ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ಫೈಟ್ : ಬಿಜೆಪಿಯಿಂದ 5 ಆಕಾಂಕ್ಷಿಗಳು ..! vishwanews24
ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ಫೈಟ್ : ಬಿಜೆಪಿಯಿಂದ 5 ಆಕಾಂಕ್ಷಿಗಳು ; ಟಿಕೆಟ್ ಯಾರಿಗೆ?
ಮಂಗಳೂರು / ಉಡುಪಿ : ಇರುವ ಒಂದು ಸ್ಥಾನಕ್ಕೆ ಐವರು ಬಿಜೆಪಿ ನಾಯಕರಲ್ಲಿ ಟಿಕೆಟ್ ಪೈಪೋಟಿ ಆರಂಭವಾಗಿದೆ. ಉಡುಪಿ – ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿಯವರಿಂದ ತೆರವಾಗಿರುವ ವಿಧಾನ ಪರಿಷತ್ ಉಪ ಚುನಾವಣೆಗೆ ವೇದಿಕೆ ಸಿದ್ದವಾಗುತ್ತಿದೆ.

ಬಿಜೆಪಿಯಿಂದ ಅಭ್ಯರ್ಥಿ ಯಾರು ಎನ್ನುವ ಕುತೂಹಲ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ನಾಯಕರಿಗೆ ಹೆಚ್ಚಾಗುತ್ತಿದೆ. ಈಗಾಗಲೇ, ಮಾಜಿ ಸಿಎಂ ಮತ್ತು ಹಾವೇರಿ ಸಂಸದ ಬಸವರಾಜ ಬೊಮ್ಮಾಯಿಯವರು, ಅವಳಿ ಜಿಲ್ಲೆಯ ನಾಯಕರು/ಶಾಸಕರು/ಕಾರ್ಯಕರ್ತರಿಂದ ಅಭಿಪ್ರಾಯವನ್ನು ಸಂಗ್ರಹಿಸಿದ್ದಾರೆ.
ಬಹುತೇಕ ಸೆಪ್ಟಂಬರ್ 29ನೇ ತಾರೀಕಿನೊಳಗೆ ಅಭ್ಯರ್ಥಿ ಆಯ್ಕೆ ಅಂತಿಮ ಆಗಬಹುದು. ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಐವರು ಬಿಜೆಪಿ ನಾಯಕರಿದ್ದಾರೆ. ಆದರೆ, ರಾಜ್ಯ ಕಳುಹಿಸುವ ಕೊಡುವ ಶಿಫಾರಸು ಪಟ್ಟಿಯನ್ನು, ಬಿಜೆಪಿ ಹೈಕಮಾಂಡ್ ಬಹುತೇಕ ಪಕ್ಕಕ್ಕೆ ಇಟ್ಟ ಉದಾಹರಣೆಗಳು ಇರುವುದರಿಂದ, ದೆಹಲಿಯ ಆಯ್ಕೆ ಯಾವುದು ಎನ್ನುವ ಭಯವೂ ಆಕಾಂಕ್ಷಿಗಳಲ್ಲಿದೆ.
ನಳಿನ್ ಕುಮಾರ್ ಕಟೀಲ್
ಪ್ರಮೋದ್ ಮಧ್ವರಾಜ್

ಸುರೇಶ್ ಕುಂಪಲ

ಉದಯ್ ಕುಮಾರ್ ಶೆಟ್ಟಿ
ವಿಕಾಸ್ ಪುತ್ತೂರು

ಬಿಜೆಪಿಯಿಂದ 15 ಆಕಾಂಕ್ಷಿಗಳು: ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಪ್ರಮೋದ್ ಮಧ್ವರಾಜ್, ಉದಯಕುಮಾರ್ ಶೆಟ್ಟಿ, ಸತೀಶ್ ಕುಂಪಲ ಸೇರಿದಂತೆ 15 ಮಂದಿ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಈ ಆಕಾಂಕ್ಷಿಗಳ ಹೆಸರನ್ನು ಹೈಕಮಾಂಡ್ಗೆ ಕಳುಹಿಸಿ ಕೊಡಲಾಗಿದ್ದು, ಟಿಕೆಟ್ ಯಾರಿಗೆ ಸಿಗಲಿದೆ ಎಂಬ ಕುತೂಹಲ ಮೂಡಿದೆ.
ಮುಡಾ ಹಗರಣ : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲು – vishwanews24
