ಯಾವ ಕಾರಣಕ್ಕೂ ಅಧ್ಯಕ್ಷನಾಗಿ ಮುಂದುವರಿಯುವುದಿಲ್ಲ ; ಅಧ್ಯಕ್ಷ ಪದವಿಗೆ ಸೂಕ್ತ ವ್ಯಕ್ತಿಯನ್ನು ಹುಡುಕಿ : ರಾಹುಲ್ ಗಾಂಧಿ -Vishwanews24
ನವದೆಹಲಿ: ಲೋಕಸಮರದಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ನಂತರ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ತಾವು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ತೀರ್ಮಾನಿಸಿದ್ದಾರೆ. ಆದರೆ ಪಕ್ಷದ ಹಿರಿಯ ನಾಯಕರು ರಾಹುಲ್ ನಿರ್ಧಾರವನ್ನಿನ್ನೂ ಅನುಮೋದಿಸಿಲ್ಲ. ಆದರೆ ರಾಹುಲ್ ಮಾತ್ರ ತಾವು ಹಿಡಿದ ಪಟ್ಟು ಬಿಡುತ್ತಿಲ್ಲ. ಆದಷ್ಟು ಶೀಘ್ರ ಅಧ್ಯಕ್ಷ ಪದವಿಗೆ ಸೂಕ್ತ ವ್ಯಕ್ತಿಯನ್ನು ಹುಡುಕಿ ಎಂದು ಅವರು ಕೈ ನಾಯಕರಿಗೆ ಸೂಚಿಸಿದ್ದಾರೆ.
ರಾಹುಲ್ ಗಾಂಧಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಮುಂದಾಗಿರುವ ರಾಹುಲ್ ಗಾಂಧಿ ತಾವು ಯಾವ ಕಾರಣಕ್ಕೂ ಅಧ್ಯಕ್ಷರಾಗಿ ಮುಂದುವರಿಯುವುದಿಲ್ಲ ಎಂದು ಹೇಳಿದ್ದಲ್ಲದೆ ಪಕ್ಷದ ಪುನರುಜ್ಜೀವನಕ್ಕಾಗಿ ಗಾಂಧಿ-ನೆಹರು ಕುಟುಂಬ ಹೊರತಾದ ನಾಯಕತ್ವವನ್ನು ಹುಡುಕಬೇಕೆಂದು ಒತ್ತಾಯಿಸಿದ್ದಾರೆ.
ರಾಹುಲ್ ಗಾಂಧಿಯವರ ಪ್ರಸ್ತಾಪದ ನಂತರ ಕಾಂಗ್ರೆಸ್ ನಾಯಕತ್ವದ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದೆ.
ಪಕ್ಷದಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವಿರುವ ಸಿಡಬ್ಲ್ಯುಸಿ ಸಭೆಯಲ್ಲಿ ಪಕ್ಷಕ್ಕೆ ಅಗತ್ಯವಿರುವ ರಚನಾತ್ಮಕ ಸುಧಾರಣೆಗಳನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ತೀರ್ಮಾನ ಮಾಡುವ ಸಾಧ್ಯತೆ ಇದೆ.
ಈಗಿನ ಬಿಕ್ಕಟ್ಟನ್ನು ಹೇಗೆ ಪರಿಹರಿಸಬೇಕುಕು ಮತ್ತು ಪಕ್ಷವನ್ನು ಪುನರ್ ಸಂಘಟಿಸುವುದು ಹೇಗೆ ಎಂಬುದರ ಬಗ್ಗೆ ಹಲವಾರು ಸಲಹೆಗಳು ಬಂದಿದೆ.ಅಧ್ಯಕ್ಷೀಯ ವ್ಯವಸ್ಥೆಯ ಬಗ್ಗೆ ಪಕ್ಷದ ವಲಯಗಳಲ್ಲಿ ಒಂದು ಚರ್ಚೆ ಇದಾಗಲೇ ನಡೆದಿದ್ದು ಒಬ್ಬರ ಅಧ್ಯಕ್ಷತೆ ಅಥವಾ ಒಂದು ಅಧ್ಯಕ್ಷೀಯ ಸಮಿತಿಯ ರಚನೆ ಇಲ್ಲವೇ ಒಂದು ಮಂಡಳಿಯ ರಚನೆ ಆಗಬೇಕೆ ಎಂಬ ಬಗ್ಗೆ ತೀರ್ಮಾನಿಸಬೇಕಿದೆ.ಮುಂದಿನ ಸಿಡಬ್ಲ್ಯುಸಿ ಸಭೆಯು ಪಕ್ಷವು ಏಕವ್ಯಕ್ತಿಯ ಅಧ್ಯಕ್ಷ ಸ್ಥಾನ ಹೊಂದಬೇಕೆ ಅಥವಾ ಸಮಿತಿ, ಮಂಡಳಿಯ ರಚನೆ ಅನಿವಾರ್ಯವೇ ಎಂಬುದನ್ನು ತೀರ್ಮಾನಿಸಲಿದೆ.
ಇದೀಗ ಮುಂದಿನ ಕಾಂಗ್ರೆಸ್ ಅಧ್ಯಕ್ಷರು ಯಾರಾಗಲಿದ್ದಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.
