ವಾಣಿಜ್ಯ ಸಿಲಿಂಡರ್ ಸಮಸ್ಯೆ 1 ವಾರದಲ್ಲಿ ಬಗೆಹರಿಯಲಿದೆ  : ಕೆ.ಎಚ್.ಮುನಿಯಪ್ಪ – vishwanews24

Featured, ರಾಜ್ಯ ನ್ಯೂಸ್

ವಾಣಿಜ್ಯ ಸಿಲಿಂಡರ್ ಸಮಸ್ಯೆ 1 ವಾರದಲ್ಲಿ ಬಗೆಹರಿಯಲಿದೆ..

ಮನೆಗೊಂದು ಸಿಲಿಂಡರ್ ನೀಡಲು ಯಾವುದೇ ಅಡ್ಡಿಯಿಲ್ಲ , ಹೆಚ್ಚಿನ ಸಿಲಿಂಡರ್ ದಾಸ್ತಾನು ಬೇಡ..

ಕಾನೂನು ಬದ್ಧವಾಗಿ ಸಾರ್ವಜನಿಕರಿಗೆ ಸಿಲಿಂಡರ್ ನೀಡುವ ಕೆಲಸವನ್ನು ಸರ್ಕಾರ ಮಾಡಲಿದೆ..: ಕೆ.ಎಚ್.ಮುನಿಯಪ್ಪ

ವಿಧಾನ ಪರಿಷತ್: ರಾಜ್ಯದ ಸ್ಥಳೀಯ ಮಟ್ಟದಲ್ಲಿ ಗೃಹಬಳಕೆ (ಎಲ್‌ಪಿಜಿ) ಅನಿಲದ ಕೊರತೆಯಿಲ್ಲ. ಆದರೆ, ವಾಣಿಜ್ಯ ಬಳಕೆ ಕ್ಷೇತ್ರದಲ್ಲಿ ಕಂಡುಬಂದಿರುವ ಸಿಲಿಂಡರ್ ಸಮಸ್ಯೆ 1 ವಾರದಲ್ಲಿ ಬಗೆಹರಿಯಲಿದೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ವಿಶ್ವಾಸ ವ್ಯಕ್ತಪಡಿಸಿದರು.\

ಅಡುಗೆ ಅನಿಲ ಅಭಾವ ಕುರಿತ ಚರ್ಚೆ ನಡೆದ ಬಳಿಕ ಉತ್ತರಿಸಿದ ಅವರು, ಈಗಾಗಲೇ ಸಿಲಿಂಡರ್ ಪೂರೈಕೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ. ಈ ಮಧ್ಯೆ ಹೋಟೆಲ್‌ಗಳಿಗೂ ವಾಣಿಜ್ಯ ಸಿಲಿಂಡರ್ ಪೂರೈಕೆ ಮಾಡುವ ಕುರಿತಂತೆ ಶುಕ್ರವಾರ ತೈಲ ಕಂಪನಿಗಳ ಜತೆ ಸಭೆ ನಡೆಸುತ್ತೇನೆ. ಯಾವ ರೀತಿಯಲ್ಲಿ ಈ ಸಮಸ್ಯೆ ಪರಿಹಾರ ಕಂಡುಕೊಳ್ಳಬಹುದು ಎಂಬ ಬಗ್ಗೆ ಚರ್ಚೆ ನಡೆಸಿ, ಆ ನಂತರ ಹೋಟೆಲ್ ಉದ್ಯಮದರ ಜತೆಗೂ ಸಮಾಲೋಚನೆ ನಡೆಸುತ್ತೇನೆ. ಬಳಿಕ ಈ ಬಗ್ಗೆ ಸದನಕ್ಕೆ ಮಾಹಿತಿ ನೀಡುವುದಾಗಿ ಹೇಳಿದರು.

ಇದನ್ನೂ ಓದಿ:👇

ಕರ್ನಾಟಕ ಮಾದರಿ ಅನುಸರಿಸಿ ಅಸ್ಸಾಂ ಚುನಾವಣೆ ಗೆಲ್ಲುತ್ತೀರಿ ಎಂದು AI ಹೇಳುತ್ತದೆ : ಬಿಜೆಪಿ ಕಾಲೆಳೆದ ಡಿಸಿಎಂ – vishwanews24

ಯುದ್ಧದಿಂದಾಗಿ ಈ ಸ್ಥಿತಿ ನಿರ್ಮಾಣವಾಗಿದೆ. ನಾನು ಕೇಂದ್ರ ಸಚಿವನಾಗಿ ಕೆಲಸ ಮಾಡಿದ್ದೇನೆ. ನನಗಿರುವ ಅನುಭವದಂತೆ ಶೇ.30ರಷ್ಟು ಅನಿಲ ಭಾರತದಲ್ಲಿ ಉತ್ಪತ್ತಿಯಾಗುತ್ತಿದೆ. ಉಳಿದೆ ಶೇ.70ರಷ್ಟು ಹೊರದೇಶಗಳ ಮೇಲೆ ಅವಲಂಬಿತರಾಗಿದ್ದೇವೆ. ಸ್ಥಳೀಯ ಮಟ್ಟದಲ್ಲಿ ಬೇಕಾಗುವ ಎಲ್‌ಪಿಜಿ ಗ್ಯಾಸ್ ಭಾರತದಲ್ಲೇ ಉತ್ಪಾದನೆ ಆಗುತ್ತದೆ. ಹೀಗಾಗಿ, ಅಡುಗೆ ಅನಿಲ ಕೊರತೆ ಉಂಟಾಗುವುದಿಲ್ಲ ಎಂದು ಭರವಸೆ ನೀಡಿದರು.

ಈಗಾಗಲೇ ಇರಾನ್ ದೇಶ ಹರ್ಮಜ್ ಮಾರ್ಗದ ಮೂಲಕ ಭಾರತಕ್ಕೆ ಅನಿಲ ಪೂರೈಸಲು ಅನುಮತಿ ನೀಡಿದೆ. 2 ಹಡಗುಗಳು ಭಾರತದತ್ತ ಪಯಣಿಸಿ ಮುಂಬೈ ಬಂದು ಸೇರಲಿವೆ. ಹೀಗಾಗಿ ಅನಿಲ ಸಿಲಿಂಡರ್ ಪೂರೈಕೆ ಬಗ್ಗೆ ಆತಂಕ ಬೇಡ. 10 ದಿನಗಳಿಗೆ ಬೇಕಾಗುವ ದಾಸ್ತಾನು ನಮ್ಮಲ್ಲಿದೆ. ಮನೆಗೊಂದು ಸಿಲಿಂಡರ್ ನೀಡಲು ಯಾವುದೇ ಅಡ್ಡಿಯಿಲ್ಲ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಿಲಿಂಡರ್ ದಾಸ್ತಾನು ಮಾಡಲು ಮುಂದಾಗಬಾರದು ಎಂದು
ಹೇಳಿದರು.

ಇದನ್ನೂ ಓದಿ:👇

ರಾಜ್ಯದಲ್ಲಿ ಪ್ರತಿ ಜಿಲ್ಲೆಗೂ ಒಂದು ಸರಕಾರಿ ವೈದ್ಯಕೀಯ ಕಾಲೇಜು : ಸಚಿವರ ಭರವಸೆ – vishwanews24

ಆರೋಗ್ಯ ಮತ್ತು ಶಾಲೆಗಳಿಗೆ ಸಿಲಿಂಡರ್ ನೀಡುವುದಕ್ಕೆ ಸರ್ಕಾರ ಆದ್ಯತೆ ನೀಡಿದೆ. ಹೋಟೆಲ್ ಮತ್ತು ಕಲ್ಯಾಣ ಮಂಟಪಗಳ ಶುಭ ಕಾರ್ಯಕ್ರಮಕ್ಕೂ ವಾಣಿಜ್ಯ ಅನಿಲ ಪೂರೈಕೆ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದರು.

ಆರೋಗ್ಯ ಮತ್ತು ಶಾಲೆಗಳಿಗೆ ಸಿಲಿಂಡರ್ ನೀಡುವುದಕ್ಕೆ ಸರ್ಕಾರ ಆದ್ಯತೆ ನೀಡಿದೆ. ಯಾವುದೇ ಕೊರತೆಯಾಗದಂತೆ ಆರೋಗ್ಯ ಕ್ಷೇತ್ರಕ್ಕೆ ಅನಿಲ ಪೂರೈಕೆ ಮಾಡಲಾಗುವುದು. ಹೋಟೆಲ್ ಮತ್ತು ಕಲ್ಯಾಣ ಮಂಟಪಗಳ ಶುಭ ಕಾರ್ಯಕ್ರಮಕ್ಕೂ ವಾಣಿಜ್ಯ ಅನಿಲ ಪೂರೈಕೆ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು. ಕಾಳಸಂತೆಯಲ್ಲಿ ಸಿಲಿಂಡರ್ ಗಳ ಮಾರಾಟ ಮಾಡಿದರೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು. ಇದಕ್ಕೂ ನಡೆದ ಚರ್ಚೆಯಲ್ಲಿ ಕಾಂಗ್ರೆಸ್ ನ ಐವಾನ್ ಡಿಸೋಜ, ನಾಗರಾಜ್ ಮತ್ತಿತರರು ಈ ಬಿಕ್ಕಟ್ಟಿಗೆ ಕೇಂದ್ರ ಸರ್ಕಾರ ಕಾರಣ ಎಂದು ವಾಗ್ದಾಳಿ ನಡೆಸಿದರು.
ಕೆಲವರು ಆತಂಕಗೊಂಡು ವಿನಾಕಾರಣ ಸಿಲಿಂಡರ್ ಬುಕ್ ಮಾಡಿ ಸಂಗ್ರಹಿಸಲು ಮುಂದಾಗಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಿಲಿಂಡರ್‌ ದಾಸ್ತಾನು ಮಾಡಲು ಮುಂದಾಗಬಾರದು. ಕಾನೂನು ಬದ್ಧವಾಗಿ ಸಾರ್ವಜನಿಕರಿಗೆ ಸಿಲಿಂಡರ್ ನೀಡುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದರು.

ಇದನ್ನೂ ಓದಿ:👇

ಮುಟ್ಟಿನ ರಜೆಗಾಗಿ ಕಡ್ಡಾಯ ಕಾನೂನು ತರಬೇಕು ಎಂಬ ಬೇಡಿಕೆ ತಿರಸ್ಕರಿಸಿದ ಸುಪ್ರೀಂ – vishwanews24

Leave a Reply