದರು.

ಘಟನಾ ಸ್ಥಳದಲ್ಲಿ ಪರಿಶೀಲನೆ ಬಳಿಕ ನೇರವಾಗಿ ಮಂಗಳೂರು ನಗರದ ಕಂಕನಾಡಿಯಲ್ಲಿರುವ ಫಾ. ಮುಲ್ಲರ್ ಆಸ್ಪತ್ರೆಗೆ ಬಂದ ಗೃಹ ಸಚಿವರು ಗಾಯಾಳು ಪುರುಷೋತ್ತಮ ಪೂಜಾರಿ ಆರೋಗ್ಯ ವಿಚಾರಿಸಿದರು.

🚫 ಚಿಕ್ಕಮಗಳೂರು : ಹೊರನಾಡಿಗೆ ಸಂಚರಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಜೀಪ್ – ಚಾಲಕಿ ಸಾವು – Vishwanews24

ಗೃಹಸಚಿವರಿಗೆ ಡಿಜಿಪಿ ಪ್ರವೀಣ್ ಸೂದ್, ಪಶ್ಚಿಮ ವಲಯ ಐಜಿಪಿ ಡಾ ಚಂದ್ರಗುಪ್ತ, ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್, ದಕ್ಷಿಣಕನ್ನಡ ಜಿಲ್ಲಾಧಿಕಾರಿ ಎಂ.ಆರ್ ರವಿಕುಮಾರ್ ಸಾಥ್ ನೀಡಿದರು.

ಇದೇ ವೇಳೆ ಗೃಹ ಸಚಿವರು ಪುರುಷೋತ್ತಮ ಪೂಜಾರಿಯವರಿಗೆ ವೈಯುಕ್ತಿವಾಗಿ ರೂ 50000 ಆರ್ಥಿಕ ನೆರವು ನೀಡಿದರು.

Leave a Reply