ಮಂಗಳೂರು: ರೌಡಿಶೀಟರ್‌ ಇಂದ್ರಜಿತ್ ಹತ್ಯೆ ಪ್ರಕರಣ : 8 ಮಂದಿ ಪೊಲೀಸರ ವಶಕ್ಕೆ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ರೌಡಿಶೀಟರ್‌ ಇಂದ್ರಜಿತ್ ಹತ್ಯೆ ಪ್ರಕರಣ : 8 ಮಂದಿ ಪೊಲೀಸರ ವಶಕ್ಕೆ -Vishwanews24

ಮಂಗಳೂರು: ನ.25ರ ಬುಧಾರ ತಡರಾತ್ರಿ ನಗರದ ಕುದ್ರೋಳಿಯ ಕರ್ನಲ್‌‌ ಗಾರ್ಡ್‌ನ್‌‌ ಬಳಿ ಬೊಕ್ಕಪಟ್ಟಣ ರೌಡಿಶೀಟರ್‌ ಇಂದ್ರಜಿತ್‌ (29) ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಮಂದಿಯನ್ನು ಬರ್ಕೆ ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.

ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಇಂದ್ರಜಿತ್‌ ತಮ್ಮ ಮನೆಯಿಂದ ಹೊರ ಹೋಗಿದ್ದು, ಅವರು ತಮ್ಮ ಸ್ನೇಹಿತನೋರ್ವನ ವಿವಾಹದ ಮೆಹಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಲ್ಲಿಂದ ಮನೆಗೆ ವಾಪಾಸ್ಸಾಗುತ್ತಿದ್ದ ಸಂದರ್ಭ, ಕಾದು ಕುಳಿತಿದ್ದ ಹಂತಕರು ಹತ್ಯೆಗೈದಿದ್ದರು.

ಪ್ರಕರಣದ ತನಿಖೆಯನ್ನು ಗಂಭೀರವಾಗಿ ಪರಿಗಣಿಸಿದ ಬರ್ಕೆ ಪೊಲೀಸರು ಈಗಾಗಲೇ 17ಕ್ಕೂ ಅಧಿಕ ಮಂದಿಯನ್ನು ವಿಚಾರಣೆ ನಡೆಸಿದ್ದರೆ. ಈ ಪೈಕಿ ಎಂಟು ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಹಳೆ ದ್ವೇಷದ ಹಿನ್ನೆಲೆ ಇಂದ್ರಜಿತ್‌ನ ಹತ್ಯೆ ಮಾಡಿರುವ ಸಾಧ್ಯತೆ ಇದ್ದು, ಘಟನೆಯ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.