ಲೋಕ ಕಲ್ಯಾಣಾರ್ಥ ಮತ್ತು ಸಾನ್ನಿಧ್ಯ ವೃದ್ಧಿಗಾಗಿ ಕಾಪು ಹೊಸ ಮಾರಿಗುಡಿ ದೇವಸ್ಥಾನದಲ್ಲಿ ನವದುರ್ಗಾ ಲೇಖನ ಯಜ್ಞ ಕಾರ್ಯಕ್ರಮ – vishwanews24

Featured, ಉಡುಪಿ

ಲೋಕ ಕಲ್ಯಾಣಾರ್ಥ ಮತ್ತು ಸಾನ್ನಿಧ್ಯ ವೃದ್ಧಿಗಾಗಿ ಕಾಪು ಹೊಸ ಮಾರಿಗುಡಿ ದೇವಸ್ಥಾನದಲ್ಲಿ ನವದುರ್ಗಾ ಲೇಖನ ಯಜ್ಞ ಕಾರ್ಯಕ್ರಮ

ಕಾಪು: ಜೀರ್ಣೋದ್ಧಾರಗೊಳ್ಳುತ್ತಿರುವ ಕಾಪು ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥ ಮತ್ತು ಸಾನ್ನಿಧ್ಯ ವೃದ್ಧಿಗಾಗಿ ನವದುರ್ಗೆಯರ ಹೆಸರಿನೊಂದಿಗೆ ಕಾಪುವಿನ ಅಮ್ಮನ ಹೆಸರನ್ನು ಬರೆಯುವ ನವದುರ್ಗಾ ಲೇಖನ ಯಜ್ಞ ಮಹಾಸಂಕಲಕ್ಕೆ ಶುಕ್ರವಾರ (ಅ.18) ನವ ದಂಪತಿಗಳಿಂದ ನವದುರ್ಗಾ ನಾಮಜಪ ಪಠಣಾರಂಭ ಕಾರ್ಯಕ್ರಮ ಜರುಗಿತು.

ಕ್ಷೇತ್ರದ ಪ್ರಧಾನ ತಂತ್ರಿ ವಿದ್ವಾನ್ ಕೆ.ಪಿ ಕುಮಾರ ಗುರು ತಂತ್ರಿ ನೇತೃತ್ವದಲ್ಲಿ, ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಉಪಸ್ಥಿತಿಯಲ್ಲಿ ಒಂಬತ್ತು ದಂಪತಿಗಳು ಏಕಕಾಲದಲ್ಲಿ ದೀಪ ಬೆಳಗಿ ಪುಷ್ಪಾರ್ಚನೆ ಯೊಂದಿಗೆ ನವದುರ್ಗಾ ನಾಮ ಜಪ ಪಠಣೆ ಪ್ರಾರಂಭಿಸಿದರು. ಪ್ರಾರ್ಥನೆ ನೆರವೇರಿಸಿ ಮಾತನಾಡಿದ ದೇವಳದ ತಂತ್ರಿ, ಶರನ್ನವರಾತ್ರಿ ಮಹೋ ತ್ಸವದ 9ನೇ ದಿನ ಮತ್ತು ಕ್ಷೇತ್ರದಲ್ಲಿ ವಾಗೀಶ್ವರಿ ಮಾತೆಗೆ ನಡೆಯುವ ಪೂಜೆಯಂದೇ ನವ ದಂಪತಿಗಳ ಜತೆಗೆ ಪದಾಧಿಕಾರಿಗಳು, ಸಿಬ್ಬಂದಿ ಮತ್ತು ಭಕ್ತರ ಸಮಕ್ಷಮದಲ್ಲಿ ನವದುರ್ಗಾ ನಾಮ ಜಪ ಪಠಣೆ ಮಾಡಲಾಗಿದೆ, ಅ.28ರ ವರೆಗೆ ನಿತ್ಯ ನಿರಂತರವಾಗಿ ತಾಯಿಯ ಹೆಸರನ್ನು ಪಠಣೆ ಮಾಡಿದರೆ, ಬರೆಯಲು ಅನುಕೂಲವಾಗುತ್ತದೆ ಎಂದರು.

ಬೆಳ್ತಂಗಡಿ: ಪಿಕಪ್ ವಾಹನದಲ್ಲಿ ಅಕ್ರಮ ದನ‌ ಸಾಗಾಟ ;  ಇಬ್ಬರ ಬಂಧನ – vishwanews24

ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯಾ, ಕೋಶಾಧಿಕಾರಿ ಮತ್ತು ದೇವಳದ ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ಮಹಾದಾನಿಗಳು ಮತ್ತು ಆರ್ಗಾನಿಕ್ ಇಂಡಸ್ಟ್ರೀಸ್‌ ಆಡಳಿತ ನಿರ್ದೇಶಕ ಆನಂದ ಎಂ.ಶೆಟ್ಟಿ ತೋನ್ಸೆ, ಮುಂಬಯಿಯ ನ್ಯಾಯವಾದಿ ಮಹೇಶ್ ಕೋಟ್ಯಾನ್, ಸಾಯಿ ರಾಧಾ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಮನೋಹ‌ರ್ ಎಸ್. ಶೆಟ್ಟಿ, ನವದುರ್ಗಾ ಲೇಖನ ಯಜ್ಞ ಸಮಿತಿ ಅಧ್ಯಕ್ಷ ಕೆ. ರಘುಪತಿ ಭಟ್, ಎಸ್‌ಕೆಎಫ್ ಸಂಸ್ಥೆಯ ಆಡಳಿತ ಆಚಾರ್ಯ ನಿರ್ದೇಶಕ ರಾಮಕೃಷ್ಣ ಮೂಡುಬಿದಿರೆ, ದೇವಸ್ಥಾನದ ಪ್ರಬಂಧಕ ಗೋವರ್ಧನ್ ಸೇರಿಗಾರ್ ಸಹಿತ 9 ಜನ ದಂಪತಿ ಸಮೇತರಾಗಿ ದೀಪ ಬೆಳಗಿಸಿ ನವದುರ್ಗಾ ನಾಮಜಪ ಪ್ರಾರಂಭಿಸಿದರು. ಉಪಾಧ್ಯಕ್ಷ ಮಾಧವ ಆರ್. ಪಾಲನ್, ನವದುರ್ಗಾ ಲೇಖನ ಯಜ್ಞ ಸಮಿತಿ ಕೋಶಾಧಿಕಾರಿ ಕೆ. ವಿಶ್ವನಾಥ್, ಆರ್ಥಿಕ ಸಮಿತಿ ಮುಖ್ಯ ಸಂಚಾಲಕ ರತ್ನಾಕರ ಹೆಗ್ಡೆ ಕಲ್ಯಾ ಬೀಡು ಮತ್ತು ರಮೇಶ್ ಶೆಟ್ಟಿ ಕಾಪು ಕೊಲ್ಯ ಉಪಸ್ಥಿತರಿದ್ದರು.

ಉಡುಪಿ: ಸಂತಕಟ್ಟೆಯಲ್ಲಿ ಮತ್ತೋರ್ವ ಅಕ್ರಮ ಬಾಂಗ್ಲಾ ವಲಸಿಗನ ಬಂಧನ – vishwanews24

Leave a Reply