ಮಂಗಳೂರು: ತುಳು ಭಾಷೆಯ ಅಧಿಕೃತ ಮಾನ್ಯತೆಗಾಗಿ ವಿವಿಧ ತುಳುಪರ ಸಂಘಟನೆಗಳು ಪಿಪಿಇ ಕಿಟ್ ಧರಿಸಿ ಪ್ರತಿಭಟನೆ – Vishwanews24
ಮಂಗಳೂರು: ತುಳು ಭಾಷೆಯ ಅಧಿಕೃತ ಮಾನ್ಯತೆಗಾಗಿ ವಿವಿಧ ತುಳುಪರ ಸಂಘಟನೆಗಳು ಪಿಪಿಇ ಕಿಟ್ ಧರಿಸಿ ಪ್ರತಿಭಟನೆ – Vishwanews24
ಮಂಗಳೂರು: ತುಳು ಭಾಷೆಗೆ ಅಧಿಕೃತ ಸ್ಥಾನಮಾನ ಸಿಗಬೇಕು ಎನ್ನುವ ಸಲುವಾಗಿ ವಿವಿಧ ತುಳು ಸಂಘಟನೆಗಳು, ಕಾರ್ಯಕರ್ತರು ಹಾಗೂ ನಾಯಕರು ಅ.5ರ ಮಂಗಳವಾರದಂದು ಕರೆ ನೀಡಿದ್ದ ಶಾಂತಿ ಪ್ರತಿಭಟನೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಪೊಲೀಸರ ಈ ನಡೆಯ ವಿರುದ್ದ ತುಳುಪರ ಸಂಘಟನೆಗಳು ಅಸಮಾಧಾನಗೊಂಡಿದ್ದು, ಪೊಲೀಸ್ ಇಲಾಖೆಯ ಕ್ರಮವನ್ನು ಖಂಡಿಸಿದ್ದಾರೆ.
ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡಬೇಕು ಎಂದು ಒತ್ತಾಯಿಸಿ ಅ.5ರ ಮಂಗಳವಾರದಂದು ವಿವಿಧ ತುಳುಪರ ಸಂಘಟನೆಗಳು ಪಿಪಿಇ ಕಿಟ್ ಧರಿಸಿ ಪ್ರತಿಭಟನೆ ನಡೆಸಿದ್ದಾರೆ.
ಉಡುಪಿ : ಜಿಲ್ಲೆಯಲ್ಲಿ ಶೇ.100ರಷ್ಟು ಮೊದಲ ಡೋಸ್ ಲಸಿಕೆ ನೀಡಿಕೆ: ಸಚಿವ ಡಾ.ಸುಧಾಕರ್ ಮೆಚ್ಚುಗೆ – Vishwanews24
ಮುಂದಿನ ದಿನಗಳಲ್ಲಿ ತುಳುಪರ ಚಟುವಟಿಕೆಗಳಿಗೆ ಅವಕಾಶ ನೀಡಲಾಗುವುದು ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.
ಈ ವರ್ಷದ ಡಿಸೆಂಬರ್ಗಿಂತ ಮುನ್ನ ತುಳುವರಿಂದ ಶಾಂತಿಯುತ ಪ್ರತಿಭಟನೆ ನಡೆಸಲಾಗುವುದು. ತುಳುಭಾಷೆಗೆ ಅಧಿಕೃತ ಮಾನ್ಯತೆ ಸಿಗದೇ ಇದ್ದಲ್ಲಿ ತೀವ್ರ ಸ್ವರೂಪದ ಪ್ರತಿಭಟನೆ ಆರಂಭಿಸಲಾಗುವುದು ಎಂದು ರೋಶನ್ ರೊನಾಲ್ಡ್ ಹೇಳಿದ್ಧಾರೆ.
ಗೌತಮ್ ಬೋಲ್ತೆರ್, ರೋಷನ್ ರೊನಾಲ್ಡ್, ಜಿತೇಶ್ ಶೆಟ್ಟಿ, ರೂಪೇಶ್ ಪೂಜಾರಿ ಹಾಗೂ ಸಂತೋಷ್ ಕುಡ್ಲ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
