ಮತ್ತೋಮ್ಮೆ ಯಡಾವಟ್ಟು ಮಾಡಿಕೊಂಡ ರಾಹುಲ್, ಮೈಸೂರು ವಿದ್ಯಾರ್ಥೀನಿಯರ ಪ್ರಶ್ನೆಗೆ ಕಕ್ಕಾಬಿಕ್ಕಿ..!!

ಆದರೆ ಓರ್ವ ವಿದ್ಯಾರ್ಥಿನಿ ಕೇಳಿದ ಪ್ರಶ್ನೆಗೆ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಬಹುತೇಕ ಕಾಂಗ್ರೆಸ್ ನಾಯಕರು ಕಕ್ಕಾಬಿಕ್ಕಿಯಾದರು. ಆ ವಿದ್ಯಾರ್ಥಿನಿ ಕೇಳಿದ ಪ್ರಶ್ನೆ ಹೀಗಿತ್ತು. ಸರ್ ನೀವು, ಮತ್ತೆ ಮುಖ್ಯಮಂತ್ರಿಗಳು ಇಲ್ಲೇ ಇರುವುದರಿಂದ ಈ ಪ್ರಶ್ನೆ ಕೇಳುತ್ತಿದ್ದೇನೆ. ಸರ್ ನಿಮ್ಮ ಸರ್ಕಾರದಿಂದ ಏನೇ ಯೋಜನೆಗಳನ್ನು ನಮಗೆ ಕೊಡಬೇಕಾದರು ಯಾಕೆ ತಾರತಮ್ಯ ಮಾಡುತ್ತೀರಾ? ಕಮ್ಯುನಿಟಿ ಆಧಾರದ ಮೇಲೆ ತಾರತಮ್ಯ ಮಾಡೋದು ಸರಿಯಾ ಎಂದು ಆ ವಿದ್ಯಾರ್ಥಿನಿ ಕೇಳಿದಳು..
ಈ ಪ್ರಶ್ನೆ ಪರಮೇಶ್ವರ್ ಇಂಗ್ಲಿಷ್ ಅಲ್ಲಿ ಅನುವಾದ ಮಾಡಿ ಹೇಳಿದ ಕೂಡಲೇ ಒಂದು ಸೆಕೆಂಡ್ ಏನು ಉತ್ತರಿಸಬೇಕು ಎಂದು ಗೊತ್ತಾಗದೆ ರಾಹುಲ್ ಗಾಂಧಿ ತಡಬಡಾಯಿಸಿದರು. ಆನಂತರ ಈ ಪ್ರಶ್ನೆಯಿಂದ ಜಾರಿಕೊಳ್ಳೊಕ್ಕೆ ಈ ಪ್ರಶ್ನೆ ಭಾರತಕ್ಕೊ ಅಥವಾ ಕರ್ನಾಟಕಕ್ಕೋ ಎಂದು ರಾಹುಲ್ ಗಾಂಧಿ ಕೇಳಿದರು. ಆಗ ವಿದ್ಯಾರ್ಥಿನಿ ಗಟ್ಟಿಧ್ವನಿಯಿಂದ ನಾನು ಕರ್ನಾಟಕ ಸರ್ಕಾರಕ್ಕೆ ಕೇಳುತ್ತಿದ್ದೇನೆ ಎಂದಳು. ಹಾಗಾದರೆ ಈ ಪ್ರಶ್ನೆ ಸಿದ್ಧರಾಮಯ್ಯನವರಿಗೆ ಕೇಳಿ ಎಂದು ರಾಹುಲ್ ಗಾಂಧಿ ಜಾರಿಕೊಂಡರು.

ಆ ನಂತರ ಉತ್ತರಿಸಲು ಸಿದ್ಧರಾಮಯ್ಯನವರು ಬಂದರು. ಸಮಾಜದಲ್ಲಿ ತಾರತಮ್ಯ ಹೋಗಲಾಡಿಸಲು ಇದು ಅನಿವಾರ್ಯ. ದುರ್ಬಲರಿಗೆ ಶಕ್ತಿ ತುಂಬಲು ಆ ತರಹ ಯೋಜನೆಗಳನ್ನು ಘೋಷಿಸಲೇಬೇಕು ಎಂದು ತೇಪೆ ಹಚ್ಚುವ ಕೆಲಸ ಮಾಡಿದರು. ವಿದ್ಯಾರ್ಥಿನಿ ಪ್ರಶ್ನೆ ಕೇಳಿದಾಗ ಇಡೀ ಸಭಾಂಗಣದಲ್ಲಿ ಕರತಾಡನ ಮುಗಿಲು ಮುಟ್ಟಿತ್ತು. ಅಂಗನವಾಡಿ ಮಕ್ಕಳಿಂದ ಉನ್ನತ ವ್ಯಾಸಾಂಗದ ವಿದ್ಯಾರ್ಥಿಗಳವರೆಗೆ ಪ್ರತಿಯೊಂದು ವಿಷಯದಲ್ಲಿಯೂ ಜಾತಿ ಹುಡುಕುವ ಸಿದ್ಧರಾಮಯ್ಯನವರ ಸರ್ಕಾರಕ್ಕೆ ವಿದ್ಯಾರ್ಥಿನಿಯ ಪ್ರಶ್ನೆ ಕಪಾಳಮೋಕ್ಷ ಮಾಡಿದ ಹಾಗಿತ್ತು.


