ಮೂಳೂರು ಬಿಲ್ಲವ ಸಂಘದ ವತಿಯಿಂದ ತಮ್ಮ ವ್ಯಾಪ್ತಿಯ ಸಮಾಜ ಭಾಂಧವರಿಗೆ ತಲಾ25 ಕೇಜಿ ಅಕ್ಕಿ ವಿತರಣೆ.: vishwanews24

Featured, ಉಡುಪಿ

ಮೂಳೂರು ಬಿಲ್ಲವ ಸಂಘದ ವತಿಯಿಂದ ತಮ್ಮ ವ್ಯಾಪ್ತಿಯ ಸಮಾಜ ಭಾಂಧವರಿಗೆ ತಲಾ೨೫ ಕೇಜಿ ಅಕ್ಕಿ ವಿತರಣೆ.

ಕಾಪು: ಮೂಳೂರು ಬ್ರಹ್ಮ ಶ್ರೀ ನಾರಾಯಣ ಗುರು ಬಿಲ್ಲವ ಸಂಘದ ವತಿಯಿಂದ ತಮ್ಮ ವ್ಯಾಪ್ತಿಯಲ್ಲಿರುವ ಸಮಾಜ ಭಾಂಧವದ ಕುಟುಂಬಗಳಿಗೆ ತಲಾ ೨೫ ಕೇಜಿ ಅಕ್ಕಿ ವಿತರಿಸುವ ಕಾರ್ಯ ಆದಿತ್ಯವಾರ ನಡೆಯಿತು.

ಸುಮಾರು ಸಂಘದ ಎಲ್ಲಾ ಸದಸ್ಯರ ಕುಟುಂಬಗಳಿಗೆ ವಿತರಿಸುವ ಕಾರ್ಯ ಮಾಡಿದರು. ಈ ಸಂಧರ್ಭದಲ್ಲಿ ಸಂಘದ ಅಧ್ಯಕ್ಷರಾದ ಸುಭಾಶ್ಚಂದ್ರ ರಾಜಮನೆ, ಉಪಾಧ್ಯಕ್ಷ ಸಂಜೀವ ಆರ್ ಅಮೀನ್, ಕಾರ್ಯದರ್ಶಿ ಪ್ರಕಾಶ್ ಅಂಚನ್, ಉಪಕಾರ್ಯದರ್ಶಿ ಚೇತನ್ ಆರ್ ಪೂಜಾರಿ,ಕೋಶಾಧಿಕಾರಿ ವಾಸು ಎಸ್ ಪೂಜಾರಿ.ಉಪಕೋಶಾಧಿಕಾರಿ ವಿಜಯ ಆರ್ ಕೋಟ್ಯಾನ್ ಆಂತರೀಕ ಲೆಕ್ಕ ಪರಿಶೋಧಕ ಧೀರೆಶ್ ಡಿ.ಪೂಜಾರಿ ಮತ್ತು ಕಾರ್ಯಕಾರಿಣಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು