ಮಂಗಳೂರು: ಜನ ಸೇವೆಗೆ ಅಧಿಕಾರಿಯೇ ಆಗಿರಬೇಕೆಂದಿಲ್ಲ : ಶಶಿಕಾಂತ್ ಸೆಂಥಿಲ್ -Vishwanews24
ಮಂಗಳೂರು: ರಾಜ್ಯ ಕೇಂದ್ರ ಸರ್ಕಾರದಿಂದ ಯಾವುದೇ ಸಮಸ್ಯೆ ಒತ್ತಡದಿಂದ ನಾನು ರಾಜೀನಾಮೆ ನೀಡಿಲ್ಲ ಎಂದು ದ.ಕ. ಮಾಜಿ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಸ್ಪಷ್ಟಪಡಿಸಿದರು.
ಗಾಂಧಿ 150 ಚಿಂತನಾ ಯಾತ್ರೆ ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಬುಧವಾರ ಮಂಗಳೂರಿಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಆಡಳಿತ ಸೇವೆಯಲ್ಲಿ ಕೆಲಸ ಮಾಡಿದ ಮೂರು ಜಿಲ್ಲೆಗಳಲ್ಲಿಯೂ ಮೂರು ಪಕ್ಷದ ಮುಖಂಡರು ಸಹಕಾರ ನೀಡಿದ್ದಾರೆ. ರಾಜೀನಾಮೆ ಸ್ವಂತ ನಿರ್ಧಾರ. ಕಾರಣವನ್ನು ಪತ್ರದಲ್ಲಿ ಈಗಾಗಲೇ ಉಲ್ಲೇಖಿಸಿದ್ದೇನೆ. ಮುಂದೇನು ಮಾಡಬೇಕು ಎಂದು ನಿರ್ಧರಿಸಿಲ್ಲ. ಜನ ಸೇವೆಗೆ ಅಧಿಕಾರಿಯೇ ಆಗಿರಬೇಕೆಂದಿಲ್ಲವಲ್ಲ ಎಂದರು.
ನನ್ನ ರಾಜೀನಾಮೆ ಅಂಗೀಕಾರ ಇನ್ನೂ ಆಗಿಲ್ಲ. ಅದು ಸರ್ಕಾರಕ್ಕೆ ಬಿಟ್ಟ ವಿಚಾರ. ಚುನಾವಣಾ ರಾಜಕೀಯದ ಬಗ್ಗೆ ನನಗೆ ಯಾವುದೇ ಆಸಕ್ತಿ ಇಲ್ಲ. ಬೆಂಗಳೂರಿನಲ್ಲಿದ್ದುಕೊಂಡೇ ನನ್ನ ಜನಸೇವೆಯ ಕೆಲಸಗಳನ್ನು ಮುಂದುವರಿಸುತ್ತೇನೆ ಎಂದರು.
