ರಾಹುಲ್ ಗಾಂಧಿ ಅಪ್ರಬುದ್ಧ ನಾಯಕ: ಸಂಸದ ಪ್ರಹ್ಲಾದ್ ಜೋಷಿ
ದೇಶವನ್ನು ವಿಭಜಿಸಿದ ಕಾಂಗ್ರೆಸ್ ನಂತರ ಹಿಂದೂ ಮುಸ್ಲಿಂರನ್ನು ಡಿವೈಡ್ ಮಾಡಿತು. ಸದ್ಯ ಕರ್ನಾಟಕದಲ್ಲಿ ಒಂದು ಸಮಾಜವನ್ನು ಡಿವೈಡ್ ಮಾಡಲು ಹೊರಟಿದೆ ಎಂದು ಸಂಸದ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.
ರಾಹುಲ್ ಗಾಂಧಿ ಅತ್ಯಂತ ಅಪ್ರಬುದ್ಧ ನಾಯಕ. ಅಂಥಹ ಅಪ್ರಬುದ್ದ ನಾಯಕನನ್ನು ಕರೆತಂದು ಪ್ರಚಾರ ಮಾಡಿಸುತ್ತಿದ್ದಾರೆ. ಕೇವಲ ಅಲ್ಪ ಸಂಖ್ಯಾತರ ತುಷ್ಟೀಕರಣಕ್ಕಾಗಿ ಆರೆಸ್ಸೆಸ್ ಅನ್ನು ತೆಗಳುತ್ತಿದ್ದಾರೆ ಎಂದರು.
ರಾಹುಲ್ ಗಾಂಧಿಯವರೇ ನಿಮ್ಮ ಅಜ್ಜ, ಮುತ್ತಜ್ಜ, ನಿಮ್ಮ ತಂದೆ ಕೂಡಾ ಆರೆಸ್ಸೆಸ್ ಅನ್ನು ನಾಶ ಮಾಡಲು ಹೊರಟಿದ್ದರು. ಆದರೆ ಜನರೇ ದೇಶವನ್ನು ಕಾಂಗ್ರೆಸ್ ಮುಕ್ತ ಮಾಡುತ್ತಿದ್ದಾರೆ ಎಂದು ಜೋಷಿ ಹುಬ್ಬಳ್ಳಿಯಲ್ಲಿ ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದರು.
