ಮತ್ತೆ ಅರುಣೋದಯವಾದ-ಪಾದೂರು ಅರುಣ್ ಶೆಟ್ಟಿ-ಸತತ ಆರನೇ ಬಾರಿ ಸೋಲಿಲ್ಲದ ಸರದಾರ:vishwanews24

ಉಡುಪಿ

ಮತ್ತೆ ಅರುಣೋದಯವಾದ-ಪಾದೂರು ಅರುಣ್ ಶೆಟ್ಟಿ-ಸತತ ಆರನೇ ಬಾರಿ ಸೋಲಿಲ್ಲದ ಸರದಾರ

ಕಾಪು: ಪುರಸಭಾ ಚುನಾವಣೆಯಲ್ಲಿ ಭಾರತ್‌ನಗರ ವಾರ್ಡಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ೪೦ ಮತಗಳ ಅಂತರದಿAದ ಗೆಲ್ಲುವ ಮುಖಾಂತರ ಸತತವಾಗಿ ವಿವಿಧ ಸ್ಥರದಲ್ಲಿ ಆರು ಬಾರಿ ಗೆದ್ದು ಬೀಗಿದ ಸೋಲಿಲ್ಲದ ಸರದಾರನಾಗಿ ಮೆರೆದಿದ್ದಾರೆ.
ಗ್ರಾಮ ಪಂಚಾಯತ್-ತಾಲೂಕ್ ಪಂಚಾಯತ್-ಜಿಲ್ಲಾ ಪಂಚಾಯತ್-ಪುರಸಭೆಯಲ್ಲಿ ಎರಡು ಬಾರಿ ಗೆಲ್ಲುವ ಮುಖಾಂತರ ಬರೋಬ್ಬರಿ ೬ ಬಾರಿ ಗೆಲುವಿನ ಪತಾಕೆಯನ್ನು ಹಾರಿಸಿದ ಕೀರ್ತಿ ಅರುಣ್ ಅವರದ್ದಾಗಿದೆ.
ಕಡತಗಳೊಂದಿಗೆ ಕೌನ್ಸಿಲ್ ಸಭೆಗೆ ಹಾಜರ್
ಪ್ರತಿ ಪುರಸಭೆಯ ಸಭೆಯಲ್ಲೂ ಅರುಣ್‌ಶೆಟ್ಟಿ ಮಾತನಾಡದೇ ಸಭೆ ಮುಕ್ತಾಯಹಂತ ತಲುಪುವುದಿಲ್ಲ ಎಂಬ ಮಾತಿದೆ ಮಾತ್ರವಲ್ಲದೆ ಪ್ರತಿ ಸಭೆಗೂ ಕಡತ-ದಾಖಲೆ ಸಮೇತವಾಗಿ ಪ್ರಶ್ನೋತ್ತರ ಮಂಡಿಸುವ ಶೆಟ್ಟಿಯ ಧ್ವನಿ ಈ ಬಾರಿಯೂ ಪುರಸಭೆಯಲ್ಲಿ ಪ್ರತಿಧ್ವನಿಸಲಿದೆ.
ಒಟ್ಟಾರೆಯಾಗಿ ಪಕ್ಷದ ಕಾರ್ಯಕರ್ತರ ಶ್ರಮ ಅರುಣ್ ಶೆಟ್ಟಿ ಪಾದೂರು ಅವರ ಗೆಲುವಿನ ಮೂಲ ಎಂಬುದನ್ನು ಮರೆಯುವಂತಿಲ್ಲ.

 

Leave a Reply