ಮುಂಬೈಯಲ್ಲಿ 2 ಕೆಜಿ ಕೊಕೇನ್ ವಶ ಪ್ರಕರಣ  : ಮಣಿಪಾಲದ ಹೋಟೆಲ್ ಉದ್ಯಮಿ ಎನ್‌ಸಿಬಿ ಬಲೆಗೆ – Vishwanews24

Featured, ಉಡುಪಿ

ಮುಂಬೈಯಲ್ಲಿ 2 ಕೆಜಿ ಕೊಕೇನ್ ವಶ ಪ್ರಕರಣ  : ಆರೋಪಿಗಳಿಗೆ ಪ್ಲಾಟ್ ಬಾಡಿಗೆ ಕೊಟ್ಟ ಮಣಿಪಾಲದ ಹೋಟೆಲ್ ಉದ್ಯಮಿ ಎನ್‌ಸಿಬಿ ಬಲೆಗೆ

ಉಡುಪಿ: ನೈಜೀರಿಯಾದಿಂದ ಅಕ್ರಮವಾಗಿ ನುಸುಳು ಕೋರರಿಂದ ಎರಡು ಕೆಜಿ ಕೊಕೇನ್ ವಶ ಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಗೆ ಅನಧಿಕೃತವಾಗಿ ಪ್ಲಾಟ್ ಬಾಡಿಗೆ ಕೊಟ್ಟ ಮಣಿಪಾಲದ ಬಾರ್ ಮಾಲೀಕ, ಹೆರ್ಗ ನಿವಾಸಿಯನ್ನು ಎನ್.ಸಿ.ಬಿ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಬಂಧಿತ ವ್ಯಕ್ತಿ ಶೀಲ್ ಮೀರಾ ರೋಡ್ ಶಾಹಿ ಹೋಟೆಲ್ ಮೇಲಿರುವ ಶೀತಲ್ ಸಾಯಿ ಸೊಸೈಟಿಯಲ್ಲಿ ಮಾದಕ ವಸ್ತು ಪತ್ತೆ ಪ್ರಕರಣದ ಆರೋಪಿಗಳಿಗೆ ವಾಸ್ತವ್ಯಕ್ಕೆ ಅಕ್ರಮವಾಗಿ ಮನೆ ನೀಡಿದ್ದ ಆರೋಪದಲ್ಲಿ ಮಣಿಪಾಲದ ಹೋಟೆಲ್ ಉದ್ಯಮಿ ದಿನೇಶ್ ಭಾಸ್ಕರ್ ಶೆಟ್ಟಿ ಅವರನ್ನು ಎನ್‌ಸಿಬಿ ಪೊಲೀಸರು ಬಂಧಿಸಿದ್ದರು.

ಬಾರ್ ಮಾಲೀಕ ತನ್ನ ಬಾರ್‌ಗಳಿಗೆ ಡ್ರಗ್ಸ್ ಗಳನ್ನು ಕೂಡ ಇದೇ ಬಂಧಿತ ವ್ಯಕ್ತಿಗಳಿಂದ ಮಣಿಪಾಲಕ್ಕೆ ತರಿಸಿಕೊಂಡು ಅವ್ಯಾಹತವಾಗಿ ಮಾರಾಟ ಮಾಡಿದ್ದಾಗಿ ಎನ್‌ಸಿಬಿ ತನಿಖೆಯಿಂದ ಹೊರಬಂದಿದೆ.

ಬಂಟ್ವಾಳ : ಆರ್ಟ್ ಗ್ಯಾಲರಿ ಮಾಲಕ, ಎಲ್ಲೈಸಿ ಏಜೆಂಟ್ ಕೆರೆಗೆ ಹಾರಿ ಆತ್ಮಹತ್ಯೆ – Vishwanews24

ಸದ್ಯ ಬಾರ್ ಮಾಲೀಕ ಮುಂಬಯಿಯ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, ಡ್ರಗ್ಸ್ ಪೆಡ್ಲರ್ ಅವರ ಬ್ಯಾಂಕ್ ಖಾತೆಯಲ್ಲಿ ಬಾರ್ ಮಾಲೀಕ ಲಕ್ಷಾಂತರ ರೂ ವಹಿವಾಟು ನಡೆಸಿದ್ದ ಎಂದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.

ದಿನೇಶ್ ಭಾಸ್ಕರ್ ಶೆಟ್ಟಿ ಅವರ ಮನೆಯಲ್ಲಿ ಮಾದಕ ವಸ್ತು ಕಳ್ಳಸಾಗಣೆದಾರರೊಬ್ಬ ಹಲವು ವರ್ಷಗಳಿಂದ ಒಪ್ಪಂದವಿಲ್ಲದೆ ವಾಸವಾಗಿದ್ದರು. ಮಾದಕ ವಸ್ತು ಕಳ್ಳಸಾಗಣೆದಾರರಿಂದ 4 ನಕಲಿ ಪಾಸ್‌ಪೋರ್ಟ್‌ಗಳು ಮತ್ತು ನಕಲಿ ಆಧಾರ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎನ್ನಲಾಗಿದೆ.

ಚೂರಿ ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದ ಕುಂದಾಪುರದ ರಾಘವೇಂದ್ರ ಚಿಕಿತ್ಸೆ ಫಲಕಾರಿಯಾಗದೆ ನಿಧನ – Vishwanews24

 

Leave a Reply