Featured

ಮಂಗಳೂರು : ದೇಶದ ಹಿತಕ್ಕಾಗಿ ಎನ್ ಐಎ ಜತೆ ಉಗ್ರ ನಿರ್ಮೂಲನಕ್ಕೆ ಸಹಕರಿಸಿ  : ಶಾಸಕ ಡಾ. ಭರತ್ ಶೆಟ್ಟಿ – Vishwanews24

ಮುಸ್ಲಿಂ ಯುವಕರಿಗೆ ಉಗ್ರ ಕೃತ್ಯ ನಡೆಸಲು ಹಣಕಾಸು ಬೆಂಬಲ ನೀಡುವ ಜನರನ್ನು, ಹಾಗೂ ಸಂಘಟನೆಗಳನ್ನು ಬಹಿಷ್ಕರಿಸಿ

ದೇಶದ ಹಿತಕ್ಕಾಗಿ ಎನ್ ಐಎ ಜತೆ ಉಗ್ರ ನಿರ್ಮೂಲನಕ್ಕೆ ಸಹಕರಿಸಿ

ಮಂಗಳೂರು: ಮಂಗಳೂರಿನಲ್ಲಿ ನಡೆದ ಉಗ್ರರ ಕೃತ್ಯವನ್ನು ಮುಸ್ಲಿಂ ಜಮಾತ್ ಗಳು, ಮುಸ್ಲಿಂ ಮುಖಂಡರು ಖಂಡಿಸುವ ಮೂಲಕ ಮತ್ತು ಇಂತಹ ಕೃತ್ಯಗಳಿಗಾಗಿ ಮುಸ್ಲಿಂ ಯುವಕರ ತಲೆಯಲ್ಲಿ ಮತಾಂಧತೆಯನ್ನು ತುಂಬಿಸಿ ಉಗ್ರ ಕೃತ್ಯ ನಡೆಸಲು ಹಣಕಾಸು ನೀಡುವ, ಬೆಂಬಲ ನೀಡಿದ ಜನರನ್ನು, ಹಾಗೂ ಸಂಘಟನೆಗಳನ್ನು ಬಹಿಷ್ಕರಿಸಿ ದೂರವಿಡುವ ಮೂಲಕ ದೇಶದ ಹಿತಕ್ಕಾಗಿ ಎನ್ ಐಎ ಜತೆ ಉಗ್ರ ನಿರ್ಮೂಲನಕ್ಕೆ ಸಹಕರಿಸಬೇಕಾಗಿದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ವೈ ಒತ್ತಾಯಿಸಿದ್ದಾರೆ.

ಮಂಗಳೂರು ಸ್ಪೋಟಕ್ಕೆ ಇಸ್ಲಾಮಿಕ್ ರೆಸಿಸ್ಟನ್ಸ್ ಕೌನ್ಸಿಲ್ ಹೊಣೆ ಹೊತ್ತಿದೆ. ಸರಕಾರ ಉಗ್ರ ನಿಗ್ರಹಕ್ಕೆ ಬೇಕಾದ ಕ್ರಮ ಕೈಗೊಳ್ಳುತ್ತದೆ. ಇದರ ಹಿಂದೆ ಯಾರು ಇದ್ದಾರೆ ಎಂಬುದನ್ನು ಸಮುದಾಯದ ನಾಯಕರು ಗುರುತಿಸಿ ಮಾಹಿತಿ ನೀಡಿ ಇಂತಹ ಕೃತ್ಯ ಮುಂದೆ ನಡೆಯದಂತೆ ಎಚ್ಚೆತ್ತುಕೊಳ್ಳಬೇಕು. ಸಾಮರಸ್ಯ, ಭ್ರಾತೃತ್ವ ಕೇವಲ ಬಾಯಿ ಮಾತಾಗದಿರಲಿ. ಆಡಿದ್ದನ್ನು ಮಾಡಿ ತೋರಿಸುವ ಗುಣವೂ ಇರಬೇಕಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಕೆ ಜಿ ಹಳ್ಳಿ, ಡಿ ಜೆ ಹಳ್ಳಿ ಘಟನೆ ನಡೆದಾಗಲೇ ಎಚ್ಚೆತ್ತುಕೊಂಡು ಮುಸ್ಲಿಂ ಮುಖಂಡರು ಸಮುದಾಯದಲ್ಲಿ ಮತಾಂಧತೆಯನ್ನು ಹೆಚ್ಚಿಸಿಕೊಂಡು ದಾರಿ ತಪ್ಪಿದ, ಭಯೋತ್ಪಾದನೆಯಲ್ಲಿ ನಿರತವಾಗಿರುವವರ ಗೌಪ್ಯ ಮಾಹಿತಿಯನ್ನು ಎನ್ ಐಎಗೆ ನೀಡಬೇಕಿತ್ತು. ಇದನ್ನು ಸಮುದಾಯ ನಿರ್ಲಕ್ಷಿಸಿದ್ದರಿಂದಲೇ ಮಂಗಳೂರು ಘಟನೆ ನಡೆಯಲು ಕಾರಣವಾಗಿದೆ.

ದೇಶ, ವಿದೇಶದಿಂದ ಹಣ ಪಡೆದು, ಭಯೋತ್ಪಾದನೆಯನ್ನು ನಡೆಸುತ್ತಿರುವುದರ ಘಟನೆಗಳನ್ನು ಸಮುದಾಯದ ನಾಯಕರು ಗಂಭೀರವಾಗಿ ಪರಿಗಣಿಸದೆ ಇದ್ದ ಪರಿಣಾಮ ಮಂಗಳೂರಿನಲ್ಲಿ ಭಾರೀ ಅನಾಹುತದ ಸಂಚು ರೂಪಿತವಾಗಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಆರೋಪಿಸಿದ್ದಾರೆ.

Vishwa News 24

Recent Posts

ಉಡುಪಿ : ಆ. 20 ರಂದು ನೇರ ಸಂದರ್ಶನ -vishwanews24

ಉಡುಪಿ : ಆ. 20 ರಂದು ನೇರ ಸಂದರ್ಶನ ಉಡುಪಿ : ನಗರದ ಅಂಬಲಪಾಡಿ ಕರಾವಳಿ ಬೈಪಾಸ್ ಬಳಿಯ ರೀಗಲ್…

7 hours ago

ಉಡುಪಿ: ಗೃಹ ಜ್ಯೋತಿ ಫಲಾನುಭವಿಗಳು ಮರುಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಿ: ರಮೇಶ್ ಕಾಂಚನ್ -vishwanews24

ಉಡುಪಿ: ಗೃಹ ಜ್ಯೋತಿ ಫಲಾನುಭವಿಗಳು ಮರುಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಿ: ರಮೇಶ್ ಕಾಂಚನ್ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮನೆಗಳ ಮರುಪರಿಶೀಲನೆಗೆ…

7 hours ago

ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಆಗ್ರಹ: ಆ.22ರಂದು ಉಡುಪಿಯಲ್ಲಿ ಸಭೆ -vishwanews24

ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಆಗ್ರಹ: ಆ.22ರಂದು ಉಡುಪಿಯಲ್ಲಿ ಸಭೆ ಉಡುಪಿ: ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ…

7 hours ago

ಉಡುಪಿ: ಗಣಪತಿ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಹೆಚ್ಚುವರಿ ಸಂಚಾರ -vishwanews24

ಉಡುಪಿ: ಗಣಪತಿ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಹೆಚ್ಚುವರಿ ಸಂಚಾರ ಉಡುಪಿ: ಗಣಪತಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಬೇಡಿಕೆಗೆ ಅನುಸಾರ…

7 hours ago

ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ  ಮೃತದೇಹ ಪತ್ತೆ -vishwanews24

ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ  ಮೃತದೇಹ ಪತ್ತೆ ಉಳ್ಳಾಲ : ಮೀನುಗಾರಿಕೆಗೆ ತೆರಳಿದ್ದ ವೇಳೆ ದೈತ್ಯ ಗಾತ್ರದ ಅಲೆಗೆ…

2 days ago

ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ -vishwanews24

ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ ಬೆಂಗಳೂರು : ನಟಿ ಅನುಪಮಾ ಗೌಡ ಅವರು ನಟನೆಯ ಮೂಲಕ…

2 days ago