ಮಂಗಳೂರು – ಮಸ್ಕತ್ ನೇರ ವಿಮಾನ ಸೇವೆ ಮಾರ್ಚ್‌ನಲ್ಲಿ ಪುನಾರಾರಂಭ – vishwanews24

Featured, ದಕ್ಷಿಣ ಕನ್ನಡ

ಮಂಗಳೂರು – ಮಸ್ಕತ್ ನೇರ ವಿಮಾನ ಸೇವೆ ಮಾರ್ಚ್‌ನಲ್ಲಿ ಪುನಾರಾರಂಭ

ಉಡುಪಿ: ಮಂಗಳೂರು- ಮಸ್ಕತ್‌ ನಡುವೆ ನೇರ ಸಂಚಾರ ಮಾಡುತ್ತಿದ್ದ ವಿಮಾನ ಸೇವೆ ಯನ್ನು ಪುನಃ ಆರಂಭಿ ಸುವ ನಿಟ್ಟಿನಲ್ಲಿ ಈಗಾಗಲೇ ಏರ್ ಇಂಡಿಯಾ ಸಂಸ್ಥೆ ನಿರ್ಧರಿಸಿದ್ದು ಮಾರ್ಚ್‌ ತಿಂಗಳಿಂದ ಈ ಸೇವೆ ಆರಂಭವಾಗಲಿದೆ ಎಂದು ಕೇಂದ್ರ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಕಿಂಜರಾಪು ತಿಳಿಸಿದ್ದಾರೆ.

ಮಸ್ಕತ್ – ಮಂಗಳೂರು ನೇರ ವಿಮಾನ ಸೇವೆ ಪುನರಾರಂಭಿಸುವ ಬಗ್ಗೆ ಸಂಸದ ಕೋಟ ಶ್ರೀನಿವಾಸಪೂಜಾರಿಯವರು ಕೇಂದ್ರ ವಿಮಾನ ಯಾನ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದರು.

ಇದನ್ನೂ ಓದಿ: 

ಉಡುಪಿ : ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಭಾಷೆ ಬಳಕೆ ಕಡ್ಡಾಯ – vishwanews24

ಸಂಸದರ ಪತ್ರದ ಹಿನ್ನೆಲೆಯಲ್‌ಲ್ಲಿ ಏರ್‌ಇಂಡಿಯಾ ಸಂಸ್ಥೆಯೊಂದಿಗೆ ಸಮಾಲೋಚನೆ ಮಾಡಲಾಗಿದ್ದು ಮಾರ್ಚ್‌ನಿಂದ ವಿಮಾನಯಾನ ಪುನರಾರಂಭಿಸುವ ಕುರಿತು ಸಂಸ್ಥೆಯು ನಿರ್ಣಯ ತೆಗೆದುಕೊಂಡಿದೆ ಎಂದು ಸಚಿವರು ಮಾಹಿತಿ ನೀಡಿದರು.

ಕರಾವಳಿ ಜಿಲ್ಲೆಯಿಂದ ಮಸ್ಕತ್ ಹೋಗಿ ನೆಲೆಸಿರುವವರಿಗೆ ಈ ಸೇವೆ ಯಿಂದ ಹೆಚ್ಚಿನ ಅನುಕೂಲವಾಗಲಿದೆ. ಕರಾವಳಿ ಭಾಗದ ಅನೇಕರು ಅರಬ್ ದೇಶಗಳಲ್ಲಿ ಉದ್ಯೋಗ, ಶಿಕ್ಷಣ ಸಹಿತ ನಾನಾ ಉದ್ದೇಶಕ್ಕೆ ನೆಲೆಯಾಗಿದ್ದಾರೆ.

ಇದನ್ನೂ ಓದಿ: 

ಗೋಧಾಮದ ಮೂಲಕ ಮುನಿಯಾಲಿನ ಹೆಸರು ಜಾಗತಿಕ ಮಟ್ಟದಲ್ಲಿ ರಾರಾಜಿಸುವಂತೆ ಆಗಿದೆ : ಉದಯ ಕುಮಾರ್ ಶೆಟ್ಟಿ – vishwanews24

Leave a Reply