ಮುತಾಲಿಕ್ ವಿರುದ್ಧ ತಿರುಗಿ ಬಿದ್ದ ಶಿಷ್ಯ ವೃಂದ :- ಕಾರ್ಕಳದಲ್ಲಿ ಸ್ಪರ್ಧಿಸಿದರೆ ಸೋಲು ಕಟ್ಟಿಟ್ಟ ಬುತ್ತಿ: ಮೋಹನ್ ಭಟ್ ಎಚ್ಚರಿಕೆ – Vishwanews24

Featured, ಉಡುಪಿ

ಮುತಾಲಿಕ್ ವಿರುದ್ಧ ತಿರುಗಿ ಬಿದ್ದ ಶಿಷ್ಯ ವೃಂದ :- ಕಾರ್ಕಳದಲ್ಲಿ ಸ್ಪರ್ಧಿಸಿದರೆ ಸೋಲು ಕಟ್ಟಿಟ್ಟ ಬುತ್ತಿ: ಮೋಹನ್ ಭಟ್ ಎಚ್ಚರಿಕೆ

ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಶ್ರೀರಾಮ ಸೇನೆಯ ಸ್ಥಾಪಕರಾದ ಪ್ರಮೋದ್ ಮುತಾಲಿಕ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ವಿಚಾರದಲ್ಲಿ ಶ್ರೀರಾಮ ಸೇನೆಯ ಮಂಗಳೂರು ವಿಭಾಗ ಅಧ್ಯಕ್ಷ ಶ್ರೀ ಮೋಹನ್ ಭಟ್ ಅವರು ಇಂದು ಖಾಸಗಿ ಹೋಟೆಲ್ ಒಂದರಲ್ಲಿ ಪತ್ರಿಕಾ ಘೋಷ್ಠಿ ನಡೆಸಿ ಪ್ರಮೋದ್ ಮುತಾಲಿಕ್ ವಿರುದ್ಧ ಅಸಮಾಧಾನ ಹೊರಹಾಕಿದರು.

ಪ್ರಮೋದ್ ಮುತಾಲಿಕ್ ಅವರ ಈ ನಿರ್ಧಾರದಿಂದ ಮನಸ್ಸಿಗೆ ನೋವಾಗಿದೆ ಸಂಘ ಪರಿವಾರವೂ ಶ್ರೀರಾಮ ಸೇನೆಯನ್ನು ಬಿಟ್ಟುಬಿಟ್ಟಿದೆ ಯಾವುದೇ ರಾಜಕೀಯ ಪಕ್ಷದ ಬೆನ್ನೆಲುಬು ಇಲ್ಲದೆ ಸಂಘಟನೆಯನ್ನು ಕಾರ್ಯಕರ್ತರ ಮುಖೇನವಾಗಿ ಕಟ್ಟಿಕೊಂಡು ಬಂದಿದ್ದೇವೆ ಆದರೆ ನಮ್ಮಲ್ಲಿ ಯಾವುದೇ ರೀತಿಯ ಚರ್ಚೆ ಮಾಡದೆ ನೇರವಾಗಿ ಪ್ರಮೋದ್ ಮುತಾಲಿಕರು ಚುನಾವಣೆ ಸ್ಪರ್ಧಿಸುವ ನಿರ್ಧಾರವನ್ನು ಮಾಡಿದ್ದಾರೆ ಇದು ರಾಜ್ಯದಲ್ಲಿ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿ ಮಾಡಿದ್ದು ಹಿಂದೂ ಸಂಘಟನೆಯಲ್ಲಿ ಬಿರುಕು ಮೂಡಲು ದೊಡ್ಡ ಕಾರಣವಾಗಿದೆ.

ಕಾರ್ಕಳದ ಪ್ ಪ್ರತಿಷ್ಠಿತ ಉದ್ಯಮಿಗಳ ಹಾಗೂ ವಕೀಲರೊಬ್ಬರ ಪ್ರತಿಷ್ಠೆಗಾಗಿ ಮುತಾಲಿಕ್ ಅವರನ್ನು ಬಲಿ ಕೊಡಲಾಗುತ್ತಿದೆ ಶ್ರೀರಾಮ ಸೇನೆಯ ಹೆಸರನ್ನು ಬಳಸಲು ನಾವು ಬಿಡುವುದಿಲ್ಲ ಯಾವುದೇ ಕಾರಣಕ್ಕೂ ಶ್ರೀರಾಮಸೇನೆ ಸ್ಪರ್ಧೆ ಮಾಡಲು ಸಾಧ್ಯವಿಲ್ಲ ಶ್ರೀರಾಮ ಸೇನೆ ಸಂಘಟನೆ ಇರುವುದು ರಾಜಕೀಯ ಮಾಡಲು ಅಲ್ಲ ಎಂದು ಅವರು ಖಡಕ್ ಮಾತುಗಳನ್ನಾಡಿದರು.
67 ವರ್ಷವಾಗಿರುವ ಪ್ರಮೋದ್ ಮುತಾಲಿಕ್ ಅವರ ಕಡೆಯ ದಿನಗಳು ಅತ್ಯಂತ ದುರಂತ ವಾಗಿರಬಾರದು ಅದೊಂದು ಐತಿಹಾಸಿಕವಾಗಿ ಇರಬೇಕೆಂದು ನಮ್ಮೆಲ್ಲರ ಶಿಷ್ಯರ ಆಸೆಯಾಗಿದೆ ಅವರು ಈ ಬಾರಿ ಕಾರ್ಕಳದಲ್ಲಿ ಚುನಾವಣೆ ಸ್ಪರ್ಧಿಸುವ ನಿರ್ಧಾರದಿಂದ ವಾಪಸ್ ಬಂದರೆ ಅವರಿಗೂ ಒಳ್ಳೆಯದು ಸಂಘಟನೆಗೂ ಒಳ್ಳೆಯದು ಅವರು ಕಾರ್ಕಳದಲ್ಲಿ ಗೆಲುವು ಸಾಧಿಸಲು ಸಾಧ್ಯವಿಲ್ಲ ಮತ್ತು ನಾವು ಮುತಾಲಿಕ್ ಅವರಿಗೆ ಬೆಂಬಲಿಸುವುದಿಲ್ಲ ಎಂದು ಮೋಹನ್ ಭಟ್ ತಿಳಿಸಿದರು.

ಇನ್ನೊಂದು ಬಾರಿ ಸಂಘ ಪರಿವಾರ ಹಾಗೂ ಬಿಜೆಪಿಯ ಒಳಗಡೆ ಹೋಗಿ ಪಕ್ಷೇತರ ಚುನಾವಣೆ ಸ್ಪರ್ಧೆ ವಿಚಾರವಾಗಿ ಚರ್ಚೆ ಮಾಡುವುದು ಒಳಿತು ಅವರಾಗಿಯೇ ಒಂದು ಕ್ಷೇತ್ರವನ್ನು ಬಿಟ್ಟು ಕೊಡುವ ಬಗ್ಗೆ ಗುಮಾನಿ ಇದೆ ಅದಕ್ಕಾದರೂ ಒಂದು ಸುತ್ತಿನ ಮಾತುಕತೆ ಅಗತ್ಯವಿದೆ ಮಾತುಕತೆ ನಡೆಸದೆ ಏಕಾಏಕಿ ನಿರ್ಧಾರಕ್ಕೆ ಬಂದಿರುವುದು ವಿಪರ್ಯಾಸವಾಗಿದೆ ಎಂದರು.

ಕಾರ್ಕಳದಲ್ಲಿ ಈಗಾಗಲೇ ಕಾರ್ಯಕರ್ತರ ನಡುವೆ ಗೊಂದಲ ಆರಂಭವಾಗಿದೆ ಈ ಗೊಂದಲದಲ್ಲಿ ಒಂದು ವೇಳೆ ಏನಾದರೂ ಹೆಚ್ಚು ಕಡಿಮೆಯಾದರೆ ಅದಕ್ಕೆ ಹೊಣೆಗಾರರು ಯಾರು? ನಮಗೆ ನಮ್ಮ ಸಂಘಟನೆ ಕಾರ್ಯಕರ್ತರು ಮುಖ್ಯವೆ ಹೊರತು ರಾಜಕೀಯವಲ್ಲ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ವಿಭಾಗದ ಗೌರವಾಧ್ಯಕ್ಷ ಚಂದ್ರಕಾಂತ್ ಶೆಟ್ಟಿ, ಶಿವಮೊಗ್ಗ ಜಿಲ್ಲಾಧ್ಯಕ್ಷ ಪ್ರಶಾಂತ್ ಬಂಗೇರ ಪ್ರಧಾನ ಕಾರ್ಯದರ್ಶಿ ಸಂದೀಪ್ ಮೂಡಬೆಟ್ಟು, ಉಡುಪಿ ಜಿಲ್ಲೆಯ ಶ್ರೀರಾಮ ಸೇನೆ ವಕ್ತಾರ ಶ್ರೀನಿವಾಸರಾವ್ ಉಪಸ್ಥಿತರಿದ್ದರು.

 

Leave a Reply