ಮೂಲ್ಕಿ : ಕೋವಿಡ್ -19 : ಐಕಳಬಾವ ಕಾಂತಾಬಾರೆ -ಬೂದಾಬಾರೆ ಜೋಡು ಕರೆ ಕಂಬಳ ದಿನಾಂಕ ಮುಂದೂಡಿಕೆ – Vishwanews24

Featured, ದಕ್ಷಿಣ ಕನ್ನಡ

ಮೂಲ್ಕಿ : ಕೋವಿಡ್ -19 : ಐಕಳಬಾವ ಕಾಂತಾಬಾರೆ -ಬೂದಾಬಾರೆ ಜೋಡು ಕರೆ ಕಂಬಳ ದಿನಾಂಕ ಮುಂದೂಡಿಕೆ – Vishwanews24

ಮುಲ್ಕಿ : ಐಕಳಬಾವ ಕಾಂತಾಬಾರೆ -ಬೂದಾಬಾರೆ ಜೋಡು ಕರೆ ಕಂಬಳ ಹಾಗೂ ಈ ವರ್ಷದ ಐಕಳೋತ್ಸವ ಕಾರ್ಯಕ್ರಮವು ಮುಂದೂಡಲ್ಪಟ್ಟಿದೆ.

ಕಾರ್ಯಕ್ರಮಗಳನ್ನು ಕರ್ನಾಟಕ ಸರಕಾರದ ಕೋವಿಡ್ ನಿಯಮಗಳ ಆದೇಶದ ಪ್ರಯುಕ್ತ ಮುಂದೂಡಲಾಗಿದೆ ಎಂದು ಕಾಂತಾಬಾರೆ -ಬೂದಾಬಾರೆ ಕಂಬಳ ಸಮಿತಿ ಐಕಳ ಹಾಗೂ ಮುಂಬಯಿ ಸಮಿತಿ ಮಾಧ್ಯಮಗಳಿಗೆ ಮಾಹಿತಿ ನೀಡಿದೆ.

ಸಮಾಜ ವಿರೋಧಿ ಶಕ್ತಿಗಳೊಂದಿಗೆ ಗುರುತಿಸಿಕೊಂಡು ಅಪರಾಧ ಕೃತ್ಯಗಳಲ್ಲಿ ಭಾಗವಹಿಸುವ ಯಾವುದೇ ಪೊಲೀಸ್ ಸಿಬ್ಬಂದಿ ವಿರುದ್ದ ನಿರ್ದಾಕ್ಷಿಣ ಕ್ರಮ : ಆರಗ ಜ್ಞಾನೇಂದ್ರ ಎಚ್ಚರಿಕೆ – Vishwanews24

ಕರಾವಳಿ ಕರ್ನಾಟಕದ ತುಳುನಾಡಿನ ಪುರಾತನ ಜಾನಪದ ಕ್ರೀಡೆ, ಧಾರ್ಮಿಕ ಆಚರಣೆಗಳಿಂದ ಸಂಪ್ರದಾಯಬದ್ಧವಾಗಿ ನಡೆಯುವ ಐಕಳಬಾವ ಕಾಂತಾಬಾರೆ -ಬೂದಾಬಾರೆ ಜೋಡು ಕರೆ ಕಂಬಳ ಹಾಗೂ ಈ ವರ್ಷದ ಐಕಳೋತ್ಸವ ಮುಂದಿನ ಫೆಬ್ರವರಿ ತಿಂಗಳಲ್ಲಿ ಸೂಕ್ತ ದಿನಾಂಕದಂದು ಮಾಡುವುದಾಗಿ ತೀರ್ಮಾನಿಸಲಾಗಿದೆ.

ಧಾರ್ಮಿಕ ವಿಧಾನಗಳೊಂದಿಗೆ ಈ ವರ್ಷದ ಕಾರ್ಯಕ್ರಮವನ್ನು ಎಲ್ಲಾ ಕಂಬಳ ಅಭಿಮಾನಿಗಳ, ಜಿಲ್ಲಾಡಳಿತದ ಹಾಗೂ ಜಿಲ್ಲಾ ಕಂಬಳ ಸಮಿತಿಯ, ಸಹಕಾರದೊಂದಿಗೆ ನಡೆಸಲು ಸಮಿತಿಯ ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ನಿಶ್ಚಸಿರುತ್ತೇವೆ ಎಂದು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಉಡುಪಿ ಸರ್ಕಾರಿ ಕಾಲೇಜ್ ಸ್ಕಾರ್ಫ್ ವಿವಾದ : ಈ ಅಭ್ಯಾಸವು ಅಶಿಸ್ತು ಮತ್ತು ಶಾಲೆ ಕಾಲೇಜುಗಳು ಧರ್ಮವನ್ನು ಆಚರಿಸುವ ಸ್ಥಳವಲ್ಲ : ಶಿಕ್ಷಣ ಸಚಿವ ಬಿ. ಸಿ. ನಾಗೇಶ್ – Vishwanews24

Leave a Reply