ಶಿರ್ವ: ಅನಾರೋಗ್ಯ ಪೀಡಿತ ಬಾಲಕನಿಗೆ ಬೇಕಿದೆ ನೆರವಿನ ಹಸ್ತ – vishwanews24

Featured, ಉಡುಪಿ

ಶಿರ್ವ: ಅನಾರೋಗ್ಯ ಪೀಡಿತ ಬಾಲಕನಿಗೆ ಬೇಕಿದೆ ನೆರವಿನ ಹಸ್ತ

ಶಿರ್ವ : ಹಲವು ವರ್ಷಗಳಿಂದ ಅನಾರೋಗ್ಯ ಪೀಡಿತನಾಗಿ ಹಾಸಿಗೆ ಹಿಡಿದಿರುವ ಬಡ ಕುಟುಂಬದ ಶಿರ್ವ ಗ್ರಾಮದ ಮಟ್ಟಾರು ಕಡಂಬು ನಿವಾಸಿ ಅರುಣ್ ಕುಮಾರ್ ಅವರ ಪುತ್ರ 16ರ ಹರೆಯದ ಬಾಲಕ ದೀಶಿತ್ ಕುಮಾರ್ ಅವರಿಗೆ ಸಹೃದಯರ ಸಹಾಯಹಸ್ತ ಬೇಕಿದೆ. ದೀಶಿತ್ ಕುಮಾರ್ ಅಪಸ್ತಾರ (Epilepsy) ಕಾಯಿಲೆಯಿ೦ದ ಬಳಲುತ್ತಿದ್ದು, ಊರವರು ಮತ್ತು ಹಿತೈಷಿಗಳ ಸಹಾಯದಿಂದ ಬಾಲಕನಿಗೆ ಮಣಿಪಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು ಇನ್ನೂ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ.

ಬೆಂಗಳೂರು :ಮಹಾಲಕ್ಷ್ಮೀ ಕೊಲೆ ಪ್ರಕರಣ – ಕೊಲೆಗಾರ ಯಾರೆಂದು ಗೊತ್ತಾಗಿದೆ, ಶೀಘ್ರದಲ್ಲೇ ಬಂಧಿಸಲಾಗುವುದು : ಪೊಲೀಸ್​ ಕಮಿಷನರ್ – vishwanews24

ಹೆತ್ತವರಿಗೆ ಯಾವುದೇ ಸಂಪಾದನೆಯ ಮೂಲವಿಲ್ಲದೆ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದ ಕಾರಣ ಆಸ್ಪತ್ರೆಯ ಚಿಕಿತ್ಸೆ ವೆಚ್ಚ ಭರಿಸಲಾಗದೆ ಮನೆಯಲ್ಲಿಯೇ ಹಾಸಿಗೆ ಹಿಡಿದಿದ್ದಾನೆ. ಬೆಂಗಳೂರಿನ ಹೆಲ್ತ್‌ ಕೇರ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯ ಡಾ| ರಾಘವೇಂದ್ರ ಎಸ್.ಸುಮಾರು 11 ಲ.ರೂಗಳ ಅಗತ್ಯವಿದೆ ಎಂದು ತಿಳಿಸಿದ್ದು ಹೆತ್ತವರು ಚಿಕಿತ್ಸೆಯ ವೆಚ್ಚ ಭರಿಸುವ ಸ್ಥಿತಿಯಲ್ಲಿಲ್ಲ. ಬಾಲಕನ ತಂದೆ ಅರುಣ್ ಕುಮಾರ್ ಕೂಡಾ ಅಂಗವಿಕಲನಾಗಿದ್ದು, ಈಗಾಗಲೇ ಮಗನ ಚಿಕಿತ್ಸೆಗಾಗಿ ಸಾಲ ಮಾಡಿ ಹಲವಾರು ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಬಡ ಕುಟುಂಬದ ಜೀವನ ನಿರ್ವಹಣೆಯೂ ಸೇರಿದಂತೆ ಬಾಲಕನ ಚಿಕಿತ್ಸೆಗಾಗಿ ದಾನಿಗಳ ನೆರವಿನ ಅಗತ್ಯವಿದೆ.

ಕುಟುಂಬಕ್ಕೆ ಬಡ ಅಸಹಾಯಕ ಸಹಾಯ ಮಾಡಲಿಚ್ಚಿಸುವವರು ದೀಶಿತ್ ಕುಮಾರ್ ಕುಮಾರ್ ಅವರ ತಂದೆ ಅರುಣ್ ಕುಮಾರ್ ಅವರ ಶಿರ್ವ ಬ್ಯಾಂಕ್ ಆಫ್ ಬರೋಡಾ ಶಾಖೆಯ ಎಸ್.ಬಿ.ಖಾತೆ 81800100001057 (ISFC code BARBOVISHUD) ನಂಬ್ರಕ್ಕೆ ಜಮಾ ಮಾಡಬಹುದಾಗಿದೆ.

ಉಡುಪಿ: ತಿರುಪತಿ ಲಡ್ಡು ವಿವಾದ : ಪ್ರಧಾನಿ ಮೌನವಾಗಿರುವುದು ಅನುಮಾನಗಳನ್ನು ಹುಟ್ಟುಹಾಕುತ್ತದೆ : ತನಿಖೆಗೆ ರಮೇಶ್ ಕಾಂಚನ್ ಆಗ್ರಹ – vishwanews24

Leave a Reply