ಮೋದಿ ಮತ್ತೆ ಪ್ರಧಾನಿಯಾಗಲಿ ಎಂದು ಸೂಲಿಬೆಲೆ ಹಗಲು ರಾತ್ರಿ ತಪಸ್ಸು ಮಾಡಿದ್ದಾರೆ, ಅವರನ್ನು ಟೀಕಿಸುವ ನೈತಿಕತೆ ನಿಮಗೆ ಇಲ್ಲ : ಬಸವರಾಜ್ ಯತ್ನಾಳ್ -Vishwanews24
ವಿಜಯಪುರ :ಮೋದಿ ಮತ್ತೆ ಪ್ರಧಾನಿಯಾಗಲಿ ಎಂದು ಸೂಲಿಬೆಲೆ ಹಗಲು ರಾತ್ರಿ ತಪಸ್ಸು ಮಾಡಿದ್ದಾರೆ, ಅವರನ್ನು ಟೀಕಿಸುವ ನೈತಿಕತೆ ನಿಮಗೆ ಇಲ್ಲ ಎಂದು ಸ್ವಪಕ್ಷೀಯ ಸಂಸದರ ವಿರುದ್ಧವೇ ಶಾಸಕ ಬಸವರಾಜ್ ಯತ್ನಾಳ್ ಕಿಡಿಕಾರಿದ್ದಾರೆ.
ನಿಮ್ಮ ವೈಫೈಲ್ಯಗಳನ್ನು ಸೂಲಿಬೆಲೆ ಮೇಲೆ ಯಾಕೆ ಹಾಕ್ತೀರಿ ,ಅವರು ಕೇಳುವುದರಲ್ಲಿ ತಪ್ಪೇನಿದೆ..?ಎಂದರು.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬಸವರಾಜ್ ಯತ್ನಾಳ್, ಚಕ್ರವರ್ತಿ ಸೂಲಿಬೆಲೆ ಪ್ರಧಾನಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲಿ ಎಂದು ಹಗಲು ರಾತ್ರಿ ತಪಸ್ಸು ಮಾಡಿದ್ದಾರೆ. ಇಂತಹ ವ್ಯಕ್ತಿಯವನ್ನು ಬೈದರೇ, ನೀವು ಪ್ರಧಾನಿ ನರೇಂದ್ರ ಮೋದಿಯವರನ್ನು ಬೈದಂತೆಯೇ ಎಂದು ಕಿಡಿಕಾರಿದ್ದಾರೆ.
ಇನ್ನೂ ಮುಂದುವರೆಗೆ ಸೂಲಿಬೆಲೆ ಪರ ಮಾತನಾಡಿದ ಶಾಸಕ ಬಸವರಾಜ್ ಯತ್ನಾಳ್, ನಿಮ್ಮ ವೈಫಲ್ಯಗಳನ್ನು ಚಕ್ರವರ್ತಿ ಸೂಲಿಬೆಲೆ ಮೇಲೆ ಯಾಕೆ ಹಾಕ್ತೀರಿ.? ಸೂಲಿಬೆಲೆ ಟೀಕಿಸುವ ನೈತಿಕತೆ ನಿಮಗೆ ಇಲ್ಲ ಎಂದು ಸ್ವಪಕ್ಷೀಯ ಸಂಸದರು, ಸಚಿವರ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ.
