ಮಂಗಳೂರು: ಶಬರಿಮಲೆ ಹೋಗುವ ಅಯ್ಯಪ್ಪ ಭಕ್ತರು ವಾವರ ಮಸೀದಿಗೆ ಹೋಗಬಾರದು : ವಜ್ರದೇಹಿ ಸ್ವಾಮೀಜಿ – VIshwanews24
ಮಂಗಳೂರು: ಶಬರಿಮಲೆ ಹೋಗುವ ಅಯ್ಯಪ್ಪ ಭಕ್ತರು ವಾವರ ಮಸೀದಿಗೆ ಹೋಗಬಾರದು
ಇರುಮುಡಿ ಹೊತ್ತು ಹೋಗೋದು ಅಯ್ಯಪ್ಪನ ದರ್ಶನಕ್ಕೆ ವಾವರನ ಪೂಜೆಗೆ ಅಲ್ಲ..
ವಾವರ ಒಬ್ಬರ ದರೋಡೆ ಕೋರ, ಶಬರಿಮಲೆ ಯನ್ನು ಲೂಟಿ ಮಾಡಲು ಬಂದವ..
ವಾವರ ಮಸೀದಿಯನ್ನು ಸಂದರ್ಶಿಸಿ ಹೋಗಬೇಕೆನ್ನೋದು ಕಟ್ಟುಕಥೆ..
ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ – VIshwanews24
ಮಂಗಳೂರು: ಶಬರಿಮಲೆ ಹೋಗುವ ಅಯ್ಯಪ್ಪ ಭಕ್ತರು ವಾವರ ಮಸೀದಿಗೆ ಹೋಗಬಾರದು ,ವಾವರ ಒಬ್ಬರ ದರೋಡೆ ಕೋರ, ಶಬರಿಮಲೆ ಯನ್ನು ಲೂಟಿ ಮಾಡಲು ಬಂದವ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.
ವಾವರ ಮಸೀದಿಯನ್ನು ಸಂದರ್ಶಿಸಿ ಹೋಗಬೇಕೆನ್ನೋದು ಕಟ್ಟುಕಥೆ , ಅಯ್ಯಪ್ಪ ಮಾಲಾಧಾರಿಗಳು ಯಾವುದೇ ಕಾರಣಕ್ಕೂ ಅಲ್ಲಿ ಕಾಣಿಕೆ ಹಾಕಬಾರದು, ಅಲ್ಲಿ ಮುಕ್ರಿ ಹಾಕುವ ಭಸ್ಮಧಾರಣೆ ಮಾಡಬಾರದು ಎಂದು ಶಬರಿಮಲೆ ಭಕ್ತಾದಿಗಳಿಗೆ ಹೇಳಿದರು.
ಅಯ್ಯಪ್ಪ ಸ್ವಾಮಿ ಎಷ್ಟೋ ಸಾವಿರ ವರ್ಷಗಳ ಮೊದಲು ಇದ್ದವರು, ವಾವರ ಬಂದದ್ದು ಕ್ರಿ.ಶ ದಲ್ಲಿ. ಹೇಗೆ ಅವ ಅಯ್ಯಪ್ಪ ಸ್ವಾಮಿಯ ಜೊತೆ ಯುದ್ಧ ಮಾಡಿದ ಇದು ಕಟ್ಟುಕತೆ ಎಂದರು.
ವಾವರ ಒಬ್ಬ ಮತಾಂಧ,ಆತನ ದರ್ಶನ ಮಾಡೋದು ಹಿಂದೂಗಳಿಗೆ ನಿಷಿದ್ಧ. ಹಿಂದೂ ಧರ್ಮದಲ್ಲಿ ಅದರದ್ದೇ ಆದ ಕಟ್ಟುಕಟ್ಟಳೆ ಇದೆ. ಇರುಮುಡಿ ಹೊತ್ತು ಹೋಗೋದು ಅಯ್ಯಪ್ಪನ ದರ್ಶನಕ್ಕೆ ವಾವರನ ಪೂಜೆಗೆ ಅಲ್ಲ.ಗುರುಸ್ವಾಮಿಗಳು ಈ ಬಗ್ಗೆ ಭಕ್ತರಿಗೆ ಮನವರಿಕೆ ಮಾಡಬೇಕು ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಗ್ರಹಿಸಿದರು.
