ರಕ್ತದಾನ ಎಂಬುದು ದೇವರ ಸೇವೆ ಮಾಡಿದಂತೆ ಗೀತಾಂಜಲಿ ಎಮ್.ಸುವರ್ಣ.vishwanews24

Featured, ಉಡುಪಿ

ಕಟಪಾಡಿ: ರಕ್ತನಿಧಿ ಉಡುಪಿ ಜಿಲ್ಲಾ‌ ಆಸ್ಪತ್ರೆ ಉಡುಪಿ,ಕುರ್ಕಾಲು ಯುವಕ ಮಂಡಲ ಹಾಗೂ ಲಯನ್ಸ್ ಕ್ಲಬ್ ಸುಭಾಸ್ ನಗರ ಹಾಗೂ ವಿವಿಧ ಸಂಘ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಆದಿತ್ಯವಾರ ಕುರ್ಕಾಲು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿ“ಕೊರೋನಾ ಎಂಬ ಮಹಮಾರಿ ಇಡೀ ಜಗತ್ತನ್ನು ಆವರಿಸಿರುವ ಸಮಯದಲ್ಲಿ ಯುವಕರ ತಂಡ ಕೊರೋನಾ ವಾರಿಯರ್ಸ್‌ ರೀತಿಯಲ್ಲಿ ರಕ್ತದಾನ‌ ಮಾಡುವ ಮೂಲಕ ದೇವರಿಗೆ ಪ್ರೀತಿ ಆಗುವ ರೀತಿಯಲ್ಲಿ ಮಹತ್ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ,ಲಾಕ್-ಡೌನ್ ಸಮಯದಲ್ಲಿ ಪ್ರೀತಿ ವಿಶ್ವಾಸ ಹೆಚ್ವಾಗಿದೆ ಒಬ್ಬರಿಗೊಬ್ಬರು ಪರಸ್ಪರ ಸಹಕರಿಸುವ ಮೂಲಕ ಮಾನವೀಯ ಕಾರ್ಯ ಮಾಡುತ್ತಿರುವುದು ಅಭಿನಂದನನೀಯ ಎಂದರು.”

ಡಾ.ವೀಣಾ  ಮಾತಾಡಿ ” ಉಡುಪಿ ಜಿಲ್ಲೆಯಲ್ಲಿ ರಕ್ತದ ಕೊರತೆ ಇದೆ ಎಂದ ಸಂಧರ್ಭದಲ್ಲಿ ಉಡುಪಿಯ ಜನತೆ ಮುಂದೆ ಬಂದು ರಕ್ತದಾನ‌ ಮಾಡುವ ಕಾರ್ಯ ಮಾಡಿದ್ದು ಇದೇ ವಿಚಾರವಾಗಿ ಕುರ್ಕಾಲು ಭಾಗದ ಯುವಕರು ಕೂಡ ಕೈ ಜೋಡಿಸಿದ್ದು ಅಭಿನಂದನೆ ಎಂದರು.

ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಸುಭಾಸ್ ನಗರ ಅಧ್ಯಕ್ಷ ದೇವುಪುತ್ರ ಕೋಟ್ಯಾನ್ ,ದಿನಕರ ಶೆಟ್ಟಿ ಗೌರವಧ್ಯಕ್ಷರು ಯುವಕ ಮಂಡಲ‌ ಕುರ್ಕಾಲು, ಉಡುಪಿ ರಕ್ತನಿಧಿ ಮುಖ್ಯಸ್ಥೆ ಡಾ.ವೀಣಾ,ಕುರ್ಕಾಲು ಯುವಕ ಮಂಡಲ ಅಧ್ಯಕ್ಷ ಪ್ರವೀಣ್ ಕುರ್ಕಾಲು,ಉಪನ್ಯಾಸಕ‌ ವಿಶಾಕ್ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.

ವರದಿ: ಪುರುಷೋತ್ತಮ ಸಾಲಿಯಾನ್ ಮೂಳೂರು

ವಿಶ್ವನ್ಯೂಸ್24:9343846360