ಲಾಕ್-ಡೌನ್ –15000 ಸಾವಿರ ಮಂದಿಗೆ ಅನ್ನದಾನ-500 ಕುಟುಂಬಗಳಿಗೆ ಕಿಟ್ ವಿತರಿಸಿದ ಕೊರಂಗ್ರಪಾಡಿ ಶ್ರೀನಿವಾಸ್ ತಂತ್ರಿ ಮಡುಂಬು.VISHWANEWS24

ಲಾಕ್-ಡೌನ್ 15000 ಸಾವಿರ ಮಂದಿಗೆ ಅನ್ನದಾನ-500 ಕುಟುಂಬಗಳಿಗೆ ಕಿಟ್ ವಿತರಿಸಿದ ಕೊರಂಗ್ರಪಾಡಿ ಶ್ರೀನಿವಾಸ್ ತಂತ್ರಿ ಮಡುಂಬು.

ಕಾಪು: ಕೊರೋನಾ ಲಾಕ್-ಡೌನ್ ಸಮಸ್ಯೆಯಿಂದ ಜನರು ಹಸಿವಿನಿಂದ ಉಳಿಯಬಾರದು ಎಂಬ ದೃಷ್ಟಿಯಿಂದ ಸುಮಾರು 18 ದಿನಗಳಿಂದ ಹದಿನೈದು ಸಾವಿರಕ್ಕೂ ಅಧಿಕ ಜನರಿಗೆ ಅನ್ನದಾನ ಮತ್ತು 500 ಕ್ಕೂ ಅಧಿಕ ಕುಟುಂಬಗಳಿಗೆ ಕೊರಂಗ್ರಪಾಡಿ ಶ್ರೀನಿವಾಸ್ ತಂತ್ರಿ ಮಡುಂಬು ಆಹಾರದ ಕಿಟ್ ವಿತರಿಸಿದ್ದಾರೆ. ಕಾಪು ಕಾರ್ಕಳ ಪಾಂಗಾಳ ಇನ್ನಂಜೆ ಮಲ್ಲಾರು ಸೇರಿದಂತೆ ವಿವಿಧ ಭಾಗದ ಜನರಿಗೆ ಪ್ರತಿನಿತ್ಯ ಉತ್ತಮ ಗುಣಮಟ್ಟದ ರುಚಿ ಶುಚಿಯಾದ ಊಟ ತಯಾರಿಸಿ ಹಂಚ್ಚುವ ಕಾರ್ಯ ತಂತ್ರಿಯವರು ಮಾಡುತ್ತಿದ್ದಾರೆ .

ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಭಗವಂತನ ಕಾರ್ಯ ಎಂಬ ನಿಲುವಿನಿಂದ ಯಾವುದೇ ಪ್ರಚಾರದಲ್ಲಿ ಭಾಗಿಯಾಗದೇತನ್ನ ಸೇವೆ ಮುಂದುವರೆಸುತ್ತಿರುವುದು ಶ್ಲಾಘನೀಯವಾಗಿದೆ.

ಪ್ರತಿದಿನ ಊಟ ತಯಾರಿಸುವಲ್ಲಿ ಕಾಪು ಲಕ್ಷ್ಮೀ ಜನಾರ್ಧನ ದೇಗುಲದ ಪಾಕ ತಜ್ಞರಾದ ಶ್ರೀಧರ್ ಭಟ್ ಮತ್ತು ಕೆ.ಪಿ ಶ್ರೀನಿವಾಸ ತಂತ್ರಿಯವ ಧರ್ಮ ಪತ್ನಿ ದೀಕ್ಷಾ ಸೇರಿದಂತೆ ಕುಟುಂಬ ವರ್ಗದವರು ಹಾಗೂ ಶಿಷ್ಯಂದಿರು ಸಹಕಾರ ನೀಡುತ್ತಿದ್ದಾರೆ.

ಈ ಬಗ್ಗೆ ಮಾಧ್ಯಮದ ಜತೆ ಮಾತಾಡಿದ ಅವರು” ಉಡುಪಿ ಅನ್ನಬ್ರಹ್ಮ ಕ್ಷೇತ್ರ ಹಾಗಾಗಿ ನನ್ನ ಗುರುಗಳ ಪ್ರೇರಣೆಯಿಂದ ನಮ್ಮ ಸುತ್ತಾ ಮುತ್ತ ಯಾರು ಕೂಡ ಹಸಿವಿನಿಂದ ಇರಬಾರದು ಹಾಗಾಗಿ ಕೋವಿಡ್೧೯ ನ ಲಾಕ್ ಡೌನ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಪ್ರತಿದಿನ ಅನ್ನದಾನ ಮಾಡುವ ಕಾರ್ಯ ಮಾಡುತ್ತಿದ್ದೇವೆ.ಇದು ಪ್ರಚಾರಕ್ಕಾಗಿ ಅಥಾವ ಹೆಸರಿಗೆ ಮಾಡುವುದಲ್ಲ ಜಾತಿ ಮತ ಭೇಧವಿಲ್ಲದೆ ಹಸಿವು ನೀಗಿಸಲು ಗುರುಗಳ ಮಾರ್ಗದರ್ಶನ ಪ್ರಕಾರ ನಮ್ಮದೊಂದು ಸೇವೆ ಮಾಡುತ್ತಿದ್ದೇವೆ ಅದರ ಜತೆಗೆ ಮಧ್ಯಮ ಮತ್ತು ಬಡ ಕುಟುಂಬಗಳಿಗೆ, ರಿಕ್ಷಾ ಚಾಲಕರಿಗೆ, ಆಹಾರ ಧಾನ್ಯದ ಕಿಟಗ ತಯಾರು ಮಾಡಿ ವಿತರಿಸುವ ಕಾರ್ಯ ನಡೆಯುತ್ತಿದೆ ಇದಕ್ಕೆ ಕೆಲವು ಆತ್ಮೀಯರು ೩೦೦ ಕೇಜಿ ಅಕ್ಕಿಯ ಸಹಕಾರ ಮಾಡಿದ್ದಾರೆ, ವೈಯಕ್ತಿಕವಾಗಿ ಸುಮಾರು ಅಂದಾಜು ಐದು ಲಕ್ಷ ರೂಪಾಯಿ ಖರ್ಚು ಇದುವರೆಗೆ ಆಗಿದೆ ಮುಂದಿನ ದಿನವೂ ಕೂಡ ಇದನ್ನು ಮುಂದುವರೆಸುತ್ತೇವೆ ಮತ್ತು ಇದು ಭಗವಂತನ ಸೇವೆ ಮಾಡುವ ಭಾಗ್ಯ ಎಂದರು.ವಿತರಣೆ ಮತ್ತು ಪ್ಯಾಕ್ ಮಾಡುವಲ್ಲಿ ಉಮೇಶ್ ಪೂಜಾರಿ ಹರೀಶ್ ಸೇರಿದಂತೆ ಗ್ರಾಮದ ಪರಿಸರದ ಯುವಕ ಯುವತಿಯರು ಕೈ ಜೋಡಿಸುತ್ತಿದ್ದಾರೆ.\

 

FACEBOOK VIDEO NEWS

YOUTUBE VIDEO NEWS

Vishwa News 24

Recent Posts

ಮಲ್ಪೆ : ಸೈಂಟ್‌ಮೇರೀಸ್‌ ದ್ವೀಪ ಪ್ರವೇಶ ಹಾಗೂ ಜಲ ಕ್ರೀಡೆಗಳಿಗೆ 4 ತಿಂಗಳ ಕಾಲ ನಿಷೇಧ – vishwanews24

ಮಲ್ಪೆ : ಸೈಂಟ್‌ಮೇರೀಸ್‌ ದ್ವೀಪ ಪ್ರವೇಶ ಹಾಗೂ ಜಲ ಕ್ರೀಡೆಗಳಿಗೆ ಮೇ 16ರಿಂದ ಸೆಪ್ಟೆಂಬರ್15ರ ವರೆಗೆ ಸಂಪೂರ್ಣ ನಿಷೇಧ ಮಲ್ಪೆ:…

22 hours ago

ಜೂನ್‌ 21ರಂದು ನೀಟ್‌ ಯುಜಿ ಮರು ಪರೀಕ್ಷೆ – vishwanews24

ಜೂನ್‌ 21ರಂದು ನೀಟ್‌ ಯುಜಿ ಮರು ಪರೀಕ್ಷೆ ನವದೆಹಲಿ: ಜೂನ್‌ 21 ರಂದು ನೀಟ್‌–ಯುಜಿ  ಮರು ಪರೀಕ್ಷೆ ನಡೆಸಲಾಗುವುದು ರಾಷ್ಟ್ರೀಯ…

22 hours ago

ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ :  ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ – vishwanews24

ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ :  ಪೃಥ್ವಿರಾಜ್…

2 days ago

ಜನಿವಾರ, ಹಿಜಾಬ್, ಉಡುದಾರ, ರುದ್ರಾಕ್ಷಿ ಹಾಕಿಕೊಳ್ಳಬಹುದು ಹೊರತು ಕೇಸರಿ ಶಾಲಿಗೆ ಅವಕಾಶ ಇಲ್ಲ : ಸಿಎಂ ಸ್ಪಷ್ಟನೆ – vishwanews24

ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು, ಹೊಸದಾಗಿ ಮಾಡುವಂತಿಲ್ಲ : ಸಿಎಂ ಸ್ಪಷ್ಟನೆ ಮೈಸೂರು : "ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ…

2 days ago

ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ : ತಮಿಳುನಾಡು ಸರ್ಕಾರ ಆದೇಶ – vishwanews24

ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ :  ಸಿಎಂ ವಿಜಯ್ ಸರ್ಕಾರ ಆದೇಶ ಚೆನ್ನೈ: ಇನ್ನು ಮುಂದೆ…

2 days ago

ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್‌ ರಾಜಣ್ಣ – vishwanews24

ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್‌ ರಾಜಣ್ಣ ನಾನು ಮೋದಿಯವರನ್ನು ಹೊಗಳುತ್ತಿಲ್ಲ.…

2 days ago