ವಿಧಾನ ಸಭೆ ಚುನಾವಣೆಗೆ ನಾನು ಸ್ಪರ್ಧೆ ಮಾಡುತ್ತಿಲ್ಲʼ: ನಟ ಕಿಚ್ಚ ಸುದೀಪ್ ಸ್ಪಷ್ಟನೆ – Vishwanews24
ಬೆದರಿಕೆಗಳಿಗೆ ನಾನು ಯಾವುದೆ ಕಾರಣಕ್ಕೂ ಹೆದರುವುದಿಲ್ಲ: ನಟ ಕಿಚ್ಚ ಸುದೀಪ್
ಬೆಂಗಳೂರು : ನಟ ಕಿಚ್ಚ ಸುದೀಪ್ ಬಿಜೆಪಿ ಪಕ್ಷ ಸೇರ್ಪಡೆ ವಿಚಾರ ಮಾಹಿತಿ ಹರಿದಾಡುತ್ತಿದಂತೆ ಮಾಧ್ಯಮಗಳಿಗೆ ಕಿಚ್ಚ ಸುದೀಪ್ ಸ್ಪಷ್ಟನೆ ನೀಡಿದ್ದು, ‘ವಿಧಾನ ಸಭೆ ಚುನಾವಣೆಗೆ ನಾನು ಸ್ಪರ್ಧೆ ಮಾಡುತ್ತಿಲ್ಲ’ ಎಂದಿದ್ದಾರೆ
ರಾಜ್ಯದೆಲ್ಲೆಡೆ ವಿಧಾನ ಸಭೆ ಚುನಾವಣೆಗೆ ರಣತಂತ್ರ ರೂಪಿಸುತ್ತಿದ್ದ ಬೆನ್ನಲ್ಲೆ ಕಿಚ್ಚ ಸುದೀಪ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ. ಈ ಬೆನ್ನಲ್ಲೆ ಮಾಧ್ಯಮಗಳಿಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದು, ವಿಧಾನ ಸಭೆ ಚುನಾವಣೆಗೆ ನಾನು ಸ್ಪರ್ಧೆ ಮಾಡುತ್ತಿಲ್ಲ. ಸಿಎಂ ಸುದ್ದಿಗೋಷ್ಟಿಗೆ ಹೋಗ್ತಿರೋದು ಸತ್ಯ. ಸುದ್ದಿಗೋಷ್ಟಿಯಲ್ಲೇ ಎಲ್ಲದಕ್ಕೂ ಮಾಹಿತಿ ನೀಡುತ್ತೇನೆ. ಯಾರ ಪರನೂ ಟಕೆಟ್ ಕೇಲಿಲ್ಲ ಪಕ್ಷದಿಂದ ಟಿಕೆಟ್ ಕೊಡಿಸುವಷ್ಟು ದೊಡ್ಡವಲ್ಲ. ನಮ್ಮವರಿಗೋಸ್ಟರ ಕೆಲ ನಿಲುವು ತೆಗೆದುಕೊಳ್ಳಬೇಕಾಗುತ್ತದೆ ನಟ ಕಿಚ್ಚ ಸುದೀಪ್ ಸ್ಪಷ್ಟನೆ ನೀಡಿದ್ದಾರೆ. ಅನಾಮಧೇಯ ವ್ಯಕ್ತಿಯಿಂದ ಬೆದರಿಕೆಗಳಿಗೆ ನಾನು ಯಾವುದೆ ಕಾರಣಕ್ಕೂ ಹೆದರುವುದಿಲ್ಲ ಎಂದಿದ್ದಾರೆ.
