ರಾಜ್ಯದ ದುರಾಡಳಿತ ಖಂಡಿಸಿ ಕಾಪುವಿನ ಯುವಕರ ತಂಡ ಕಾಂಗ್ರೇಸ್ ಬಿಟ್ಟು ಬಿಜೆಪಿ ಸೇರ್ಪಡೆ.

Featured, ಉಡುಪಿ

 

ರಾಜ್ಯದ ದುರಾಡಳಿತ ಖಂಡಿಸಿ ಕಾಪುವಿನ ಯುವಕರ ತಂಡ ಕಾಂಗ್ರೇಸ್ ಬಿಟ್ಟು ಬಿಜೆಪಿ ಸೇರ್ಪಡೆ.

ಪ್ರಧಾನಿ ನರೇಂದ್ರ ಮೋದಿಯ ಕಾರ್ಯ ವೈಖರಿ ಮೆಚ್ಚಿ ರಾಜ್ಯದಲ್ಲಿ ಕಾಂಗ್ರೆಸ್‍ನ ದುರಾಡಳಿತ ಖಂಡಿಸಿ ಕಾಪು ಕೈಪುಂಜಾಲಿನ ಯುವಕರ ತಂಡವೊಂದು ಕಾಪು ಪುರಸಭೆ  ಬಿಜೆಪಿ ಅಧ್ಯಕ್ಷ ಸಂದೀಪ್ ಶೆಟ್ಟಿ ಹಾಗೂ ಯೋಗಿಶ್ ಪೂಜಾರಿ ಮುಂದಾಲತ್ವದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದೆ.

ಕೈಪುಂಜಾಲಿನ ರವಿ ಬಿಂದಾಸ್, ಪ್ರಸಾದ್ ಪೂಜಾರಿ , ರಾಘವೇಂದ್ರ ಅಮೀನ್, ಸುರಜ್ ಪೂಜಾರಿ, ಚರಣ್ ಪೂಜಾರಿ, ವಿಲ್ಸನ್ ಸೋನ್ಸ್, ವಿವಿನ್ ಕ್ರಿಸ್ತೋಫರ್, ವಸಂತ್ ಕಲ್ಲಿಬೈಲು, ಪ್ರಭಾನಂದ ಮಾಬಿನ್, ಸ್ಯಾಮ್‍ಸನ್,ಕೆವಿನ್ ರಿಚರ್ಡ್ , ಕೆನ್ವಿತ್ ರಿಚರ್ಡ್ ಸೇರಿದಂತೆ ಮತ್ತಿತರರಿಗೆ ಪಕ್ಷದ ಧ್ವಜ ನೀಡಿ ಸೇರ್ಪಡೆಗೊಳಿಸಲಾಯಿತು.

ಮಧ್ಯಪ್ರದೇಶದ ಸಂಸದ ಹಾಗೂ ಕಾಪು ಚುನಾವಣಾ ಉಸ್ತುವಾರಿ ಗಣೇಶ್ ಸಿಂಗ್, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಕಾಪು ಕ್ಷೇತ್ರ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದಬೆಟ್ಟು, ಗುರ್ಮೆ ಸುರೇಶ್ ಶೆಟ್ಟಿ . ಲಾಲಾಜಿ ಆರ್ ಮೆಂಡನ್, ಯಶ್‍ಪಾಲ್ ಸುವರ್ಣ, ಕುಯಿಲಾಡಿ ಸುರೇಶ್ ನಾಯಕ್, ಗೀತಾಂಜಲಿ ಸುವರ್ಣ. ಪುರಸಭಾ ಸದಸ್ಯ ಕಿರಣ್ ಆಳ್ವ ಉಪಸ್ಥಿತರಿದ್ದರು.