ಉಡುಪಿ: ಇಲ್ಲಿನ ಶಿರೂರು ಮಠಾಧೀಶ ಲಕ್ಷ್ಮೀವರ ತೀರ್ಥ ಸ್ವಾಮೀಜಿ ತನ್ನ ಜನ್ಮ ನಕ್ಷತ್ರವನ್ನು ವಿಭಿನ್ನವಾಗಿ ಆಚರಿಸಿಕೊಂಡರು. ವಿಶ್ವದ ಖ್ಯಾತ ಡ್ರಮ್ಮರ್ ಶಿವಮಣಿ ಮಠಕ್ಕೆ ಬಂದು ಸ್ವಾಮೀಜಿಯ ಜನ್ಮನಕ್ಷತ್ರದಲ್ಲಿ ಪಾಲ್ಗೊಂಡರು.
ಉಡುಪಿಯ ಕೃಷ್ಣಮಠದ ಅಧೀನದಲ್ಲಿರುವ ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರು ಧಾರ್ಮಿಕ ಕಾರ್ಯಕ್ರಮದ ಜೊತೆ ಸಾಂಸ್ಕೃತಿಕವಾಗಿಯೂ ತೊಡಗಿಸಿಕೊಂಡವರು. ಈ ಬಾರಿಯ ತನ್ನ ಹುಟ್ಟು ಹಬ್ಬವನ್ನು ವಿಭಿನ್ನವಾಗಿ ಆಚರಿಸಿಕೊಂಡರು. ಡ್ರಮ್ಸ್ ಮಾಂತ್ರಿಕ ಶಿವಮಣಿಯೇ ಮಠಕ್ಕೆ ಬಂದು ಮುಖ್ಯಪ್ರಾಣ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಸ್ವಾಮೀಜಿಗೆ ಅಮೆರಿಕದಿಂದ ತಂದ ವಾಚನ್ನು ಗಿಫ್ಟ್ ಮಾಡಿದ್ರು. ಶಿರೂರು ಮಠದ ಆವರಣದಲ್ಲಿ ಶಿವಮಣಿಯ ನೇತೃತ್ವದಲ್ಲಿ ಆರಂಭವಾಗಲಿರುವ ಡ್ರಮ್ಸ್ ತರಬೇತಿ ಕೊಡುವ ಗುರುಕುಲಕ್ಕೆ ಅಡಿಗಲ್ಲು ಹಾಕಿದ್ದಾರೆ.
https://www.facebook.com/VishwaNews24/ https://twitter.com/vishwanews24
ಮಠಕ್ಕೆ ಆಗಮಿಸಿದ ಶಿವಮಣಿ ಸುಮಾರು ಅರ್ಧಗಂಟೆಗಳ ಕಾಲ ಡ್ರಮ್ಸ್ ಬಾರಿಸಿದರು. ಭಾರತದ ಹಲವು ರಾಜ್ಯಗಳ ಬೀಟ್ಗಳನ್ನು ನುಡಿಸಿದರು. ಶಿರೂರು ಸ್ವಾಮೀಜಿ ಶಿವಮಣಿಯ ಬೀಟ್ ಗೆ ಸಾಥ್ ನೀಡಿದರು. ಸ್ವಾಮೀಜಿಗೆ ಶಿವಮಣಿ ಶುಭಕೋರಿದರು. ಆಂಜನೇಯನ ಸನ್ನಿಧಿಯಲ್ಲಿ ಕಲಾ ಪ್ರದರ್ಶನ ಮಾಡಿದ್ದು ಪುಣ್ಯದ ಕೆಲಸ ಅಂತ ಹೇಳಿದರು.
ಶಿರೂರು ಮಠದ ಪಿಯು ಕಾಲೇಜು, ಗೋಶಾಲೆಗೆ ಇದೇ ಸಂದರ್ಭದಲ್ಲಿ ಶಂಕುಸ್ಥಾಪನೆ ಮಾಡಲಾಯ್ತು. ಉಡುಪಿಯ ಸಂವೇದನಾ ಫೌಂಡೇಶನ್ಗೆ ಶಿರೂರು ಮಠದ 13 ಎಕ್ರೆ ಜಮೀನನ್ನು ಕಾಡು ಬೆಳೆಸಲು ದಾನ ನೀಡಿದರು. ಈ ಜಮೀನಿನಲ್ಲಿ ಹಣ್ಣುಹಂಪಲುವಿನ ಗಿಡಗಳು, ಮರಗಳನ್ನು ಬೆಳೆಸಲಾಗುತ್ತದೆ.
ಶಿವಮಣಿಯ ಹುಟ್ಟುಹಬ್ಬಕ್ಕೆ ಉಡುಪಿ ಕೃಷ್ಣಮಠ, ಕೊಲ್ಲೂರು ಮೂಕಾಂಬಿಕೆಯ ಕ್ಷೇತ್ರಕ್ಕೆ ಶಿವಮಣಿ ಭೇಟಿಕೊಟ್ಟು ಸಂಗೀತ ಸೇವೆ ನೀಡುತ್ತಾರೆ. ಈ ಬಾರಿ ಶಿರೂರು ಸ್ವಾಮೀಜಿಯ ಹುಟ್ಟುಹಬ್ಬಕ್ಕೆ ಶಿವಮಣಿ ಬಂದರು. ಶಿರೂರು ನೂರಾರು ಮಂದಿ ಶಿವಮಣಿಯ ಡ್ರಮ್ಸ್ ವಾದನ ಕಣ್ತುಂಬಿಕೊಂಡರು.
ಮಲ್ಪೆ : ಸೈಂಟ್ಮೇರೀಸ್ ದ್ವೀಪ ಪ್ರವೇಶ ಹಾಗೂ ಜಲ ಕ್ರೀಡೆಗಳಿಗೆ ಮೇ 16ರಿಂದ ಸೆಪ್ಟೆಂಬರ್15ರ ವರೆಗೆ ಸಂಪೂರ್ಣ ನಿಷೇಧ ಮಲ್ಪೆ:…
ಜೂನ್ 21ರಂದು ನೀಟ್ ಯುಜಿ ಮರು ಪರೀಕ್ಷೆ ನವದೆಹಲಿ: ಜೂನ್ 21 ರಂದು ನೀಟ್–ಯುಜಿ ಮರು ಪರೀಕ್ಷೆ ನಡೆಸಲಾಗುವುದು ರಾಷ್ಟ್ರೀಯ…
ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ : ಪೃಥ್ವಿರಾಜ್…
ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು, ಹೊಸದಾಗಿ ಮಾಡುವಂತಿಲ್ಲ : ಸಿಎಂ ಸ್ಪಷ್ಟನೆ ಮೈಸೂರು : "ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ…
ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ : ಸಿಎಂ ವಿಜಯ್ ಸರ್ಕಾರ ಆದೇಶ ಚೆನ್ನೈ: ಇನ್ನು ಮುಂದೆ…
ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್ ರಾಜಣ್ಣ ನಾನು ಮೋದಿಯವರನ್ನು ಹೊಗಳುತ್ತಿಲ್ಲ.…