ಮಂಗಳೂರು: ಬಜ್ಪೆಯ ದಸರಾ ಶೋಭಾಯಾತ್ರೆಯಲ್ಲಿ ಆಕರ್ಷಣೆ ಪಡೆದ ಯೋಗಿ ಆದಿತ್ಯನಾಥ್ ಟ್ಯಾಬ್ಲೊ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಬಜ್ಪೆಯ ದಸರಾ ಶೋಭಾಯಾತ್ರೆಯಲ್ಲಿ ಆಕರ್ಷಣೆ ಪಡೆದ ಯೋಗಿ ಆದಿತ್ಯನಾಥ್ ಟ್ಯಾಬ್ಲೊ

ಮಂಗಳೂರು: ಅಕ್ರಮ ಕಟ್ಟಡಗಳನ್ನು ಕೆಡಹುವ ಮೂಲಕ ಅನಧಿಕೃತವಾಗಿ ಕಟ್ಟಡ ನಿರ್ಮಿಸಿದ್ದವರ ಎದೆಯಲ್ಲಿ ನಡುಕ ಹುಟ್ಟಿಸಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ವಿಶೇಷತೆಗಳನ್ನು ಬಿಂಬಿಸುವ ಟ್ಯಾಬ್ಲೋ ನಿನ್ನೆ ಮಂಗಳೂರಿನ ಬಜ್ಪೆಯಲ್ಲಿ ನಡೆದ ದಸರಾದ ಶೋಭಾಯಾತ್ರೆಯಲ್ಲಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ವಿಶ್ವಹಿಂದು ಪರಿಷತ್‌ ಮತ್ತು ಬಜರಂಗದಳದ ವತಿಯಿಂದ ರೂಪಿಸಲಾಗಿದ್ದ ಈ ಟ್ಯಾಬ್ಲೋದಲ್ಲಿ ಯೋಗಿ ಆದಿತ್ಯನಾಥ್ ಅವರನ್ನು ಹೋಲುವ ವ್ಯಕ್ತಿ ಸಂಪೂರ್ಣವಾಗಿ ಕೇಸರಿ ಕುರ್ತಾ , ಫೈಜಾಮ ಧರಿಸಿದ್ದು, ಅಕ್ರಮ ಕಟ್ಟಡಗಳನ್ನು ಕೆಡಹುವ ನಿರ್ದೇಶನವನ್ನು ನೀಡುತ್ತಿದ್ದಾರೆ.

ಶಿರ್ವ : ಬೈಕ್‌ಗೆ ರಿಕ್ಷಾ ಢಿಕ್ಕಿ ; ಸವಾರ ಬಂಟಕಲ್ ಫ್ಯಾನ್ಸಿ ಸ್ಟೋರ್‌ ಮಾಲಕ ಸಾವು – Vishwanews24

ಬುಲ್ಡೋಜರನ್ನು ಟ್ಯಾಬ್ಲೋದ ಮೇಲಿಟ್ಟು ಅದರ ಒಳಗೆ ಇದ್ದ ಇಬ್ಬರು ಚಾಲಕರು ಅನಧಿಕೃತ ಕಟ್ಟಡಗಳನ್ನು ಕೆಡಹುವ ಮಾದರಿಯಲ್ಲಿ ಅದನ್ನು ತಿರುಗಿಸುತ್ತಿದ್ದಾರೆ.

ಇನ್ನು ಯೋಗಿ ಆದಿತ್ಯನಾಥ್‌ ಅವರ ಭದ್ರತೆಗೆ ನಿಯೋಜಿಸಲಾಗಿರುವ ಮೂವರು ಗನ್‌ಮ್ಯಾನ್‌ಗಳು ಕೂಡಾ ಟ್ಯಾಬ್ಲೋದಲ್ಲಿ ಇರುವುದು ವಿಶೇಷವಾಗಿದೆ.

ಮಂಗಳೂರು: ಪರೇಶ್ ಮೇಸ್ತ ಕೇಸ್ ಮರು ತನಿಖೆಗೆ ಮನವಿ : ಸಚಿವ ಕೋಟ – Vishwanews24

 

Leave a Reply