ಮೈಸೂರು : ಆರ್ಥಿಕ ಸಂಕಷ್ಟ ; ಊಟದಲ್ಲಿ ವಿಷ ಬೆರೆಸಿಕೊಂಡು ಸೇವಿಸಿ ದಂಪತಿ ಆತ್ಮಹತ್ಯೆಗೆ ಶರಣು – Vishwanews24
ಮೈಸೂರು : ಆರ್ಥಿಕ ಸಂಕಷ್ಟ ; ಊಟದಲ್ಲಿ ವಿಷ ಬೆರೆಸಿಕೊಂಡು ಸೇವಿಸಿ ದಂಪತಿ ಆತ್ಮಹತ್ಯೆಗೆ ಶರಣು – Vishwanews24
ಮೈಸೂರು:ಆರ್ಥಿಕ ಸಂಕಷ್ಟಕ್ಕೆ ಹೆದರಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಮೈಸೂರಿನಲ್ಲಿ ನಡೆದಿದೆ.
ನಗರದ ಉದಯಗಿರಿ ಬಳಿಯ ಸಾತಗಳ್ಳಿ ಲೇಔಟ್ ನಿವಾಸಿ ಸಂತೋಷ್ (26) ಮತ್ತು ಆತನ ಪತ್ನಿ ಭವ್ಯ (22), ಮೃತ ದುರ್ಧೈವಿಗಳು ಎಂದು ಗುರುತಿಸಲಾಗಿದೆ.
ಸಂತೋಷ್ ಉದ್ಯಮಿಯಾಗಿದ್ದು, ಕೆಲ ವರ್ಷಗಳಿಂದ ಉದ್ಯೋಗದಲ್ಲಿ ಸತತ ನಷ್ಟ ಅನುಭವಿಸಿ ಕೆಲವರ ಬಳಿ ಸಾಲ ಪಡೆದುಕೊಂಡು ಸಾಲದ ಸುಳಿಯಲ್ಲಿ ಸಿಲುಕಿದ್ದರು. ಹೆಚ್ಚುತ್ತಿರುವ ಸಾಲ ಮತ್ತು ಸಾಲಗಾರರನ್ನು ಎದುರಿಸಲಾಗದೆ ದಂಪತಿಗಳು ತಮ್ಮ ಉಟದಲ್ಲಿ ವಿಷ ಬೆರೆಸಿ ಸೇವಿಸಿದ್ದಾರೆ.
ಸ್ಥಳಕ್ಕೆ ಉದಯಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ :
