ಮಂಗಳೂರು: ದ್ವೇಷದ ರಾಜಕಾರಣ ಮಾಡುವ ಪರಿಪಾಠ ಕಾಂಗ್ರೆಸ್ ಪ್ರಾರಂಭ ಮಾಡಿದೆ: ಹರೀಶ್ ಪೂಂಜಾ – vishwanews24
ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವೇ ಆಡಳಿತದಲ್ಲಿ ಇರುತ್ತದೆ ಎನ್ನುವ ಭಾವನೆ ಇದ್ದರೆ ಅದನ್ನು ತೆಗೆದು ಹಾಕಿ : ಶಾಸಕ ಹರೀಶ್ ಪೂಂಜ
ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದ್ವೇಷದ ರಾಜಕಾರಣ ಮಾಡುವ ಪರಿಪಾಠವನ್ನು ಪ್ರಾರಂಭ ಮಾಡಿದೆ. ರಾಜ್ಯದಲ್ಲಿ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲದ, ಜನ ಸಮಾನ್ಯರ ಕಷ್ಟ ಸುಖದಲ್ಲಿ ಭಾಗಿಯಾಗಲು ಸಾಧ್ಯವಿಲ್ಲದ ಸರಕಾರ ದ್ವೇಷದ ರಾಜಕಾರಣ ಮಾಡಿ ದಿನ ಕಳೆಯುವ ಕೆಲಸದಲ್ಲಿ ಸರಕಾರ ತೊಡಗಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಆರೋಪ ಮಾಡಿದ್ದಾರೆ.
ಶುಕ್ರವಾರ ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನಪ್ರತಿನಿಧಿಗಳು ಅದರಲ್ಲೂ ಬಿಜೆಪಿಯ ಶಾಸಕರ ಮೇಲೆ ವಿನಾಕಾರಣ ಮೊಕದ್ದಮೆಗಳನ್ನು ದಾಖಲಿಸುವ ಪ್ರವೃತ್ತಿಯನ್ನು ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರ ಹಾಕಿಕೊಟ್ಟಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವೇ ಆಡಳಿತದಲ್ಲಿ ಇರುತ್ತದೆ ಎನ್ನುವ ಭಾವನೆ ಇದ್ದರೆ ಅದನ್ನು ತೆಗೆದು ಹಾಕಿ. ಈ ರೀತಿಯ ದ್ವೇಷದ ರಾಜಕಾರಣ ಮಾಡಲು ಮುಂದೆ ಬಿಜೆಪಿ ಸರಕಾರ ಬಂದಾಗ ನಮಗೂ ಸಾಧ್ಯವಿದೆ. ಜನಪ್ರತಿಧಿಯಾಗಿ ಸಮಾಜದ ಒಳಿತನ್ನು ಕಾಪಾಡುವ ಶಾಸಕರ ಮೇಲೆಯೇ ವಿನಾಕಾರಣ ಮೊಕದ್ದಮೆ ಹಾಕುವುದನ್ನು ಸಹಿಸಲು ಸಾಧ್ಯವಿಲ್ಲ ಎಂದರು.
