ಮನೆಗೆ ಬೆಂಕಿ ತಗುಲಿ ಎಂಟು ತಿಂಗಳ ಮಗು ಸೇರಿ ಒಂದೇ ಕುಟುಂಬದ ಐವರು ಮೃತ್ಯು – Vishwanews24

Featured, ರಾಷ್ಟ್ರ ನ್ಯೂಸ್

ಮನೆಗೆ ಬೆಂಕಿ ತಗುಲಿ ಎಂಟು ತಿಂಗಳ ಮಗು ಸೇರಿ ಒಂದೇ ಕುಟುಂಬದ ಐವರು ಮೃತ್ಯು – Vishwanews24

ಕೊಚ್ಚಿನ್: ಕೇರಳದ ವರ್ಕಲಾದ ದಳವಪುರಂನಲ್ಲಿ ಮನೆಗೆ ಬೆಂಕಿ ತಗುಲಿ ಎಂಟು ತಿಂಗಳ ಮಗು ಸೇರಿದಂತೆ ಒಂದೇ ಕುಟುಂಬದ ಐದು ಜನರು ಮೃತಪಟ್ಟಿರುವ ಘಟನೆ ಇಂದು ಬೆಳಗಿನ ಜಾವ ನಡೆದಿದೆ.

ಮೃತರನ್ನು ವರ್ಕಲಾದಲ್ಲಿ ಪ್ರತಾಪನ್ ಅವರು ತರಕಾರಿ ಮಾರಾಟಗಾರರಾಗಿದ್ದ ಪ್ರತಾಪನ್ (62), ಶೆರ್ಲಿ (53), ಅಭಿರಾಮಿ (25), ಅಖಿಲ್ (29) ಮತ್ತು ಅಭಿರಾಮಿ ಅವರ ಎಂಟು ತಿಂಗಳ ಮಗ ರಿಯಾನ್ ಎಂದು ಗುರುತಿಸಲಾಗಿದೆ.

ಈ ಘಟನೆಯಲ್ಲಿ ತೀವ್ರ ಗಾಯಗೊಂಡಿರುವ ಪ್ರತಾಪನ್ ಅವರ ಹಿರಿಯ ಮಗ ನಿಖಿಲ್ ಅವರನ್ನು ಅಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ಬೆಂಕಿ ಕಾಣಿಸಿಕೊಂಡ ತಕ್ಷಣ ನೆರೆಹೊರೆಯವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಐದು ಬೈಕ್ ಗಳು ಸುಟ್ಟುಹೋಗಿದ್ದು, ಮನೆಯಲ್ಲಿದ್ದ ಹವಾನಿಯಂತ್ರಣಗಳು ಕೂಡ ನಾಶವಾಗಿವೆ.

ಮಂಗಳೂರು ಹಿಜಾಬ್ ವಿವಾದ : ಸಾಯಿ ಸಂದೇಶ್ ಗೆ ಬಂದಿರುವ ಕೊಲೆ ಬೆದರಿಕೆಗೂ ನಮಗೂ ಸಂಬಂಧವಿಲ್ಲ : ವಿದ್ಯಾರ್ಥಿನಿ ಹಿಬಾ ಶೇಖ್ – Vishwanews24

 

Leave a Reply