ರಾಯಚೂರು: ಜಿಲ್ಲೆಯಲ್ಲಿ ಮತ್ತೊಂದು ಲವ್ಕೇಸ್ ನಡೆದಿದೆ ಎನ್ನಲಾಗಿದ್ದು, ಅಶ್ರಯ ನೀಡಿದ್ದ ಮನೆಮಾಲೀಕರ ಮಗಳನ್ನೇ ಮುಸ್ಲಿಂ ಹುಡುಗನೊಬ್ಬ ಪಟಾಯಿಸಿಕೊಂಡು ಮದುವೆಯಾಗಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ.
ರಾಯಚೂರಿನ ರೆಹಾನ್ ಎನ್ನುವವನ ವಿರುದ್ದ ಲವ್ಜಿಹಾದ್ ಆರೋಪ ಕೇಳಿ ಬಂದಿದ್ದು, ಲಾಕ್ ಡೌನ್ವೇಳೆಯಲ್ಲಿ ರೆಹಾನ್ ಕುಟುಂಬವವರು ಹಿಂದೂ ಕುಟುಂಬದವರ ಮನೆಯಲ್ಲಿ ಅಶ್ರಯಪಡೆದುಕೊಂಡಿದ್ದ ಎನ್ನಲಾಗಿದೆ.
ಈ ವೇಳೆಯಲ್ಲಿ ಮನೆ ಮಾಲೀಕರ ಯುವತಿಯನ್ನು ತಂಗಿ ತಂಗಿ ಎನ್ನುತ್ತಿದ್ದನಂತೆ. ಇನ್ನೂ ಇಬ್ಬರ ನಡುವೆ ಲವ್ ಆಗಿದ್ದು, ಯುವತಿ ರೆಹಾನ್ ಜೊತೆಗೆ ಓಡಿ ಹೋಗಿದ್ದು, ಸದ್ಯ ಆಕೆ ಹೊರ ರಾಜ್ಯದಲ್ಲಿ ಹನಿಮೂನ್ ಮುಗಿಸಿಕೊಂಡು ಬಂದಿದ್ದಾಳೆ. ಈ ವೇಳೆ ಪ್ರಕರಣ ಸಂಬಂಧ ತನಿಖೆ ಪೋಲಿಸ್ನವರ ಮುಂದೆಯೇ ಯುವತಿ ತನ್ನ ಹೆತ್ತವರಿಗೆ ಬೈದಿದ್ದಾಳೆ ಎನ್ನಲಾಗಿದೆ. ಇದಲ್ಲದೇ ಯುವತಿಗೆ ಬೇರೆಯವರ ಜೊತೆಗೆ ಎಂಗ್ಯೇಜ್ಮೆಂಟ್ ಕೂಡ ಆಗಿತ್ತು ಎನ್ನಲಾಗಿದೆ.
ಮಗಳ ಈ ಸ್ಥಿತಿಗೆ ಮುಸ್ಲಿಂ ಯುವಕ ರೆಹಾನ್ ಕಾರಣ. ಆತ ನಮ್ಮ ಮಗಳ ಮನಸನ್ನು ಸಂಪೂರ್ಣವಾಗಿ ಕೆಡಿಸಿದ್ದಾನೆ ಎಂದು ಆಕೆಯ ತಾಯಿ ನಾಗಮ್ಮ ಅಳಲು ತೋಡಿಕೊಂಡಿದ್ದಾರೆ. ಆಕೆಗೆ ಮತ್ತೊಬ್ಬ ಯುವಕನೊಂದಿಗೆ ನಿಶ್ಚಿತಾರ್ಥವೂ ಆಗಿತ್ತು. ಇನ್ನೊಂದು ತಿಂಗಳಲ್ಲಿ ಮದುವೆ ನಡೆಯುವುದಿತ್ತು. ಅದಕ್ಕಾಗಿ ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದೆವು. ಮದುವೆಗೆ ಬೇಕಾದ ವಸ್ತುಗಳನ್ನೆಲ್ಲ ತಂದಿಟ್ಟುಕೊಂಡಿದ್ದೆವು. ಈಗ ನೋಡಿದರೆ ಆ ಮುಸ್ಲಿಂ ಹುಡುಗ ಹೀಗೆ ಮಾಡಿದ್ದಾನೆ. ನನ್ನ ಪುತ್ರಿಗೆ ಬುರ್ಖಾ ಹಾಕಿಸಲಾಗಿದೆ. ನಮಗೆ ಬುರ್ಖಾ ಬೇಕಿಲ್ಲ, ಆ ಯುವಕ ರೆಹಾನ್ ಕೂಡ ಬೇಕಾಗಿಲ್ಲ. ನಮಗೆ ನನ್ನ ಮಗಳು ಬೇಕು’ ಎಂದು ಗೋಳಾಡಿದ್ದಾರೆ.
ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ ಮೃತದೇಹ ಪತ್ತೆ ಉಳ್ಳಾಲ : ಮೀನುಗಾರಿಕೆಗೆ ತೆರಳಿದ್ದ ವೇಳೆ ದೈತ್ಯ ಗಾತ್ರದ ಅಲೆಗೆ…
ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ ಬೆಂಗಳೂರು : ನಟಿ ಅನುಪಮಾ ಗೌಡ ಅವರು ನಟನೆಯ ಮೂಲಕ…
ಉಪ್ಪೂರು : ವಯೋವಂದನ ಆತಿಥ್ಯ ಗೃಹ "ಸೈಟ್ ಆಫೀಸ್" ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ ಉಡುಪಿ ಜಿಲ್ಲೆ ಬ್ರಹ್ಮಾವರ…
ಪುತ್ತೂರು: ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು ಪುತ್ತೂರು: ಕೆಯ್ಯರು ಗ್ರಾಮದ ಬೊಳಿಕ್ಕಳ…
ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ ಬೆಂಗಳೂರು : ಕೇಂದ್ರ ಸರಕಾರದ…
ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ ಬೆಂಗಳೂರು: ನಗರದ ರಾಜೇಶ್ವರಿ ನಗರದಲ್ಲಿ ಹೆಂಡತಿಯನ್ನು ಕೊಂದು ಗಂಡ…