ಲಕ್ಷ್ಮಿ ದೇವಿಯನ್ನು, ಸಿರಿ, ಸಂಪತ್ತು, ಸಮೃದ್ಧಿಯ ಪ್ರಧಾನ ದೇವತೆಯೆಂದು ಪರಿಗಣಿಸಲಾಗುತ್ತದೆ. ಶುಕ್ರವಾರ ಪೂಜಿಸಲಾಗುವ ಲಕ್ಷ್ಮಿ ದೇವಿಯ ರೂಪವನ್ನು ವೈಭವ ಲಕ್ಷ್ಮಿಯೆಂದು ಕರೆಯಲಾಗುತ್ತದೆ. ಮನೆಯಲ್ಲಿ ಸಂತೋಷ, ಸಿರಿ, ಸಂಪತ್ತು ನೆಲೆಯಾಗಲೆಂದು, ಇಷ್ಟಾರ್ಥ ಸಿದ್ಧಿಯಾಗಲೆಂದು ಲಕ್ಷ್ಮಿಯನ್ನು ಪೂಜಿಸುತ್ತಾರೆ.
ಆದರೆ ವೈಭವ ಲಕ್ಷ್ಮಿ ಪೂಜೆಯನ್ನು ಮಾಡುವಾಗ ಸಾಕಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಕೆಂಪು ಹೂವನ್ನು ಪೂಜೆಯಲ್ಲಿರಿ
ಪುರಾಣಗಳಲ್ಲಿ ಲಕ್ಷ್ಮಿ ಹೂಗಳೆಂದರೆ ಬಹಳ ಪ್ರಿಯವೆಂದು ಉಲ್ಲೇಖವನ್ನು ಮಾಡಲಾಗಿದೆ. ಆದ್ದರಿಂದ ನೀವು ಶುಕ್ರವಾರ ವೈಭವ ಲಕ್ಷ್ಮಿಯನ್ನು ಪೂಜಿಸುವಾಗ ಲಕ್ಷ್ಮಿ ದೇವಿಗೆ ಕೆಂಪು ಬಣ್ಣದ ಹೂಗಳನ್ನು ಅರ್ಪಿಸಿ. ಈ ಕೆಂಪು ಹೂವು ಕೆಂಪು ಗುಲಾಬಿಯೂ ಆಗಿರಬಹುದು ಅಥವಾ ಕೆಂಪು ದಾಸವಾಳವೂ ಆಗಬಹುದು. ಕಮಲದ ಹೂವು ಲಭ್ಯವಿಲ್ಲದಿದ್ದರೆ ಕೆಂಪು ಗುಲಾಬಿಯನ್ನು ಕೂಡ ದೇವಿಗೆ ಸಲ್ಲಿಸಬಹುದು. ಪೂಜೆಯ ನಂತರ ಆ ಹೂವನ್ನು ನಿಮ್ಮ ಮನೆಯಲ್ಲಿ ಸಂಪತ್ತು ಇರಿಸುವ ಸ್ಥಳದಲ್ಲಿ ಇರಿಸಿ, ಹಾಗೂ ಅದನ್ನು ದಿನನಿತ್ಯ ಬದಲಾಯಿಸುತ್ತಿರಿ.
ಪೂಜೆಯಲ್ಲಿ ಈ ವಸ್ತುಗಳು ಕಡ್ಡಾಯವಾಗಿರಬೇಕು
ಪ್ರತಿ ಶುಕ್ರವಾರ ವೈಭವ ಲಕ್ಷ್ಮಿ ಪೂಜೆ ಮಾಡುವಾಗ ಪೂಜೆ ಸಾಮಾಗ್ರಿಗಳಲ್ಲಿ ಕೆಂಪು ಚಂದನ, ಶ್ರೀಗಂಧ, ಕೆಂಪು ಬಣ್ಣದ ವಸ್ತ್ರ ಮತ್ತು ಕರ್ಪೂರವು ಕಡ್ಡಾಯವಾಗಿರುತ್ತದೆ. ಮನೆಯ ದೇವರ ಕೋಣೆಯಲ್ಲಿ ಲಕ್ಷ್ಮಿ ದೇವತೆಯು ನಿಂತು ತನ್ನ ಕೈಯಿಂದ ನಾಣ್ಯವನ್ನು ಚೆಲ್ಲುತ್ತಿರುವ ಫೋಟೋವನ್ನು ಇಡಬೇಕು. ಈ ಪೂಜೆಯನ್ನು ಹೆಚ್ಚಾಗಿ ಕರ್ಕಾಟಕ, ವೃಶ್ಚಿಕ ಮತ್ತು ಮೀನ ರಾಶಿಯವರು ಮಾಡಿದರೆ ತುಂಬಾನೇ ವಿಶೇಷವಾಗಿರುತ್ತದೆ.
ಖೀರ್ ಅಥವಾ ಪಾಯಸವನ್ನು ಲಕ್ಷ್ಮಿಗೆ ಅರ್ಪಿಸಿ
ಲಕ್ಷ್ಮಿ ಚಂಚಲೆ, ಆಕೆಯನ್ನು ಸಂತಸಗೊಳಿಸಿದರೆ ಮಾತ್ರ ಆಕೆ ನಿಮ್ಮೊಂದಿಗೆ ನೆಲೆಸುತ್ತಾಳೆ, ಇಲ್ಲವಾದರೆ ಆಕೆ ಬೇರೆಡೆಗೆ ಚಲಿಸುತ್ತಾಳೆ. ಹಾಗಾಗಿ ಪೂಜೆಯಲ್ಲಿ ಲಕ್ಷ್ಮಿಯನ್ನು ಸಂತಸಗೊಳಿಸಲು ಪಾಯಸ ಅಥವಾ ಖೀರ್ನ್ನು ಅರ್ಪಿಸಬೇಕು. ಖೀರ್ನ್ನು ಹಸುವಿನ ಹಾಲು ಮತ್ತು ಅಕ್ಕಿಯಿಂದ ಮಾತ್ರ ತಯಾರಿಸಬೇಕು. ಈ ಪಾಯಸಕ್ಕೆ ಸಕಕ್ಕಿಯನ್ನು ಬಳಸುವುದರಿಂದ ಲಕ್ಷ್ಮಿ ಪೂಜೆಯಲ್ಲಿ ಅಕ್ಷಯ ಫಲವು ನಿಮ್ಮದಾಗುತ್ತದೆ. ಈ ಖೀರ್ನ್ನು ನೀವು ಪೂಜೆಯಲ್ಲಿ ಲಕ್ಷ್ಮಿಗೆ ಅರ್ಪಿಸಿದರೆ ನಿಮಗೆ ಯಾವುದೇ ರೀತಿಯ ಹಣದ ಕೊರತೆ ಬರುವುದಿಲ್ಲ.
ವೈಭವ ಪೂಜೆಯಲ್ಲಿ ದೇವಿಗೆ ನಾಣ್ಯವನ್ನು ಅರ್ಪಿಸಿ
ಶುಕ್ರವಾರ ಆಚರಿಸಲಾಗುವ ವೈಭವ ಲಕ್ಷ್ಮಿ ಪೂಜೆಯಲ್ಲಿ ನಾಣ್ಯವನ್ನು ಬಳಸಬೇಕು. ಸಾಧ್ಯವಾದರೆ ಬೆಳ್ಳಿ ನಾಣ್ಯವನ್ನು ಇಡಲು ಪ್ರಯತ್ನಿಸಿ. ಯಾಕೆಂದರೆ ಬೆಳ್ಳಿ ನಾಣ್ಯದಲ್ಲಿ ಗಣೇಶ ಮತ್ತು ಲಕ್ಷ್ಮಿಯ ಸುಂದರ ಚಿತ್ರವನ್ನು ಹೊಂದಿದೆ. ಒಂದುವೇಳೆ ನಿಮ್ಮ ಬಳಿ ಬೆಳ್ಳಿ ನಾಣ್ಯ ಇಲ್ಲವಾದರೆ, ಸಾಮಾನ್ಯ ನಾಣ್ಯಗಳನ್ನೇ ಗಂಗಾ ನೀರಿನಲ್ಲಿ ತೊಳೆದು ಪೂಜೆಗೆ ಇಡಬೇಕು. ಪೂಜೆಯ ನಂತರ ಆ ನಾಣ್ಯಗಳನ್ನು ದಾನವಾಗಿ ನೀಡಿ. ಈ ರೀತಿ ಮಾಡುವುದರಿಂದ ದೇವಿ ಲಕ್ಷ್ಮಿ ನಿಮ್ಮ ಮೇಲೆ ಸಂತೋಷಗೊಳ್ಳುತ್ತಾಳೆ ಹಾಗೂ ಎಂತಹುದ್ದೇ ಕಷ್ಟದ ಸಮಯದಲ್ಲೂ ಕೂಡ ನಿಮ್ಮನ್ನು ಬಿಟ್ಟು ಕೊಡುವುದಿಲ್ಲ.
ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.
ಕಾರ್ಕಳ ಮಹಾಮಸ್ತಕಾಭಿಷೇಕ 2027 : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 1.59 ಕೋಟಿ ರೂ. ಮಂಜೂರು ಉಡುಪಿ: ಕಾರ್ಕಳದಲ್ಲಿ 2027ರಲ್ಲಿ ನಡೆಯಲಿರುವ…
ಕಾಪು: ಕ್ಷುಲ್ಲಕ ವಿಚಾರಕ್ಕೆ ಪತಿಯೊಂದಿಗೆ ಜಗಳವಾಡಿ ಅಪ್ರಾಪ್ತ ಮಗಳೊಂದಿಗೆ ಮಹಿಳೆ ನಾಪತ್ತೆ ಕಾಪು: ಕ್ಷುಲ್ಲಕ ಕಾರಣಕ್ಕಾಗಿ ಪತಿಯೊಂದಿಗೆ ಜಗಳವಾಡಿ ಬಳಿಕ…
ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿಯುವುದು ಒಳ್ಳೆಯದೋ? ಅಥವಾ ಕೆಟ್ಟದೋ? ಬೆಳಿಗ್ಗೆ ಖಾಲಿ ಹೊಟ್ಟೆಗೆ ಎಳನೀರು ಕುಡಿಯುವುದರಿಂದಾಗುವ ಪ್ರಯೋಜನಗಳೇನು ಗೊತ್ತಾ? ಇದು ನಿಮ್ಮ…
ಕಾಪು: ತಮಿಳುನಾಡು ಮೂಲದ ದೋಣಿ ಡಿಕ್ಕಿ ; ಸ್ಥಳೀಯ ನಾಡದೋಣಿ ಮುಗುಚಿ ಮೀನುಗಾರ ನಾಪತ್ತೆ ಕಾಪು: ಕಾಪು ಕಡಲ ಕಿನಾರೆಯಲ್ಲಿ…
ಭೀಕರ ರಸ್ತೆ ಅಪಘಾತ : ‘ಹಳ್ಳಿ ಹೈದ ಪ್ಯಾಟೆಗೆ ಬಂದ’ ಸೀಸನ್-3ರ ಸ್ಪರ್ಧಿ ಬಾವತೀಶ್ ಸಾವು ಯಲ್ಲಾಪುರ : ಉತ್ತರ ಕನ್ನಡ…
ಕುಂದಾಪುರ: ರಸ್ತೆ ಅಪಘಾತ ; ಗಾಣಿಗ ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸ ಗಾಣಿಗ ಸಾವು ಕುಂದಾಪುರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ…