ಬೆಂಗಳೂರು: ಕೆಲ ಮುಸ್ಲಿಂ ನಾಯಕರಿಗೆ ದಿನನಿತ್ಯ ಊಟ ತಿಂಡಿ ತಿಂದಂತೆ ಬ್ಲಾಸ್ಟ್ ಮಾಡುವುದು ಸಹಜ ರೂಢಿಯಾಗಿದೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ಮಂಗಳೂರು ಬಾಂಬ್ ಬ್ಲಾಸ್ಟ್ ಪ್ರಕರಣ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲ ಮುಸ್ಲಿಂ ನಾಯಕರಿಗೆ ದಿನನಿತ್ಯ ಊಟ ತಿಂಡಿ ತಿಂದಂತೆ ಬ್ಲಾಸ್ಟ್ ಮಾಡುವುದು ಸಹಜ ರೂಢಿ. ಅವರ ರಕ್ತದಲ್ಲಿಯೇ ಇನ್ನೊಬ್ಬರನ್ನು ಕೊಲ್ಲುವುದು ಕಾಲಘಟ್ಟದಿಂದಲೂ ಬಂದಿದೆ. ಇಡೀ ಪಿಎಫ್ಐ (PFI) ತಾನು ಮುಂದಿನ ಒಂದು ವರ್ಷಗಳಲ್ಲಿ ಮಾಡಬೇಕಾದಂತ ಎಲ್ಲಾ ಯೋಜನೆಗಳನ್ನು ಮಾಡಲು ಸಿದ್ಧ ಮಾಡಿದ್ದಾಗ ಬ್ಯಾನ್ ಮಾಡುವ ಮೂಲಕ ಆಘಾತ ನೀಡಿದ್ದನ್ನು ಸಹಿಸಿಕೊಳ್ಳಲು ಆಗಲಿಲ್ಲ. ಆ ಕಾರಣಕ್ಕೆ ಈ ರೀತಿ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಜೊತೆಗೆ ಇಂತಹ ಪ್ರಕರಣಗಳಲ್ಲಿ ಸಿಕ್ಕಿಬಿದ್ದವರನ್ನು ಹಿಂದೂ ಭಯೋತ್ಪಾದಕರೆಂದು ಗುರುತಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
✴️ ಪ್ರಸಿದ್ಧ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಕ್ರಿಕೆಟಿಗ ಕೆ.ಎಲ್.ರಾಹುಲ್ – Vishwanews24
ಹಿಂದೂಗಳ ಮಾನಸಿಕ ಸ್ಥಿತಿಯನ್ನು ಕುಗ್ಗಿಸುವಂತಹ ನಿಟ್ಟಿನಲ್ಲಿ ಇಂತಹ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವುದು ಆತಂಕಕಾರಿಯಾಗಿದೆ. ಪ್ರೆಶರ್ ಕುಕ್ಕರ್ ಬಾಂಬ್ಗಿಂತ ಈ ಮನಸ್ಥಿತಿ ಕೆಟ್ಟದು. ಈ ಹಿಂದೆ ಮುಂಬೈ ದಾಳಿ ವೇಳೆಯೂ ಕಸಾಬ್ ಕೂಡ ಕೈಗೆ ದಾರ ಕಟ್ಟಿಕೊಂಡು ಹೀಗೆ ಬಂದಿದ್ದ. ಅವನನ್ನ ಬಂಧಿಸದಿದ್ದರೆ ಅವನನ್ನು ಹಿಂದೂ ಭಯೋತ್ಪಾದಕ ಎಂದು ಬಿಂಬಿಸುತ್ತಿದ್ದರು. ಅದರಂತೆ ಇವತ್ತು ಕೂಡ ಹಾಗೇ ಬಿಂಬಿಸುವ ಕೆಲಸವಾಗುತ್ತಿದೆ. ಪಿಎಫ್ಐ ಸಂಘಟನೆ ಬ್ಯಾನ್ನಿಂದ ಹೆದರಿದ್ದಾರೆ. ಪಿಎಫ್ಐನವರಿಗೆ ಬ್ಯಾನ್ ಜೀರ್ಣಿಸಿಕೊಳ್ಳಲು ಸಾಧ್ಯವಾಗಿಲ್ಲ. ಆ ಕಾರಣಕ್ಕಾಗಿಯೇ ಸದ್ಯ ಇರುವಂತ ನೆಟ್ವರ್ಕ್ ಮೂಲಕ ಬದುಕಿದ್ದೇವೆ ಎಂದು ತೋರಿಸಿಕೊಳ್ಳುವ ಪ್ರಯತ್ನವೇ ಇದಾಗಿದೆ ಎಂದಿದ್ದಾರೆ. ಇದನ್ನೂ ಓದಿ:📛 ಅಪ್ರಾಪ್ತ ಬಾಲಕಿಯ ರೇಪ್.. ❎ ಮುಸ್ಲಿಂ ಧರ್ಮಕ್ಕೆ ಮತಾಂತರವಾದರೆ ಮದುವೆ ಎಂದ ವಿವಾಹಿತ ಯೂನಸ್ ಪಾಷ – Vishwanews24
ಪ್ರಕರಣ ಆದಾಗ ಮಾತ್ರ ಬಂದು ಪೊಲೀಸರು ಡ್ರಾಮಾ ಮಾಡುವುದನ್ನು ಬಿಟ್ಟುಬಿಡಿ. ಇತರೆ ಪ್ರಕರಣಗಳಂತೆ ನಾಲ್ಕು ದಿನ ಓಡಾಡಿ 5ನೇ ದಿನಕ್ಕೆ ಪ್ರಕರಣ ಸತ್ತು ಹೋಗುವಂತೆ ಮಾಡಬೇಡಿ. ಎಲ್ಲವನ್ನೂ ಎನ್ಐಎಗೆ ಕೊಟ್ಟಿದ್ದೇವೆಂದು ಕೈ ತೊಳೆದುಕೊಳ್ಳಬೇಡಿ. ಹರ್ಷನ ಕೇಸ್, ಪ್ರವೀಣ್ ನೆಟ್ಟಾರು ಕೇಸ್ನಲ್ಲೂ ಹೀಗೆ ಮಾಡಿದ್ದೀರಾ. ಅಂದೇ ಸರಿಯಾದ ಜಾಡು ಹಿಡಿದು ಹೋಗಿದ್ದರೆ, ಈ ಪ್ರಕರಣವನ್ನು ಭೇದಿಸಬಹುದಿತ್ತು. ಎಲ್ಲವನ್ನು ಗಮನಿಸಿದರೆ ಫೇಲ್ಯೂರ್ ಪೊಲೀಸ್ ಇಲಾಖೆಯದ್ದೆ ಅನ್ನಿಸುತ್ತದೆ. ಈಗಾಲಾದರು ಪ್ರಕರಣದ ಹಿಂದೆ ಬಿದ್ದು, ಭೇದಿಸಿ ಕರ್ನಾಟಕವನ್ನು ಕಾಪಾಡಿ ಎಂದು ಹೇಳಿದ್ದಾರೆ.
ಉಡುಪಿ: ಪ್ರಮೋದ್ ಮಧ್ವರಾಜ್ ಅವರ ಮಾಜಿ ಆಪ್ತ ಸಹಾಯಕ ಗೋವಾದಲ್ಲಿ ಶವವಾಗಿ ಪತ್ತೆ! ಉಡುಪಿ: ಮಾಜಿ ಸಚಿವ ಮತ್ತು ಬಿಜೆಪಿ…
ಮಂಗಳೂರು: ಬೈಕಂಪಾಡಿ ದರೋಡೆ ಪ್ರಕರಣಕ್ಕೆ ಟ್ವಿಸ್ಟ್ - ವಾಹನವನ್ನು ಬಿಟ್ಟು ಪರಾರಿಯಾದ ಆರೋಪಿಗಳು ; ಕಾರು ಪತ್ತೆ ಮಂಗಳೂರು: ಬೈಕಂಪಾಡಿ…
ಮಂಗಳೂರು: ಮನೆ ಮೇಲೆ ತಡೆಗೋಡೆ ಕುಸಿತ; ಇಬ್ಬರು ಮಕ್ಕಳು ಸೇರಿ ಮೂವರು ದುರ್ಮರಣ ಮಂಗಳೂರು: ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯ…
ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ.. ನಾನು ಯಾವುದೇ ತಪ್ಪು ಮಾಡಿಲ್ಲ, ಅಡ್ಡಮತದಾನದಲ್ಲಿ ಭಾಗಿಯಾಗಿಲ್ಲ.. ನಾನು…
ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ ಉಡುಪಿ:…
ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ ನವದೆಹಲಿ: ಜುಲೈ 1 ರಿಂದ ಕಮರ್ಶಿಯಲ್ ಹಾಗೂ…