ಮಗನನ್ನು ಗೆಲ್ಲಿಸೋಕೆ ಮನುಷ್ಯತ್ವವನ್ನೆ ಮರೆತ ಸಿಎಂ :ಸುಮಲತಾ -Vishwanews24

Featured, ಜಿಲ್ಲೆ, ರಾಜ್ಯ ನ್ಯೂಸ್

ಮಂಡ್ಯ: ಮಗನನ್ನು ಗೆಲ್ಲಿಸೋಕೆ ಸಿಎಂ ಕುಮಾರಸ್ವಾಮಿ ಮನುಷ್ಯತ್ವವನ್ನೆ ಮರೆತಿದ್ದಾರೆ, ಅಂತವರ ಬಗ್ಗೆ ನಾನೇನು ಮಾತನಾಡಲಿ ಎಂದು ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಸಿಎಂ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.

ಕೆಆರ್ ನಗರದ ಬಾಚನಹಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಅಂಬರೀಶ್ ಸಾವಿನ ಕುರಿತ ಸಿ.ಎಂ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು.

ಕುಮಾರಸ್ವಾಮಿ ಅವರು ಮಗನನ್ನು ಗೆಲ್ಲಿಸೋಕೆ ಮನುಷ್ಯತ್ವವನ್ನೆ ಮರೆತ ಸಿಎಂ ಆಗಿದ್ದಾರೆ. ಬಹುಶಃ ತುಂಬಾ ವರ್ಷಗಳಿಂದ ರಾಜಕೀಯದಲ್ಲಿದ್ದರಿಂದ ಮನುಷ್ಯತ್ವವನ್ನ ಮರೆತಿದ್ದಾರೆ. ಕುಟುಂಬ ಸದಸ್ಯರನ್ನ ಕಳೆದುಕೊಂಡ ನೋವು ಅವರಿಗೆ ಗೊತ್ತಿಲ್ಲ. ಅವರಿಗೆ ಬರುವುದು ಬೇಡ. ಮಗನ ರಾಜಕೀಯಕ್ಕಾಗಿ ಅವರು ಮಾನವೀಯತೆ ಇಲ್ಲದೆ ಮಾತಾಡ್ತಿದ್ದಾರೆ ಎಂದರು.

ಸಿಎಂ ಕುಟುಂಬ ರಾಜಕಾರಣ ಮಾಡ್ತಿರೋದ್ರಿಂದ ಅವರ ಕಾರ್ಯಕರ್ತರು ನನಗೆ ಬೆಂಬಲ ನೀಡಿದ್ದಕ್ಕೆ ಸಿ.ಎಂ ಹಾಗೆ ಹೇಳ್ತಿದ್ದಾರೆ. ಅವರು ಅಳುವುದೇ ಚುನಾವಣೆ ಸಮಯದಲ್ಲಿ ಎಂದು ಸುಮಲತಾ ವ್ಯಂಗ್ಯ ಮಾಡಿದರು.