ಉಡುಪಿ: ರಾಜಕೀಯ ಪಕ್ಷಗಳ ಇಂದಿನ ಆಪರೇಷನ್, ರೆಸಾರ್ಟ್ ರಾಜಕಾರಣದಿಂದಾಗಿ ಪ್ರಜಾಪ್ರಭುತ್ವ ವಿಕೃತಗೊಂಡಿದೆ. ಹೀಗಾಗಿ ಯಾವುದೇ ಪಕ್ಷಗಳ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯವಿಲ್ಲ ಎಂದು ಉಡುಪಿಯ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿ ಮಾತನಾಡಿರುವ ಅವರು, “ಕುಮಾರಸ್ವಾಮಿ ಅವರು ಅನುಭವಿಗಳು. ಅವರಿಂದ ಒಳ್ಳೆಯ ಆಡಳಿತ ನಿರೀಕ್ಷಿಸುತ್ತಿದ್ದೇನೆ. ಆದರೆ, ಪ್ರಸ್ತುತ ರಾಜಕಾರಣದಲ್ಲಿ ಶಾಸಕರನ್ನು ಖರೀದಿಸಲು ಪ್ರಯತ್ನಿಸುವುದು, ಅವರನ್ನು ಬಂಧಿಸುವುದು ಇದೆಲ್ಲವೂ ಸರಿಯಲ್ಲ. ಈಗಿನ ಯಾವ ಪಕ್ಷಗಳ ಬಗ್ಗೆಯೂ ನನಗೆ ಒಳ್ಳೆಯ ಅಭಿಪ್ರಾಯವಿಲ್ಲ ಎಂದರು.
ಇದೆಲ್ಲದರ ನಡುವೆಯೂ ನನ್ನದೊಂದು ಸೂಚನೆ ಇದೆ. ಬಹುಶಃ ಅದು ಸಾಧ್ಯವಾಗದು. ಅದೇನೆಂದರೆ, ಸರ್ವ ಪಕ್ಷ ಸರ್ಕಾರವಾಗಬೇಕು. ರಾಜಕಾರಣಿಗಳಿಗೆ ಬೈದಾಡಿಕೊಳ್ಳುವುದೂ ಗೊತ್ತು, ಒಂದಾಗುವುದೂ ಗೊತ್ತು. ಅವರು ಮಾಡುವುದೆಲ್ಲ ನಾಟಕ. ಒಂದಾಗಬಯಸುವವರು ಸರ್ವ ಪಕ್ಷ ಸರ್ಕಾರ ಮಾಡಿದರೆ ಒಳಿತು. ಎಲ್ಲ ದ್ವೇಷಗಳನ್ನು ಬದಿಗೊತ್ತಿ ಸರ್ವ ಪಕ್ಷ ಸರ್ಕಾರ ರಚನೆ ಮಾಡಬೇಕು. ಅಂಥ ಪ್ರಯೋಗವೊಂದು ರಾಜ್ಯದಲ್ಲಿ ನಡೆಯಬೇಕು. ಆಗ ಎಲ್ಲದಕ್ಕೂ ಪರಿಹಾರ ಸಿಗುತ್ತದೆ. ರಾಷ್ಟ್ರಪತಿ ಆಡಳಿತವೂ ಬರುವುದಿಲ್ಲ. ಆದರೆ, ವಿರೋಧ ಪಕ್ಷ ರಹಿತ ಸರ್ಕಾರ ರಚಿಸಬೇಕು ಎಂದು ಹೇಳುತ್ತಿಲ್ಲ , ” ಎಂದು ಹೇಳಿದರು.
ಈಗ ಸರ್ಕಾರ ರಚನೆಯಾಗಿದೆ. ಈಗಲೂ ಭಯ ಹೋಗಿಲ್ಲ. ಏನಾಗುತ್ತದೆಯೋ ಎಂಬ ಆತಂಕ ಇದ್ದೇ ಇದೆ. ಮಂತ್ರಿ ಮಂಡಲ ರಚನೆಯಾದ ಮೇಲೆ ಏನಾಗುತ್ತೆಯೋ ಗೊತ್ತಿಲ್ಲ ಎಂದೂ ಸರ್ಕಾರದ ಭವಿಷ್ಯದ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದರು.
ಮೋದಿ ಸರ್ಕಾರದಿಂದ ನಿರೀಕ್ಷಿತ ಸಾಧನೆ ಆಗಿಲ್ಲ
ಮೋದಿ ಸರ್ಕಾರಕ್ಕೆ ನಾಲ್ಕು ವರ್ಷ ತುಂಬಿದ್ದರ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶ್ರೀಗಳು, ಮೋದಿ ಸರ್ಕಾರದಿಂದ ಕೆಲವೊಂದು ಸಾಧನೆಯಾಗಿದೆ. ಆದರೆ, ನಾವು ನಿರೀಕ್ಷಿತ ಸಾಧನೆ ಆಗಿಲ್ಲ. ಕಪ್ಪು ಹಣ ತರುವುದಾಗಿ ಹೇಳಿದರು, ಗಂಗೆ ಶುದ್ಧೀಕರಿಸುವುದಾಗಿ ಹೇಳಿದರು ಅದ್ಯಾವುದೂ ಆಗಿಲ್ಲ. ಆದರೆ, ಆರ್ಥಿಕ ವಲಯದಲ್ಲಿ ಕೆಲವೊಂದು ನಿಯಂತ್ರಣವನ್ನಂತೂ ತಂದಿದ್ದಾರೆ.
ಇನ್ನು, ರಾಮ ಮಂದಿರ ನಿರ್ಮಾಣದ ಬಗ್ಗೆ ಕೇಳಿದ ಪ್ರಶ್ನೆಗೆ “ರಾಮ ಮಂದಿರ ನಿರ್ಮಾಣಕ್ಕಿಂತಲೂ ಮೊದಲು ಆಗಬೇಕಾದ ಕಾರ್ಯಗಳು ಸಾಕಷ್ಟಿವೆ. ಆರ್ಥಿಕ, ಕೃಷಿ ರಂಗದ ಅಭಿವೃದ್ಧಿಯಾಗಬೇಕು. ಗಂಗಾ ನೈರ್ಮಲ್ಯಗೊಳ್ಳಬೇಕು ಎಂದರು.
ಒಂದಾದರಷ್ಟೇ ಗೆಲುವು ಎಂಬುದು ವಿಪಕ್ಷಗಳಿಗೆ ಗೊತ್ತಾಗಿದೆ
ದೇಶದಲ್ಲಿ ಬಿಜೆಪಿ ವಿರುದ್ಧ ಎಲ್ಲ ಪಕ್ಷಗಳು ಒಂದಾಗಿವೆ. ಹಿಂದೆ ಕಾಂಗ್ರೆಸ್ ವಿರುದ್ಧ ಹೀಗೆಯೇ ಎಲ್ಲರೂ ಒಟ್ಟು ಗೂಡಿದ್ದರು. ಹಾಗೆಯೇ ಬಿಜೆಪಿ ವಿರುದ್ಧವೂ ಒಂದಾಗಿದ್ದಾರೆ. ಒಂದಾದರೆ ಮಾತ್ರ ಐಕ್ಯಮತ್ಯ ಸಾಧ್ಯ ಎಂಬುದು ವಿಪಕ್ಷಗಳಿಗೆ ಗೊತ್ತಾಗಿದೆ. ಆದರೆ, ಅದರಿಂದ ಏನಾಗಲಿದೆ. ಮೋದಿ ಏನು ಮಾಡುತ್ತಾರೆ ಎಂಬುದನ್ನು ಇನ್ನು ಒಂದು ವರ್ಷದ ಕಾಲವಧಿಯಲ್ಲಿ ಗಮನಿಸಬೇಕು. ಆದರೆ, ವಿಪಕ್ಷಗಳ ಒಟ್ಟುಗೂಡುವಿಕೆ ಚುನಾವಣೆ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ ಎಂದರು.
ಇಫ್ತಾರ ಕೂಟ ಮಾಡುವ ಅಭಿಲಾಷೆ ಇದೆ
ಈ ಬಾರಿಯೂ ಇಫ್ತಾರ್ ಕೂಟ ಆಯೋಜಿಸುವ ಭಾವನೆ ಇದೆ. ಮುಸಲ್ಮಾನ ನಾಯಕರು, ಪ್ರಮುಖರು ಒಪ್ಪಿದರೆ ಮಾಡುತ್ತೇನೆ. ಈ ಬಾರಿ ಮುಸಲ್ಮಾನರು ಕೂಟಕ್ಕೆ ಉತ್ಸಾಹ ತೋರಿಸುತ್ತಿಲ್ಲ. ಮೂರ್ತಿ ಇರುವಲ್ಲಿ ಕಾರ್ಯಕ್ರಮ ಆಯೋಜಿಸಲು ಮುಸಲ್ಮಾನರು ಒಪ್ಪುತ್ತಿಲ್ಲ. ಗೋವಿಂದ ಕಲ್ಯಾಣ ಮಂಟಪದಲ್ಲಿ ಸತ್ಕಾರ ಕೂಟ ಆಯೋಜಿಸುವ ಆಲೋಚನೆಯಿದೆ
ಸಂವಿಧಾನ ಬದಲಿಸುವ ಮಾತಿಗೆ ಸಹಮತವಿಲ್ಲ
ಅಲ್ಪಸಂಖ್ಯಾತರನ್ನು, ಬಹು ಸಂಖ್ಯಾತರನ್ನು ಸಮಾನವಾಗಿ ಕಾಣಬೇಕಿದೆ. ಸಂವಿಧಾನ ಬದಲಿಸಿ ಅಂತ ನಾನು ಯಾವತ್ತೂ ಹೇಳಿಲ್ಲ. ದೇಶದಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಎಲ್ಲರಿಗೂ ಒಂದೇ ನ್ಯಾಯ ಇರಬೇಕು. ಶಿಕ್ಷಣ, ಆಹಾರ, ಸರ್ಕಾರದ ಯೋಜನೆ ಎಲ್ಲಾ ಧರ್ಮದ ಬಡವರಿಗೆ ಸಿಗಬೇಕು. ನಾನು ಅಂಬೇಡ್ಕರ್ ವಿರೋಧಿಯಲ್ಲ. ಎಲ್ಲಾ ಧರ್ಮ , ಜಾತಿಯವರೊಂದಿಗೆ ನಾನು ಚೆನ್ನಾಗಿದ್ದೇನೆ ಎಂದು ಪೇಜಾವರ ಶ್ರೀ ಹೇಳಿದ್ದಾರೆ.
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…